V Kamakoti: ಪದ್ಮಶ್ರೀ ಪುರಸ್ಕೃತರನ್ನು ‘ಗೋಮೂತ್ರ ತಜ್ಞ’ ಅಂತ ಜರಿದ ಪ್ರಿಯಾಂಕಾ ಗಾಂಧಿ! ವಿ. ಕಾಮಕೋಟಿಯವರ ಸಾಧನೆ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಾಮಕೋಟಿಯವರ ಬಗ್ಗೆ ಪ್ರಿಯಾಂಕಾ ಟೀಕೆ!


Last Updated:

Prof. V Kamakoti: ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಟಾಸ್ಕ್ ಫೋರ್ಸ್ ಸದಸ್ಯ ಡಾ. ವಿ. ಕಾಮಕೋಟಿಯವರನ್ನು ಗೋಮೂತ್ರ ತಜ್ಞ ಅಂತ ಟೀಕಿಸಿದ್ದಾರೆ. ಇದಕ್ಕೆ ರಾಜಕೀಯ ಅಷ್ಟೇ ಅಲ್ಲ, ಸಾರ್ವಜನಿಕವಲಯದಲ್ಲೂ ಆಕ್ಷೇಪ ಕೇಳಿ ಬಂದಿದೆ. ‘ಗೋಮೂತ್ರ ತಜ್ಞ’ ಟೀಕೆ ಹಿನ್ನೆಲೆಯಲ್ಲಿ ಪದ್ಮಶ್ರೀ ಡಾ. ವಿ. ಕಾಮಕೋಟಿಯವರ ಸಾಧನೆ ಬಗ್ಗೆ ಜನ ಮಾತನಾಡುತ್ತಿದ್ದಾರೆ.

ಕಾಮಕೋಟಿಯವರ ಬಗ್ಗೆ ಪ್ರಿಯಾಂಕಾ ಟೀಕೆ!
ಕಾಮಕೋಟಿಯವರ ಬಗ್ಗೆ ಪ್ರಿಯಾಂಕಾ ಟೀಕೆ!

ದೆಹಲಿ: ಪರೀಕ್ಷಾ ಸುಧಾರಣೆಗೆ ಐಟಿ ದಿಗ್ಗಜ ನಂದನ್ ನಿಲೇಕಣಿ (Nandan Nilekani) ನೇತೃತ್ವದಲ್ಲಿ ಕೇಂದ್ರ ಸರ್ಕಾರ (central government) ಟಾಸ್ಕ್ ಫೋರ್ಸ್ (task force) ರಚಿಸಿತ್ತು. ಈ ಕಮಿಟಿ ವಿರುದ್ಧವೇ ಇದೀಗ ಕಾಂಗ್ರೆಸ್ ನಾಯಕರು (Congress Leaders) ಅಪಸ್ವರ ಎತ್ತಿದ್ದಾರೆ. ವಯನಾಡು ಸಂಸದೆ (Wayanad MP) ಪ್ರಿಯಾಂಕಾ ಗಾಂಧಿಯವರಂತೂ (Priyanka Gandhi) ಒಂದು ಹೆಜ್ಜೆ ಮುಂದೆ ಹೋಗಿ, ಟಾಸ್ಕ್ ಫೋರ್ಸ್ ಸದಸ್ಯ ಡಾ. ವಿ. ಕಾಮಕೋಟಿಯವರನ್ನು (Dr. V. Kamakoti) ‘ಗೋಮೂತ್ರ ತಜ್ಞ’ (Gaumutra Expert) ಅಂತ ಟೀಕಿಸಿದ್ದಾರೆ. ಇದಕ್ಕೆ ರಾಜಕೀಯ ಅಷ್ಟೇ ಅಲ್ಲ, ಸಾರ್ವಜನಿಕವಲಯದಲ್ಲೂ ಆಕ್ಷೇಪ ಕೇಳಿ ಬಂದಿದೆ. ‘ಗೋಮೂತ್ರ ತಜ್ಞ’ ಟೀಕೆ ಹಿನ್ನೆಲೆಯಲ್ಲಿ ಪದ್ಮಶ್ರೀ ಡಾ. ವಿ. ಕಾಮಕೋಟಿಯವರ ಸಾಧನೆ ಬಗ್ಗೆ ಜನ ಮಾತನಾಡುತ್ತಿದ್ದಾರೆ.

ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಇಂದು ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸುಧಾರಿಸಲು ಸರ್ಕಾರ ಹೊಸದಾಗಿ ರಚಿಸಿರುವ ಉನ್ನತಾಧಿಕಾರದ ಕಾರ್ಯಪಡೆಯನ್ನು ಟೀಕಿಸಿದ್ರು. “ಈ ಸಮಿತಿಯಲ್ಲಿ ಗೋಮೂತ್ರ ತಜ್ಞರೂ ಇದ್ದಾರೆ. ಅಂತಹ ಜನರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಏನು ಗೊತ್ತು?” ಎಂದು ಅವರು ಪ್ರಶ್ನಿಸಿದ್ರು.

ಡಾ. ವಿ. ಕಾಮಕೋಟಿ ಯಾರು?

