Last Updated:
ಕಳೆದ ವರ್ಷ ಬಿಮ್ಲೇಂದ್ರ ಮೋಹನ್ ಮಿಶ್ರಾ ನಿಧನರಾದ ನಂತರ ಮತ್ತು ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ವಿವಾದದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಿದ ಬಳಿಕ ಈ ಮೂರು ಹುದ್ದೆಗಳು ಖಾಲಿಯಾಗಿದ್ದವು.
ಇಟಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Ayodhya Ram Temple) ಹೊಸದಾಗಿ ನೇಮಕಗೊಂಡ ಸದಸ್ಯೆ ಡಾ. ನಿರ್ಮಲಾ ಯಾದವ್ (Dr Nirmala yadav) ಅವರು ಗುರುವಾರ, ದೇವರೇ ತಮ್ಮನ್ನು ಈ ಹುದ್ದೆಗೆ ಆರಿಸಿದ್ದಾರೆ. ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯೊಂದಿಗೆ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮ ಸಿದ್ಧತೆಯನ್ನು ನಡೆಸಿದ್ದೇನೆ ಎಂದು ಹೇಳಿದರು.














