Last Updated:
Rising Bharat Summit 2026: ಕರ್ನಾಟಕ ರಾಜ್ಯದಲ್ಲಿ ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಅಂತ ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನ್ಯೂಸ್18ನ ರೈಸಿಂಗ್ ಭಾರತ್ ಸಮ್ಮೇಳನದಲ್ಲಿ ಭಾಗಿಯಾದ ಅವರು, ರಾಜ್ಯದಲ್ಲಿ ಯಾವುದೇ ರೀತಿಯ ಅರಾಜಕತೆಗೆ ಅವಕಾಶವಿಲ್ಲ ಅಂತ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಅಂತ ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ನ್ಯೂಸ್18ನ ರೈಸಿಂಗ್ ಭಾರತ್ ಸಮ್ಮೇಳನದಲ್ಲಿ (Rising Bharat Summit) ಭಾಗಿಯಾದ ಅವರು, ರಾಜ್ಯದಲ್ಲಿ ಯಾವುದೇ ರೀತಿಯ ಅರಾಜಕತೆಗೆ ಅವಕಾಶವಿಲ್ಲ ಅಂತ ಹೇಳಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಅಂತ ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಭಾರತದ ನಾವೀನ್ಯತೆ ಆರ್ಥಿಕತೆಯನ್ನು ಕರ್ನಾಟಕ ಹೇಗೆ ನಿರ್ಮಿಸುತ್ತಿದೆ? ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯವು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಸಂಯೋಜಿಸುತ್ತಿದೆ ಎಂದಿದ್ದಾರೆ. ಸಂಚಾರ ನಿರ್ವಹಣೆ, ಸೈಬರ್ ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಡಿಜಿಟಲ್ ಉಪಕರಣಗಳು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
“ನಾವು ಸಂಚಾರ, ಸೈಬರ್ ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆ ಇತ್ಯಾದಿಗಳಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತೇವೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ನಮ್ಮ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ” ಎಂದು ಹೇಳಿದರು. ಪೊಲೀಸ್ ಮೇಲ್ವಿಚಾರಣೆಯನ್ನು ಸುಧಾರಿಸಲು ಸರ್ಕಾರವು ಒಂದು ಅಪ್ಲಿಕೇಶನ್ ಅನ್ನು ಪರಿಚಯಿಸಿದೆ ಎಂದು ಅವರು ಹೇಳಿದರು. ಈಗ ಈ ಅಪ್ಲಿಕೇಶನ್ ಅನ್ನು ಪೊಲೀಸರ ಉಪಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತಿದೆ ಅಂತ ಪ್ರಸ್ತಾಪಿಸಿದ್ರು.
ರಾಜ್ಯದ ರಸ್ತೆ ಸುರಕ್ಷತಾ ಜಾರಿ ಕ್ರಮಗಳನ್ನು ಹೈಲೈಟ್ ಮಾಡಿದ ಪ್ರಿಯಾಂಕ್ ಖರ್ಗೆ, ಕರ್ನಾಟಕವು ಸಂಚಾರ ಉಲ್ಲಂಘನೆಗಳ ವಿರುದ್ಧ ದೊಡ್ಡ ಪ್ರಮಾಣದ ಕ್ರಮ ಕೈಗೊಂಡಿದೆ ಎಂದು ಹೇಳಿದರು. “ರಾಜ್ಯದಾದ್ಯಂತ, ನಾವು 2,700 ಕೋಟಿ ರೂಪಾಯಿಗಿಂತಲೂ ಹೆಚ್ಚು ದಂಡ ಸಂಗ್ರಹಿಸಿದ್ದೇವೆ ಮತ್ತು ಸಂಚಾರ ಉಲ್ಲಂಘನೆಯಲ್ಲಿ 7.7 ಕೋಟಿಗೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದೇವೆ” ಎಂದು ಅವರು ಹೇಳಿದರು.

10 ಮಿನಿಟ್ಸ್ ಡೆಲಿವಲಿ ಯುಗದಲ್ಲಿ ಬಹಳಷ್ಟು ಉಲ್ಲಂಘನೆಗಳಿವೆ. ನಾವು ಈಗ ಅವರಿಗೆ ನಾಲ್ಕು ಗಂಟೆಗಳ ಉಪನ್ಯಾಸಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು. ಸಂಚಾರ ಉಲ್ಲಂಘನೆ ಗಂಭೀರವಾಗಿದೆ. ನಾವು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ … ನಾವು ಗಿಗ್ ಕಾರ್ಮಿಕರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಅಂತ ಅಭಿಪ್ರಾಯಪಟ್ಟರು.
ಬೆಂಗಳೂರಿನ ದಟ್ಟಣೆಯ ಕುರಿತು ಮಾತನಾಡಿದ ಅವರು, ಸಾರಿಗೆ ಯೋಜನೆಯನ್ನು ಸುಧಾರಿಸಲು ರಾಜ್ಯವು ಅರ್ಬನ್ ಮೊಬಿಲಿಟಿ ಮಿಷನ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದರು. “ನಾವು ಅರ್ಬನ್ ಮೊಬಿಲಿಟಿ ಮಿಷನ್ ಅನ್ನು ರೂಪಿಸುತ್ತಿದ್ದೇವೆ” ಎಂದು ಅವರು ಹೇಳಿದರು, “ಮುಂದಿನ ಕೆಲವು ತಿಂಗಳುಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ” ಅಂತ ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.














