Teenagers Missing: SSLC ಬಾಲಕಿ ಜೊತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿದ್ದವರನ್ನು ಕಂಡು ಬೆಚ್ಚಿಬಿದ್ದ ಪೊಲೀಸರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

Missing Students Thamarassery: ಹುಡುಗಿಯ ಶಾಲಾ ಸಮವಸ್ತ್ರವು ಶಾಲೆಯ ಬಳಿಯ ರಬ್ಬರ್ ತೋಟದಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅದೇ ಶಾಲೆಯ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮತ್ತು ಅವನ ಸ್ನೇಹಿತ, ಪ್ರಥಮ ಪಿಯುಸಿ  ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂಬ ಮಾಹಿತಿಯೂ ಬೆಳಕಿಗೆ ಬಂತು. ಮುಂದೇನಾಯ್ತು?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

Teenagers Missing in Kerala: ಅವರು ಮೂವರು ಸ್ನೇಹಿತರು.. ಕೇರಳದ ತಾಮರಸ್ಸೇರಿ ಸುತ್ತಮುತ್ತಲಿನ ನಿವಾಸಿಗಳು.. ಆ ಹುಡುಗಿ 10 ಕ್ಲಾಸ್‌ನಲ್ಲಿ ಓದುತ್ತಿದ್ದರೆ, ಆಕೆಯ ಇಬ್ಬರು ಸ್ನೇಹಿತರು ಪಿಯುಸಿ ವಿದ್ಯಾರ್ಥಿಗಳು. ಆದರೆ ಆ ಮೂವರು ಮಾಡಿದ ಅದೊಂದು ಯಡವಟ್ಟು ಇಡೀ ಕೇರಳವನ್ನೇ ಬೆಚ್ಚಿ ಬೀಳಿಸಿದೆ.

ಕೋಝಿಕ್ಕೋಡ್‌ನ ತಾಮರಸ್ಸೇರಿಯಿಂದ ತಮ್ಮ ಮನೆಯವರು ಮತ್ತು ಪೊಲೀಸರನ್ನು ಸಂಕಷ್ಟಕ್ಕೆ ಸಿಲುಕಿಸಿ ಓಡಿಹೋಗಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ವಯನಾಡಿನ ಬೆಟ್ಟದ ಇಳಿಜಾರಿನಲ್ಲಿ ಪತ್ತೆಯಾಗಿದ್ದಾರೆ. ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಓದುತ್ತಿರುವ 10 ನೇ ತರಗತಿಯ ಬಾಲಕಿ ಮತ್ತು ಆಕೆಯ ಇಬ್ಬರು ಸ್ನೇಹಿತರು ಸಾಹಸಮಯ ಟ್ರೆಕ್ಕಿಂಗ್ ಪ್ಲಾನ್ ಮಾಡಿದ್ದರು. ಶುಕ್ರವಾರ ತಡರಾತ್ರಿ ನಡೆದ ತೀವ್ರ ಕಾರ್ಯಾಚರಣೆಯ ನಂತರ ಆ ಮೂವರು ಬೆಟ್ಟದಲ್ಲಿ ಟೆಂಟ್ ಹಾಕಿ ಉಳಿದುಕೊಂಡಿದ್ದಾಗ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: Cheapest Gold Rate: ಅತೀ ಕಡಿಮೆ ಬೆಲೆಗೆ ಚಿನ್ನ ಸಿಗುವ 3 ಸ್ಥಳಗಳು! 2 ತೊಲೆ ಚಿನ್ನದ ನೆಕ್ಲೇಸ್ ಬೆಲೆ ಎಷ್ಟು ಗೊತ್ತಾ?

ಈ ಮೂವರು ವಿದ್ಯಾರ್ಥಿಗಳು ಯಾರಿಗೂ ಹೇಳದೆ ಕೇಳದೆ ಅಡ್ವೆಂಚರ್ ಟ್ರಿಪ್ ಪ್ಲಾನ್ ಮಾಡಿದ್ದರು. ಪ್ರಯಾಣಕ್ಕೆ ಹಣ ಸಿಗದೇ ಇದ್ದಾಗ ಆ ಮೂವರು ತಮ್ಮ ಗುಂಪಿನ ಒಬ್ಬ ವ್ಯಕ್ತಿಯ ಬಳಿ ಇದ್ದ 18,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ತಮರಶ್ಶೇರಿಯ ಅಂಗಡಿಯಲ್ಲಿ 10,000 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪೊಲೀಸ್ ಸೈಬರ್ ಸೆಲ್ ಅವರನ್ನು ಹಿಂಬಾಲಿಸದಂತೆ ತಡೆಯಲು ಅವರು ತಮ್ಮ ಬಳಿ ಇದ್ದ ಇತರ ಎರಡು ಫೋನ್‌ಗಳನ್ನು ಸಹ ಸ್ವಿಚ್ ಆಫ್ ಮಾಡಿದ್ದಾರೆ. ಯಾರಿಗೂ ತಿಳಿಯದಂತೆ ಕಾಡಿನಲ್ಲಿ ಹಲವಾರು ದಿನಗಳವರೆಗೆ ಬದುಕಲು ಅಗತ್ಯವಾದ ಟಾರ್ಪಲ್, ಅಕ್ಕಿ, ಬ್ರೆಡ್, ಚಾಕುಗಳು ಮತ್ತು ಪಾತ್ರೆಗಳನ್ನು ಸಹ ಅವರು ಸಿದ್ಧಪಡಿಸಿ ತಗೊಂಡು ಹೋಗಿದ್ದರು.

ಕಳೆದ ಗುರುವಾರ ಬೆಳಿಗ್ಗೆ, 15 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ಆದರೆ, ತರಗತಿ ಪ್ರಾರಂಭವಾದ ನಂತರ ಆಕೆ ಶಾಲೆಗೆ ಬಾರದಿದ್ದಾಗ, ಶಿಕ್ಷಕರು ಆಕೆಯ ಮನೆಗೆ ಮಾಹಿತಿ ನೀಡಿದ್ದಾರೆ. ಮನೆಯವರು ಮತ್ತು ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಆಕೆಯ ಶಾಲಾ ಸಮವಸ್ತ್ರವು ಶಾಲೆಯ ಬಳಿಯ ರಬ್ಬರ್ ತೋಟದಲ್ಲಿ ಬಿದ್ದಿರುವುದು ಕಂಡುಬಂದಿದೆ. ಅದೇ ಸಮಯದಲ್ಲಿ, ಅದೇ ಶಾಲೆಯ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮತ್ತು ಅವನ ಸ್ನೇಹಿತ, ಪ್ರಥಮ ಪಿಯುಸಿ  ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂಬ ಮಾಹಿತಿಯೂ ಬೆಳಕಿಗೆ ಬಂತು. ಅವರ ಜೊತೆಗೆ ಅವರ ದ್ವಿಚಕ್ರ ವಾಹನಗಳು ಸಹ ನಾಪತ್ತೆಯಾಗಿದ್ದವು. ಹೀಗಾಗಿ ಆ ಮೂವರ ಮಧ್ಯೆ ಲಿಂಕ್ ಇರುವ ಬಗ್ಗೆ ಸಂಶಯ ಬಂದಿದೆ.

ಆರಂಭದಲ್ಲಿ ಈ ಪ್ರಕರಣದ ತನಿಖೆಯು ರಬ್ಬರ್ ಟ್ಯಾಪಿಂಗ್ ಕೆಲಸಗಾರನ ಮಧ್ಯಪ್ರವೇಶದಲ್ಲಿ ಮಹತ್ವದ ನಿರ್ಣಾಯಕ್ಕೆ ಬಂತು. ಶಾಲೆಯ ಬಳಿಯ ಹೊಲವೊಂದರಲ್ಲಿ ಮೂವರು ವಿದ್ಯಾರ್ಥಿಗಳು ಸಂಶಯಾಸ್ಪದ ರೀತಿಯಲ್ಲಿ ಇರುವುದನ್ನು ಕಾರ್ಮಿಕ ನೋಡಿದ್ದಾನೆ. ತಕ್ಷಣ ಅವನು ತನ್ನ ಮೊಬೈಲ್‌ನಲ್ಲಿ ಆ ಮೂವರ ಚಿತ್ರವನ್ನು ಕ್ಲಿಕ್ ಮಾಡಿದ್ದಾನೆ. ನಂತರ ಆ ಫೋಟೋವನ್ನು ಅವನು ಶಾಲಾ ಸಿಬ್ಬಂದಿಗೆ ಕಳುಹಿಸಿದ್ದಾನೆ. ಆ ಮೂಲಕ, ಮೂವರು ಒಟ್ಟಿಗೆ ಇರುವುದು ದೃಢಪಟ್ಟಿದೆ. ನಂತರ, ಪೊಲೀಸರು ನಡೆಸಿದ ಸಿಸಿಟಿವಿ ಪರಿಶೀಲನೆಯಲ್ಲಿ ಮಕ್ಕಳು ದ್ವಿಚಕ್ರ ವಾಹನಗಳಲ್ಲಿ ಲಕ್ಕಿಡಿ ಪಾಸ್ ದಾಟಿ ವಯನಾಡಿಗೆ ಹೋಗಿರುವುದು ತಿಳಿದು ಬಂದಿದೆ.

ತೀವ್ರ ಹುಡುಕಾಟದ ನಂತರ, ವಯನಾಡಿನ ವಡುವಾಂಚಲ್‌ನ ಚಿತ್ರಗಿರಿಯ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳು ಇದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಕಾಡಿನಲ್ಲಿ ಸುಮಾರು ಐದು ಎಕರೆ ವಿಸ್ತೀರ್ಣದ ಬೆಟ್ಟದಲ್ಲಿ ಮೂವರು ಟೆಂಟ್‌ನಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ಪಡೆದ ಪೊಲೀಸರು, ಸ್ಥಳೀಯರು ಮತ್ತು ಪೋಷಕರ ಸಮ್ಮುಖದಲ್ಲಿ ಕಾಡಿನಲ್ಲಿ ಹುಡುಕಾಟ ನಡೆಸಿದರು. ಕೊನೆಗೆ ನಿನ್ನೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ, ಸ್ಥಳೀಯರು ಮೊದಲು ಚಿತ್ರಗಿರಿ ಶಾಲೆಯ ಬಳಿಯ ಕಾಡಿನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಕಂಡುಕೊಂಡರು.

ನಂತರ ಮಕ್ಕಳನ್ನು ಮೆಪ್ಪಾಡಿ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಪೊಲೀಸ್ ಠಾಣೆಗೆ ಕರೆದೊಯ್ಯಲಾದ ವಿದ್ಯಾರ್ಥಿಗಳನ್ನು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಪೋಷಕರಿಗೆ ಒಪ್ಪಿಸಲಾಯಿತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports