University Of Agriculture Science: ದೇಶಾದ್ಯಂತ 3-6 ಲಕ್ಷ ಉದ್ಯೋಗಾವಕಾಶ ಕೊಡೋ ಕೋರ್ಸ್ ಈಗ ಮೈಸೂರಲ್ಲಿ; ಈ ವಿಷಯ ಕಲಿತರೆ 15 ಲಕ್ಷದ ಪ್ಯಾಕೇಜ್‌ ಪಕ್ಕಾ, ಅದು ನಿಮ್ಮೂರಲ್ಲೇ! | | ACTPnews

University Of Agriculture Science: ದೇಶಾದ್ಯಂತ 3-6 ಲಕ್ಷ ಉದ್ಯೋಗಾವಕಾಶ ಕೊಡೋ ಕೋರ್ಸ್ ಈಗ ಮೈಸೂರಲ್ಲಿ; ಈ ವಿಷಯ ಕಲಿತರೆ 15 ಲಕ್ಷದ ಪ್ಯಾಕೇಜ್‌ ಪಕ್ಕಾ, ಅದು ನಿಮ್ಮೂರಲ್ಲೇ! |


2026-27ನೇ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ‘ಬಿಎಸ್ಸಿ (ಆನರ್ಸ್) ಅಗ್ರಿಕಲ್ಚರ್ ಇನ್ ನ್ಯಾಚುರಲ್ ಫಾರ್ಮಿಂಗ್’ ಪದವಿ ಕೋರ್ಸ್ ಆರಂಭಿಸಲಾಗುತ್ತಿದ್ದು, ಇದರೊಂದಿಗೆ ರೈತರು, ಗ್ರಾಮೀಣ ಯುವಕರು ಹಾಗೂ ಉದ್ಯಮಿಗಳಿಗಾಗಿ ನಾಲ್ಕು ಹೊಸ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ಪರಿಚಯಿಸಲಾಗುತ್ತಿದೆ.

ಏಕೆ ಈ ಹೊಸ ಕೋರ್ಸ್?

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಆಹಾರದ ಗುಣಮಟ್ಟ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.

ಈ ಹಿನ್ನೆಲೆ, ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಪರಿಣಿತ ವೃತ್ತಿಪರರನ್ನು ರೂಪಿಸುವ ಉದ್ದೇಶದಿಂದ ಈ ಹೊಸ ಪದವಿ ಕೋರ್ಸ್ ರೂಪಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಅವರು ಹೇಳುವಂತೆ, ಈ ಕೋರ್ಸ್ ಅನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಶಿಫಾರಸುಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ಕೋರ್ಸ್‌ಗೆ ವರ್ಷಕ್ಕೆ 60 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ.

ಪ್ರವೇಶವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಿಇಟಿ (CET) ಮೂಲಕ ನಡೆಯಲಿದೆ.

ಅರ್ಜಿ ಸಲ್ಲಿಸಲು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (PCMB) ವಿಷಯಗಳೊಂದಿಗೆ ಪಿಯುಸಿ ಪೂರ್ಣಗೊಳಿಸಿರಬೇಕು.

ಈ ಕೋರ್ಸ್‌ನಲ್ಲಿ ಏನೆಲ್ಲ ಕಲಿಸಲಾಗುತ್ತದೆ?

ಇದು ಸಾಂಪ್ರದಾಯಿಕ ಕೃಷಿ ಶಿಕ್ಷಣಕ್ಕಿಂತ ಭಿನ್ನವಾಗಿದ್ದು, ಸಂಪೂರ್ಣವಾಗಿ ನೈಸರ್ಗಿಕ ಹಾಗೂ ಸುಸ್ಥಿರ ಕೃಷಿಯ ಮೇಲೆ ಕೇಂದ್ರೀಕೃತವಾಗಿದೆ.

  1. ನೈಸರ್ಗಿಕ ಮತ್ತು ಸಾವಯವ ಕೃಷಿ ವಿಧಾನಗಳು
  2. ಜೈವಿಕ ಕೀಟ ನಿಯಂತ್ರಣ (Bio-control)
  3. ನೈಸರ್ಗಿಕ ಕೀಟನಾಶಕ ತಯಾರಿಕೆ
  4. ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ
  5. ಪ್ರಿಸಿಷನ್ ಅಗ್ರಿಕಲ್ಚರ್ ಕೃತಕ ಬುದ್ಧಿಮತ್ತೆ (AI)
  6. ಇಂಟರ್ನೆಟ್ ಆಫ್ ಥಿಂಗ್ಸ್ (IoT)
  7. ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ

ಇದರಿಂದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕೃಷಿ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನ ಎರಡನ್ನೂ ಒಟ್ಟಿಗೆ ಕಲಿಯುವ ಅವಕಾಶ ಪಡೆಯಲಿದ್ದಾರೆ.

SSLC ಬಳಿಕವೂ ಹೊಸ ಅವಕಾಶ

ಪದವಿ ಕೋರ್ಸ್ ಜೊತೆಗೆ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದವರಿಗೆ ನಾಲ್ಕು ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕೂಡ ಆರಂಭಿಸಲಾಗುತ್ತಿದೆ.