ಕಾಮಕೋಟಿ ವೀಳಿನಾಥನ್ ಅಲಿಯಾಸ್ ವಿ. ಕಾಮಕೋಟಿ ಅವರು ಐಐಟಿ ಮದ್ರಾಸ್‌ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದರು. ಅವರು 2001 ರಲ್ಲಿ ಐಐಟಿ ಮದ್ರಾಸ್‌ನ ಅಧ್ಯಾಪಕರನ್ನು ಸೇರಿದರು ಮತ್ತು ಜನವರಿ 2022 ರಲ್ಲಿ ಅದರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಕೃತಕ ಬುದ್ಧಿಮತ್ತೆ ಕಾರ್ಯಪಡೆಯ ಅಧ್ಯಕ್ಷ

ಅವರು ಕಂಪ್ಯೂಟರ್ ಆರ್ಕಿಟೆಕ್ಚರ್, ಮಾಹಿತಿ ಭದ್ರತೆ ಮತ್ತು VLSI ವಿನ್ಯಾಸ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಐಐಟಿ ಮದ್ರಾಸ್‌ನಲ್ಲಿ ಮೈಕ್ರೋಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮ ಮತ್ತು ಮಾಹಿತಿ ಭದ್ರತಾ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾರೆ. ಅವರು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಚಿಸಿದ ಕೃತಕ ಬುದ್ಧಿಮತ್ತೆ ಕಾರ್ಯಪಡೆಯ ಅಧ್ಯಕ್ಷರೂ ಆಗಿದ್ದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಐಐಟಿ ಮದ್ರಾಸ್‌ನಲ್ಲಿ ಅವರು ಜೆಇಇ ಅಧ್ಯಕ್ಷರಾಗಿ ಮತ್ತು ಕೈಗಾರಿಕಾ ಸಲಹಾ ಮತ್ತು ಪ್ರಾಯೋಜಿತ ಸಂಶೋಧನೆಯ ಅಸೋಸಿಯೇಟ್ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಅಂತರರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ಸಮ್ಮೇಳನಗಳಲ್ಲಿ 150 ಕ್ಕೂ ಹೆಚ್ಚು ಮಹತ್ವದ ಆರ್ಟಿಕಲ್‌ಗಳನ್ನು ಪ್ರಕಟಿಸಿದ್ದಾರೆ. ಅನೇಕ ಸಂಶೋಧನಾ ವಿದ್ವಾಂಸರಿಗೆ ಅವರ ಪಿಎಚ್‌ಡಿ ಮತ್ತು ಮಾಸ್ಟರ್ ಆಫ್ ಸೈನ್ಸ್ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದಾರೆ.

50 ಯೋಜನೆಗಳ ಯಶಸ್ವಿ ಸಂಘಟಕ

ಅವರು ಕೈಗಾರಿಕೆ ಮತ್ತು ಸರ್ಕಾರಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಂದ ಸುಮಾರು 50 ಯೋಜನೆಗಳನ್ನು ಸಂಘಟಿಸಿ ಯಶಸ್ವಿಯಾಗಿ ಪೂರೈಸಿದ್ದಾರೆ. ಅವರು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ತಂತ್ರಜ್ಞಾನ ಸಮಿತಿಗಳಲ್ಲಿ ಸೇವೆ ಸಲ್ಲಿಸುತ್ತಾರೆ.

2026ರಲ್ಲಿ ಪದ್ಮಶ್ರೀ ಗೌರವ

ಕಾಮಕೋಟಿ ಅವರಿಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. DRDO ಅಕಾಡೆಮಿಕ್ ಎಕ್ಸಲೆನ್ಸ್ ಪ್ರಶಸ್ತಿ, ಇಂಡಿಯನ್ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ​​ಟೆಕ್ನೋ ವಿಷನರಿ ಪ್ರಶಸ್ತಿ, ‘ಅಬ್ದುಲ್ ಕಲಾಂ ಟೆಕ್ನಾಲಜಿ ಇನ್ನೋವೇಶನ್ ನ್ಯಾಷನಲ್ ಫೆಲೋಶಿಪ್’, ACCS ಲೈಫ್-ಟೈಮ್ ಅಚೀವ್ಮೆಂಟ್ ಅವಾರ್ಡ್, IBM ಫ್ಯಾಕಲ್ಟಿ ಪ್ರಶಸ್ತಿ ಮತ್ತು VASVIK ಇಂಡಸ್ಟ್ರಿಯಲ್ ರಿಸರ್ಚ್ ಪ್ರಶಸ್ತಿಯನ್ನು ಪಡೆದಿದ್ದಾರೆ. 2026ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಿದೆ.

ಏನಿದು ಗೋಮೂತ್ರ ಹೇಳಿಕೆ?

“ಗೋಮೂತ್ರ ತಜ್ಞ” ಎಂಬ ಈ ಹೇಳಿಕೆಯು ಜನವರಿ 2025 ರ ವಿವಾದಾತ್ಮಕ ವೈರಲ್ ವೀಡಿಯೊದಿಂದ ಬಂದಿದೆ. ಅಲ್ಲಿ ಕಾಮಕೋಟಿ ಸಾರ್ವಜನಿಕವಾಗಿ ಗೋಮೂತ್ರದ ಔಷಧೀಯ ಗುಣಗಳನ್ನು ಹೊಗಳಿದ್ದರು. ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಜೀರ್ಣಕಾರಿ ಗುಣಗಳನ್ನು ಹೊಂದಿರುವ “ಬಹಳ ದೊಡ್ಡ ಔಷಧ” ಎಂದು ಘೋಷಿಸಿ, ಅದಕ್ಕೊಂದು ಕಥೆ ಹೇಳಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed