Last Updated:
ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆಗೆ ತಡೆ ನೀಡುವಂತೆ ಅರ್ಜಿ ದರ್ಶನ್ ಪರ ವಕೀಲರು ಸಲ್ಲಿಸಿರೋ ಅರ್ಜಿ ಬಗ್ಗೆ ಹೈಕೋರ್ಟ್ ನ್ಯಾ ನಾಗಪ್ರಸನ್ನ ಪೀಠದಲ್ಲಿ ಆದೇಶ ಹೊರಬೀಳಲಿದೆ. ನಿನ್ನೆ ದರ್ಶನ್ ಪರ ವಕೀಲರು ಮಹತ್ವದ ವಾದ ಮಂಡಿಸಿದ್ದಾರೆ.
ಬೆಂಗಳೂರು (ಸೆ.02): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರೋ ನಟ ದರ್ಶನ್ (Darshan) ಪಾಲಿಗೆ ಇಂದು ಬಿಗ್ ಡೇ ಆಗಿದೆ. ಪ್ರದೂಷ್ ಮಾಫಿ ಸಾಕ್ಷಿ ದಾಖಲು ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಕೆಯಾದ ಅರ್ಜಿ ಆದೇಶ ಇಂದು ಹೊರಬೀಳಿದ್ದು, ಹೈಕೋರ್ಟ್ ಆದೇಶದತ್ತ ಕುತೂಹಲ ಹೆಚ್ಚಿದೆ. ಮಾಫಿ ಸಾಕ್ಷಿಗೆ ಒಪ್ಪಿಗೆ ಸಿಗುತ್ತಾ ಅಥವಾ ತಡೆ ಆಗುತ್ತಾ? ಇಲ್ಲವಾದಲ್ಲಿ ಮಾಫಿ ಸಾಕ್ಷಿ ಕುರಿತಾಗಿ ನಿಯಮದ ಅನುಸರಣೆ ಬಗ್ಗೆ ಆದೇಶವಾಗುತ್ತಾ? ಅನ್ನೋ ಕುತೂಹಲ ಮನೆ ಮಾಡಿದ್ದು, ಜೈಲಿನಲ್ಲಿರೋ ದರ್ಶನ್ಗೂ ಢವಢವ ಶುರುವಾಗಿದೆ.