ಅವುಗಳೆಂದರೆ:

  1. ನೈಸರ್ಗಿಕ ಕೃಷಿ (ದೂರ ಶಿಕ್ಷಣ ಮಾದರಿಯಲ್ಲಿ, ಅಲ್ಪಾವಧಿ ಸಂಪರ್ಕ ತರಗತಿಗಳೊಂದಿಗೆ)
  2. ಕೃಷಿ ಉಪಕರಣಗಳ ದುರಸ್ತಿ ಮತ್ತು ನಿರ್ವಹಣೆ
  3. ಜೇನು ಸಾಕಣೆ (Apiculture)
  4. ಕೃಷಿ ಅರಣ್ಯ ಪದ್ಧತಿ (Agroforestry)
ರೈತರು ಮತ್ತು ಗ್ರಾಮೀಣ ಯುವಕರಿಗೆ ಹೇಗೆ ನೆರವಾಗಲಿದೆ?

ಈ ಸರ್ಟಿಫಿಕೇಟ್ ಕೋರ್ಸ್‌ಗಳ ಮುಖ್ಯ ಉದ್ದೇಶ ರೈತರು, ಗ್ರಾಮೀಣ ಯುವಕರು ಹಾಗೂ ಕೃಷಿ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಬಯಸುವವರಿಗೆ ಪ್ರಾಯೋಗಿಕ ಕೌಶಲ್ಯ ನೀಡುವುದಾಗಿದೆ.

ಇದರ ಮೂಲಕ ಕೃಷಿಯಲ್ಲಿ ಹೊಸ ಉದ್ಯಮ ಆರಂಭಿಸಲು, ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವಾಗಲಿದೆ ಎಂದು ವಿಶ್ವವಿದ್ಯಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಭವಿಷ್ಯದ ಕೃಷಿಗೆ ಹೊಸ ದಿಕ್ಕು

ಈ ಹಿನ್ನೆಲೆಯಲ್ಲಿ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಹೊಸ ಪದವಿ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು ಕೃಷಿ ಶಿಕ್ಷಣಕ್ಕೆ ಹೊಸ ಆಯಾಮ ನೀಡುವ ಜೊತೆಗೆ, ರಾಸಾಯನಿಕ ಮುಕ್ತ ಕೃಷಿ, ಕೃಷಿ ಉದ್ಯಮಶೀಲತೆ ಮತ್ತು ಉದ್ಯೋಗಾಧಾರಿತ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ.

ಇದು ಅತಿ ಮುಖ್ಯ ಮಾಹಿತಿ!

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಭಾರತದಲ್ಲಿ ವಾರ್ಷಿಕ ಸುಮಾರು 3 ರಿಂದ 6 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಇದರಲ್ಲಿ ಕರ್ನಾಟಕವೊಂದರಲ್ಲೇ 40,000 ದಿಂದ 80,000 ಕ್ಕೂ ಅಧಿಕ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಉದ್ಯೋಗಗಳು ವಿವಿಧ ವಲಯಗಳಲ್ಲಿ ಹಂಚಿಹೋಗಿದ್ದು, ಆರ್ಗಾನಿಕ್ ಫಾರ್ಮಿಂಗ್‌ನಲ್ಲಿ 50,000 ದಿಂದ 1 ಲಕ್ಷ, ಆಹಾರ ಸಂಸ್ಕರಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು, ಹಾಗೂ ಡ್ರೋನ್, AI ಮತ್ತು IoT ತಂತ್ರಜ್ಞಾನಗಳ ಬಳಕೆಯಲ್ಲಿ 30,000 ದಿಂದ 80,000 ಅವಕಾಶಗಳಿವೆ. ಅದೇ ರೀತಿ ಬಯೋ-ಕಂಟ್ರೋಲ್, ಕೃಷಿ ಉಪಕರಣ ದುರಸ್ತಿ ಮತ್ತು ಜೇನು ಸಾಕಣೆಯಂತಹ ಪ್ರತಿಯೊಂದು ಕ್ಷೇತ್ರದಲ್ಲೂ 5,000 ದಿಂದ 50,000 ದವರೆಗೆ ವಿಪುಲ ಉದ್ಯೋಗಾವಕಾಶಗಳಿವೆ. ಆದಾಯದ ದೃಷ್ಟಿಯಿಂದ ನೋಡುವುದಾದರೆ, ಈ ಕ್ಷೇತ್ರಗಳಲ್ಲಿ ಫ್ರೆಶರ್‌ಗಳಿಗೆ ಮಾಸಿಕ ₹15,000 ದಿಂದ ₹35,000 ವರೆಗೆ ಹಾಗೂ ಅನುಭವಿಗಳಿಗೆ ₹40,000 ದಿಂದ ₹1 ಲಕ್ಷಕ್ಕೂ ಹೆಚ್ಚು ಸಂಬಳ ದೊರೆಯುತ್ತದೆ; ಜೊತೆಗೆ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವವರು ತಿಂಗಳಿಗೆ ₹50,000 ದಿಂದ ₹1.5 ಲಕ್ಷಕ್ಕೂ ಅಧಿಕ ಗಳಿಸಲು ಸಾಧ್ಯವಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed