Last Updated:
Jason Sanjay: ಹೀರೋ ಆಗೋ ಎಲ್ಲಾ ಅವಕಾಶಗಳಿದ್ದರೂ ವಿಜಯ್ ಮಗ ನಿರ್ದೇಶಕನಾಗಿದ್ದೇಕೆ? ಸ್ಟಾರ್ ಹೀರೋ ಆಗೋಕೆ ಇಷ್ಟಪಡಲಿಲ್ವಾ ಜೇಸನ್ ಸಂಜಯ್?
ತಮಿಳು ನಟ ವಿಜಯ್ (Vijay) ಅವರ ಪುತ್ರ ಜೇಸನ್ ಸಂಜಯ್ (Jason Sanjay) ಚಿತ್ರರಂಗಕ್ಕೆ ಪಾದಾರ್ಪನಣೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ (Sandeep Kishen) ಹೀರೋ ಆಗಿ ನಟಿಸಿರುವ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕನಾಗಿ (Director) ಕಾಲಿವುಡ್ಗೆ (Kollywood) ಎಂಟ್ರಿ ಕೊಡೋಕೆ ಸಂಜಯ್ ಸಜ್ಜಾಗಿದ್ದಾರೆ. ಈ ಚಿತ್ರವು ಜುಲೈ 31 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಟೀಸರ್ (Teaser) ಬಿಡುಗಡೆಯಾದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಜೇಸನ್ ಸಂಜಯ್ ನಿರ್ದೇಶಕರಾಗಿ ಮೊದಲ ಚಿತ್ರ ಎಂಬ ಕುತೂಹಲದೊಂದಿಗೆ ಟೀಸರ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರತಂಡ ಪ್ರಚಾರ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ.
ಚಿತ್ರದ ಪ್ರಚಾರದ ಸಮಯದಲ್ಲಿ, ಸಂದೀಪ್ ಕಿಶನ್ ಜೇಸನ್ ಸಂಜಯ್ ಅವರ ವೃತ್ತಿಜೀವನದ ಆಯ್ಕೆಯ ಬಗ್ಗೆ ಕೆಲವು ಆಸಕ್ತಿದಾಯಕ ಮಾತುಗಳನ್ನು ಹೇಳಿದರು. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.
ಜೇಸನ್ ಅವರ ಕುಟುಂಬದ ಹಿನ್ನೆಲೆ ನೋಡಿದರೆ ಅವರು ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಎಲ್ಲಾ ಅವಕಾಶಗಳನ್ನು ಹೊಂದಿದ್ದರು. ಆದರೆ ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ನಿರ್ಧಾರ ಮಾಡಿದರು. ಈ ನಿರ್ಧಾರವನ್ನು ಅವರು ದಿಟ್ಟ ಮತ್ತು ಶ್ಲಾಘನೀಯ ಆಯ್ಕೆ ಎಂದು ಬಣ್ಣಿಸಿದರು.
ಸಿಗ್ಮಾ ಮೂವಿ ಜೇಸನ್ ಸಂಜಯ್ ಅವರ ಕ್ರಿಯೇಟಿವ್ ದೃಷ್ಟಿಕೋನ ಮತ್ತು ನಿಖರವಾದ ಪ್ಲಾನಿಂಗ್ ಅನ್ನು ಪ್ರತಿಬಿಂಬಿಸುತ್ತದೆ ಎಂದು ಸುಂದೀಪ್ ಹೇಳಿದ್ದಾರೆ. ನಿರ್ದೇಶಕರ ಕಥೆ ಹೇಳುವ ವಿಧಾನ ಮತ್ತು ದೃಷ್ಟಿಕೋನದಲ್ಲಿ ಅವರಿಗಿರುವ ಸ್ಪಷ್ಟತೆ ಚಿತ್ರದ ಗೆಲುವಿನ ದೊಡ್ಡ ಸಾಮರ್ಥ್ಯಗಳಲ್ಲಿ ಒಂದು ಎಂದಿದ್ದಾರೆ.
ಸಿನಿಮಾ ಥಿಯೇಟರ್ಗೆ ಬಂದಾಗ ಪ್ರೇಕ್ಷಕರಲ್ಲಿ ಹೆಚ್ಚುತ್ತಿರುವ ಕುತೂಹಲವು ಬಲವಾದ ಆಸಕ್ತಿಯಾಗಿ ತೋರಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸುಂದೀಪ್ ಅವರ ಕಮೆಂಟ್ಗಳು ಆನ್ಲೈನ್ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ. ಜೇಸನ್ ಸಂಜಯ್ ನಟನಾಗಿ ಪಾದಾರ್ಪಣೆ ಮಾಡಿದ್ದರೆ ಒಂದು ಅದ್ಧೂರಿ ರಿಲೀಸ್ ಎಂಜಾಯ್ ಮಾಡಬಹುದಾಗಿತ್ತು ಎಂದು ಕೆಲವು ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಫ್ಯಾಮಿಲಿ ಬ್ಯಾಗ್ರೌಂಡ್ ಇದೆ ಎಂದ ಮಾತ್ರಕ್ಕೆ ಯಶಸ್ವಿ ವೃತ್ತಿಜೀವನ ಸಿಗಲಿದೆ ಎನ್ನಲಾಗುವುದಿಲ್ಲ ಎಂದು ವಾದಿಸುತ್ತಾರೆ.
Bangalore,Karnataka













