Last Updated:
ಪೂರ್ವ ವಲಯ ಮತ್ತು ಕೇಂದ್ರ ವಲಯ ನಡುವೆ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯ ಶುರುವಾಗಿದೆ. ಮೊದಲ ದಿನ ಪೂರ್ವ ವಲಯ ತಂಡಕ್ಕೆ ಇಶಾನ್ ಕಿಶನ್ ಬದಲಿಗೆ 15 ವರ್ಷದ ವೈಭವ್ ಸೂರ್ಯವಂಶಿ ನಾಯಕತ್ವ ವಹಿಸಿಕೊಂಡಿದ್ದಾರೆ.
ಬೆಂಗಳೂರಿ(Bengaluru)ನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ದುಲೀಪ್ ಟ್ರೋಫಿ (Duleep Trophy) ಸೆಮಿಫೈನಲ್ ನಡೆಯುತ್ತಿದೆ. ಈ ಪಂದ್ಯದಲ್ಲಿ ಪೂರ್ವ ವಲಯ ಮತ್ತು ಮಧ್ಯ ವಲಯ ತಂಡಗಳು ಮುಖಾಮುಖಿಯಾಗಿವೆ. ಮೊದಲ ದಿನ ಪೂರ್ವ ವಲಯ(East Zone)ದ ನಾಯಕ ಇಶಾನ್ ಕಿಶನ್(Ishan Kishan)ಗೆ ಗಾಯವಾಗಿ ಅವರು ಮೈದಾನ ತೊರೆಯಬೇಕಾಯಿತು. ಅದಕ್ಕಾಗಿ 15 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ನಾಯಕತ್ವ ವಹಿಸಿಕೊಂಡರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಮೊದಲ ಬಾರಿ ಹಿರಿಯ ದೇಶೀಯ ಕ್ರಿಕೆಟ್ (Cricket) ಪಂದ್ಯವನ್ನು ಮುನ್ನಡೆಸಿದ್ದಾರೆ. ಇದು ಅವರ ಮತ್ತೊಂದು ದೊಡ್ಡ ಸಾಧನೆ.














