ಏಪ್ರಿಲ್ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಪೂರ್ವ ತಿರುಚ್ಚಿ ಸ್ಥಾನದಿಂದ ರಾಘವ ಲಾರೆನ್ಸ್ ಸ್ಪರ್ಧಿಸುತ್ತಾರೆ ಎಂದು ಲಿಂಕ್ ಮಾಡಿದ ಸಾಕಷ್ಟು ವರದಿಗಳ ನಂತರ ಈ ಅಧಿಕೃತ ಘೋಷಣೆ ಬಂದಿದೆ.
X ನಲ್ಲಿ ಪೋಸ್ಟ್ ಮಾಡಿರುವ ಲಾರೆನ್ಸ್, ರಾಜಕೀಯ ಪ್ರವೇಶಿಸುವುದನ್ನು ತಾನು ಎಂದಿಗೂ ಊಹಿಸಿರಲಿಲ್ಲ. ಹಣ ಗಳಿಸುವ ಅಥವಾ ಸ್ಥಾನ ಪಡೆಯುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿಲ್ಲ. ನಾನು ನಂಬುವ ಮತ್ತು ರಾಜಕೀಯಕ್ಕೆ ಹತ್ತಿರವಿರುವ ಯಾರಾದರೂ ರಾಜಕೀಯ ಪ್ರವೇಶಿಸಿದರೆ, ಆ ವ್ಯಕ್ತಿಯ ಪರವಾಗಿ ನಿಂತು ಅವರೊಂದಿಗೆ ಕೆಲಸ ಮಾಡಿ ಒಬ್ಬ ವ್ಯಕ್ತಿಯಾಗಿ ತಾನು ಮಾಡುತ್ತಿದ್ದ ಕೆಲಸವನ್ನೇ ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂಬುದು ನನ್ನ ಏಕೈಕ ಆಲೋಚನೆ ಎಂದು ಅವರು ಹೇಳಿದರು.
“ಇಂದು, ಸಂದರ್ಭಗಳು ನನ್ನನ್ನು ರಾಜಕೀಯ ಪ್ರವೇಶಿಸಬೇಕಾದ ಹಂತಕ್ಕೆ ತಂದಿವೆ” ಎಂದು ಅವರು ಹೇಳಿದರು. “ಪ್ರತಿಫಲ ಏನನ್ನೂ ನಿರೀಕ್ಷಿಸದೆ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ. ನನಗೆ ನಿಮ್ಮ ಸಲಹೆ ಮತ್ತು ಮಾರ್ಗದರ್ಶನ ಬೇಕು” ಎಂದೂ ಅವರು ಬರೆದುಕೊಂಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಹಂಚಿಕೊಳ್ಳಲಿರುವ ವೀಡಿಯೊದಲ್ಲಿ, ರಾಜಕೀಯದ ಬಗ್ಗೆ ತಮ್ಮ ತಿಳುವಳಿಕೆ, ಅದು ಅವರ ಜೀವನದಲ್ಲಿ ಹೇಗೆ ಬಂದಿತು, ರಾಜಕೀಯದ ಬಗ್ಗೆ ಅವರ ತಾಯಿಯ ದೃಷ್ಟಿಕೋನ ಮತ್ತು ಅವರ ಪ್ರಯಾಣವನ್ನು ರೂಪಿಸಿದ ಕೆಲವು ಪ್ರಮುಖ ಮತ್ತು ಆಸಕ್ತಿದಾಯಕ ಘಟನೆಗಳ ಬಗ್ಗೆ “ಸಂಪೂರ್ಣ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದರು.
ಕೊನೆಯವರೆಗೂ ವೀಡಿಯೊವನ್ನು ವೀಕ್ಷಿಸಿ ಜನರು ಅಭಿಪ್ರಾಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅವರು ಜನರನ್ನು ಕೇಳಿಕೊಂಡರು. “ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನು ಈ ಪ್ರಮುಖ ಹೆಜ್ಜೆ ಇಡುತ್ತಿರುವಾಗ ನಿಮ್ಮ ಸಲಹೆ ಮತ್ತು ಮಾರ್ಗದರ್ಶನ ನನಗೆ ತುಂಬಾ ಅಗತ್ಯ ಹಾಗೂ ಅರ್ಥಪೂರ್ಣವಾಗಿದೆ” ಎಂದು ಅವರು ಹೇಳಿದರು.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ, ಲಾರೆನ್ಸ್ 18 ನಿಮಿಷಗಳ ವೀಡಿಯೊವನ್ನು ಶೇರ್ ಮಾಡಿದರು. ಅದರಲ್ಲಿ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸದಿರಲು ನಿರ್ಧರಿಸಿದಾಗ ಅವರು ಹೇಗೆ ದುಃಖಿತರಾಗಿದ್ದರು ಎಂಬುದನ್ನು ವಿವರಿಸಿದರು. ರಾಜಕೀಯಕ್ಕೆ ಪ್ರವೇಶಿಸಲು ಹಿಂದೆ ಹಲವಾರು ಬಾರಿ ತಮ್ಮ ತಾಯಿಯ ಅನುಮತಿಯನ್ನು ಕೇಳಿದ್ದರು ಎನ್ನುವುದನ್ನೂ ರಿವೀಲ್ ಮಾಡಿದ್ದಾರೆ.
ಆದರೆ ತಾಯಿ ಎಂದಿಗೂ ಒಪ್ಪಲಿಲ್ಲ ಎಂದು ಅವರು ಹೇಳಿದರು. ನಂತರ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಐತಿಹಾಸಿಕ ಗೆಲುವು ಸಾಧಿಸಿದಾಗ, ರಾಜಕೀಯದ ಬಗ್ಗೆ ತಮ್ಮ ತಾಯಿಯ ನಿಲುವು ಬದಲಾಯಿತು. ಅವರು ಅಂತಿಮವಾಗಿ ತಮ್ಮ ರಾಜಕೀಯ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ವೀಡಿಯೊವನ್ನು ಶೇರ್ ಮಾಡಿದ ಅವರು ಅವರು X ನಲ್ಲಿ “ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ. ಈ ವೀಡಿಯೊವನ್ನು ನೋಡಿದ ನಂತರ, ದಯವಿಟ್ಟು ಕಾಮೆಂಟ್ಗಳಲ್ಲಿ ನಿಮ್ಮ ಸಲಹೆ ಮತ್ತು ಮಾರ್ಗದರ್ಶನವನ್ನು ಹಂಚಿಕೊಳ್ಳಿ. ನೀವು “ಇಲ್ಲ” ಎಂದು ಹೇಳಿದರೆ, ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಮತ್ತು ಸಮಾಜಕ್ಕೆ ನನ್ನ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತೇನೆ. ಆದರೆ ನೀವು “ಹೌದು” ಎಂದು ಹೇಳಿದರೆ, ನಾನು ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧನಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನು ಈ ಪ್ರಯಾಣವನ್ನು ಯಾವಾಗ ಮತ್ತು ಯಾರೊಂದಿಗೆ ಪ್ರಾರಂಭಿಸಲು ಉದ್ದೇಶಿಸಿದ್ದೇನೆ ಎಂಬುದನ್ನು ನಾನು ಬಹಿರಂಗಪಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿಜಯ್ ತಿರುಚ್ಚಿ ಪೂರ್ವ ಮತ್ತು ಪೆರಂಬೂರಿನಿಂದ ಸ್ಪರ್ಧಿಸಿದ್ದರು. ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎರಡೂ ಸ್ಥಾನಗಳಲ್ಲೂ ಅವರು ಗೆದ್ದಿದ್ದರು.
Do your duty sincerely, without expecting anything in return.
After watching this video, please share your advice and guidance in the comments. If you say “No,” I will not enter politics and will continue my selfless service to society. But if you say “Yes,” I am ready to enter… pic.twitter.com/VwPFjdaUqy
— Raghava Lawrence (@offl_Lawrence) June 12, 2026
ಆದಾಗ್ಯೂ, ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ಅಭ್ಯರ್ಥಿಯು ಕೇವಲ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು. ಅಂದರೆ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಎರಡರ ನಡುವೆ ಆಯ್ಕೆ ಮಾಡಬೇಕಾಗಿತ್ತು. ವಿಜಯ್ ನಂತರ ತಿರುಚ್ಚಿ ಪೂರ್ವವನ್ನು ಬಿಟ್ಟು ಪೆರಂಬೂರು ಅನ್ನು ಉಳಿಸಿಕೊಳ್ಳಲು ನಿರ್ಧರಿಸಿದರು. ಅದು ರಾಜ್ಯ ಸಚಿವಾಲಯದ ಹತ್ತಿರದಲ್ಲಿದೆ. ಹಾಗಾಗಿ ನಟ ಪೆರಂಬೂರು ಆಯ್ಕೆ ಮಾಡಿದರು ಎಂದು ವರದಿಯಾಗಿದೆ. ಈಗ ಆ ಸ್ಥಾನದಿಂದ ರಾಘವ ಲಾರೆನ್ಸ್ ಸ್ಪರ್ಧಿಸಬಹುದು ಎನ್ನಲಾಗಿದೆ.
ರಾಘವ ಲಾರೆನ್ಸ್ ತಮಿಳು ಚಿತ್ರರಂಗದಲ್ಲಿ ನಟ, ನೃತ್ಯ ಸಂಯೋಜಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ. ಅವರು ಹಾಡನ್ನೂ ಬರೆಯುತ್ತಾರೆ. ಅವರು 2001 ರಲ್ಲಿ “ರಾಘವ” ಎಂಬ ಹೆಸರನ್ನು ಸ್ವೀಕರಿಸಿದರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನೃತ್ಯ ಸಂಯೋಜಕರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ವಿಜಯ್ ಮತ್ತು ಲಾರೆನ್ಸ್ ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದಾರೆ. ನಂತರ 2003 ರಲ್ಲಿ ವಿಜಯ್ ಅವರ ತಿರುಮಲೈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.












