Last Updated:
ಜೂನ್ 1ರಂದು ಕೋರ್ಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್ಗಳ ಮರು ನಿಯೋಜನೆ ಆಗಿದ್ದು, ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು (ಮೇ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ (Jail) ಕಂಬಿ ಎಣಿಸುತ್ತಿದ್ದಾರೆ. ಬೇಲ್ (Bail) ಸಿಗದ ಹಿನ್ನೆಲೆ ನಟ ದರ್ಶನ್ ಜೈಲಿನಲ್ಲೇ ಮಾನಸಿಕವಾಗಿ ನೊಂದಿದ್ದಾರೆ. ಮತ್ತೊಂದೆಡೆ ಸಾಕ್ಷ್ಯಗಳ ವಿಚಾರಣೆ ಕೂಡ ತಡವಾಗ್ತಿದೆ. ಇದರ ನಡುವೆ ಕೇಸ್ ವಿಚಾರಣೆ ಕೈಗೆತ್ತಿಕೊಂಡ 64ನೇ ಸೆಷನ್ಸ್ ಕೋರ್ಟ್, ಸಂಪೂರ್ಣ ಕೇಸ್ ಫೈಲ್ನನ್ನು 59ನೇ ಸೆಷನ್ಸ್ ಕೋರ್ಟ್ಗೆ (Court) ವರ್ಗಾಯಿಸಲು ನಿರ್ದೇಶನ ನೀಡಿದೆ.
ಆರೋಪಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ. ಈ ಆದೇಶದ ಅನ್ವಯ, ಪ್ರಕರಣದ ತ್ವರಿತಗತಿ ವಿಚಾರಣೆ ನಡೆಸುವ ಹಾಗೂ ಆರೋಪಿಗಳಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯಗಳ ಮಾರ್ಗಸೂಚಿಗಳನ್ನ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಸೆಷನ್ಸ್ ನ್ಯಾಯಾಲಯವು ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
ಜೂನ್ 1ರಂದು ಕೋರ್ಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್ಗಳ ಮರು ನಿಯೋಜನೆ ಆಗಿದ್ದು. 64ನೇ ಸೆಷನ್ಸ್ ಕೋರ್ಟ್ಗೆ ನಿಗದಿಯಾಗಿದ್ದ ದರ್ಶನ್ ಕೊಲೆ ಕೇಸ್ನನ್ನ 59ನೇ ಸೆಷನ್ಸ್ ಕೋರ್ಟ್ಗೆ ಕೇಸ್ ಫೈಲ್ ವರ್ಗಾಯಿಸಲು ನಿರ್ದೇಶನ ನೀಡಿದೆ.
ಮುಂದಿನ ವಿಚಾರಣೆ ವೇಳೆ ಆರೋಪಿಗಳನ್ನ 59ನೇ ಕೋರ್ಟ್ಗೆ ಹಾಜರು ಪಡಿಸಲು ಸೂಚನೆ ನಡೆಸಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಕಾರಾಗೃಹ ಇಲಾಖೆ ಅಧಿಕಾರಿಗಳಿಗೂ ಸಹ ಸೂಚನೆ ನೀಡಿದ್ದಾರೆ. ಬಳಿಕ ಕೋರ್ಟ್ ಮುಂದಿನ ವಿಚಾರಣೆಯನ್ನ ಜೂನ್ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರೋ ಸುಪ್ರೀಂ ಕೋರ್ಟ್, ತ್ವರಿತಗತಿ ತನಿಖೆಗೆ ಕಟ್ಟುನಿಟ್ಟಿನ ಗಡುವು ವಿಧಿಸಿದ್ದು, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಈ ಹಿಂದೆ ನಿರ್ದೇಶನ ನೀಡಿತ್ತು.
ಸಾಕ್ಷ್ಯಗಳ ವಿಚಾರಣೆ ವಿಳಂಬವಾದ್ರೆ ವರ್ಷದೊಳಗೆ ಅಷ್ಟು ಸಾಕ್ಷ್ಯ ವಿಚಾರಣೆ ಮಾಡಲು ಸಾಧ್ಯವಾಗದಿದ್ರೆ. ದರ್ಶನ್ ಜಾಮೀನಿನ ಮೊರೆ ಹೋಗಬಹುದು ಅಂತಾರೆ ವಕೀಲರು.
(ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)













