Jr NTR: ಕಾರ್ತಿಕೇಯನಾಗಿ ಅಬ್ಬರಿಸಲು ಮುಂದಾದ ಜೂನಿಯರ್ ಎನ್‌ಟಿಆರ್? ಪೌರಾಣಿಕ ಚಿತ್ರದಲ್ಲಿ ಮೋಡಿ ಮಾಡ್ತಾರಾ ತಾರಕ್ ? | | ACTPnews

ಜೂನಿಯರ್ ಎನ್‌ಟಿಆರ್


Last Updated:

ಆರ್‌ಆರ್‌ಆರ್ (RRR) ಚಿತ್ರದ ಬಳಿಕ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಜೂನಿಯರ್ ಎನ್‌ಟಿಆರ್ (Junior NTR) ಇದೀಗ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಜೂನಿಯರ್ ಎನ್‌ಟಿಆರ್
ಜೂನಿಯರ್ ಎನ್‌ಟಿಆರ್

ಆರ್‌ಆರ್‌ಆರ್ (RRR) ಚಿತ್ರದ ಬಳಿಕ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಜೂನಿಯರ್ ಎನ್‌ಟಿಆರ್ (Junior NTR) ಇದೀಗ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಎನ್‌ಟಿಆರ್ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಕೈ ಜೋಡಿಸಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಜೂನಿಯರ್ ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಇದೀಗ ಆ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಇಬ್ಬರ ಯಶಸ್ವಿ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಈ ಬಹುನಿರೀಕ್ಷಿತ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಅವರ ಎನ್‌ಟಿಆರ್ ಆರ್ಟ್ಸ್ ಹಾಗೂ ಎಸ್. ರಾಧಾಕೃಷ್ಣ ಅವರ ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಇನ್ನೂ ಅಧಿಕೃತ ಶೀರ್ಷಿಕೆ ಘೋಷಿಸಲಾಗಿಲ್ಲ.

ಇದನ್ನೂ ಓದಿ: GK: ಮಲ್ಟಿಪ್ಲೆಕ್ಸ್​ಗಳಲ್ಲಿ ಜನ ಯಾಕೆ ಉಗಿಯಲ್ಲ, ಬೀಡಿ-ಸಿಗರೇಟ್​ ಸೇದಲ್ಲ? 99% ಜನರಿಗೆ ಈ ವಿಷಯ ಗೊತ್ತಿಲ್ಲ!

ಜೂನಿಯರ್ ಎನ್‌ಟಿಆರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟರ್‌ಗೆ ಶಿವನ ಮಗ. ಪಾರ್ವತಿಯ ಹೆಮ್ಮೆ. ಶಾಶ್ವತ ಸೇನಾಧಿಪತಿ. ಮತ್ತೊಮ್ಮೆ ತ್ರಿವಿಕ್ರಮ್ ಜೊತೆ… ಎಂಬ ಸಾಲುಗಳನ್ನು ಶೀರ್ಷಿಕೆಯಾಗಿ ನೀಡಿದ್ದಾರೆ. ಪೋಸ್ಟರ್‌ನಲ್ಲಿ ಯುದ್ಧಭೂಮಿಯ ಹಿನ್ನೆಲೆಯ ನಡುವೆ ಜ್ವಾಲೆಯೊಳಗೆ ಕಂಗೊಳಿಸುತ್ತಿರುವ ಬೃಹತ್ ತ್ರಿಶೂಲದ ಚಿತ್ರ ಕಾಣಿಸಿಕೊಂಡಿದೆ. ಈ ದೃಶ್ಯಗಳು ಚಿತ್ರದ ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಹಲವು ಕುತೂಹಲಗಳಿಗೆ ಕಾರಣವಾಗಿವೆ.

ಪೋಸ್ಟರ್ ಹಾಗೂ ಅದರಲ್ಲಿರುವ ಸಂದೇಶವನ್ನು ಗಮನಿಸಿದರೆ, ಈ ಸಿನಿಮಾ ಶಿವ-ಪಾರ್ವತಿಯ ಪುತ್ರ ಕಾರ್ತಿಕೇಯ, ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿ ಅವರ ಕಥೆಯನ್ನು ಆಧರಿಸಿರಬಹುದು ಎಂಬ ಅಭಿಪ್ರಾಯ ಸಿನಿಪ್ರಿಯರಲ್ಲಿ ವ್ಯಕ್ತವಾಗುತ್ತಿದೆ. ಚಿತ್ರತಂಡ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ನೀಡದಿದ್ದರೂ, ಪೋಸ್ಟರ್‌ನಲ್ಲಿರುವ ಸಂಕೇತಗಳು ಇದೇ ದಿಕ್ಕಿನಲ್ಲಿ ಚರ್ಚೆಗೆ ಕಾರಣವಾಗಿವೆ.

ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಅನಿರುದ್ಧ್, ತಮ್ಮ ವಿಭಿನ್ನ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಜೂನಿಯರ್ ಎನ್‌ಟಿಆರ್, ತ್ರಿವಿಕ್ರಮ್ ಮತ್ತು ಅನಿರುದ್ಧ್ ಅವರ ಈ ಕಾಂಬಿನೇಷನ್ ಈಗಾಗಲೇ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಆರ್‌ಆರ್‌ಆರ್ ಬಳಿಕ ಜೂನಿಯರ್ ಎನ್‌ಟಿಆರ್ ಅವರ ಪ್ರತಿಯೊಂದು ಸಿನಿಮಾದ ಮೇಲೂ ದೇಶಾದ್ಯಂತ ವಿಶೇಷ ನಿರೀಕ್ಷೆ ಇದೆ. ಪೌರಾಣಿಕ ಕಥಾಹಂದರ, ಅದ್ಧೂರಿ ನಿರ್ಮಾಣ, ಖ್ಯಾತ ನಿರ್ದೇಶಕ ಹಾಗೂ ಜನಪ್ರಿಯ ಸಂಗೀತ ನಿರ್ದೇಶಕರ ಸಮಾಗಮದಿಂದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed