Last Updated:
ಪ್ರವಾಹ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ದೋಣಿಯೊಂದು ಗಂಗಾ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟು 11 ಜನರು ದೋಣಿಯಲ್ಲಿದ್ದರು ಎಂದು ವರದಿಯಾಗಿದೆ.
ಪ್ರವಾಹ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ದೋಣಿ ಗಂಗಾ ನದಿಯ (Ganga River) ಬಲವಾದ ಪ್ರವಾಹಕ್ಕೆ (Flood) ಸಿಲುಕಿ ಕೊಚ್ಚಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಬಿಹಾರದ (Bihar) ಭಾಗಲ್ಪುರ ಜಿಲ್ಲೆಯಿಂದ ಈ ಸುದ್ದಿ ಹೊರಬೀಳುತ್ತಿದೆ. ನವಗಚ್ಚಿಯಾದ ರಾಘೋಪುರ್ ಪ್ರದೇಶದಲ್ಲಿ ಪ್ರವಾಹ ನಿರೋಧಕ ಕಾರ್ಯಾಚರಣೆಯಲ್ಲಿ ತೊಡಗಿದ್ದ ದೋಣಿಯೊಂದು ಗಂಗಾ ನದಿಯ ಬಲವಾದ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದೆ. ಒಟ್ಟು 11 ಜನರು ದೋಣಿಯಲ್ಲಿದ್ದರು ಎಂದು ವರದಿಯಾಗಿದೆ.














