Chamarajanagar
lekhaka-Surendra S
ಚಾಮರಾಜನಗರ, ಜುಲೈ, 12: ಮಗ ಮೃತಪಟ್ಟ ನೋವಿನ ನಡುವೆಯೂ ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದ ಘಟನೆ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಪೋಷಕರು ಈತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಕುರಟ್ಟಿಹೊಸರು ಗ್ರಾಮದ ಅಂಬರೀಶ್ (27) ಎಂಬ ಯುವಕ ಕುರಟ್ಟಿಹೊಸರು ಗ್ರಾಮದಲ್ಲಿ ಬೈಕ್ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಂಬರೀಶ್ ಮಂಗಳವಾರ (ಜುಲೈ 11) ನಿಧನ ಹೊಂದಿದ್ದು, ಈತನ ಕಣ್ಣುಗಳನ್ನು ಪಾಲಕರ ಒಪ್ಪಿಗೆಯಂತೆ ದಾನ ಮಾಡಲಾಗಿದೆ.
Maharashtra: ಟ್ರಕ್ ಹರಿದು 50 ಕುರಿಗಳು ಸ್ಥಳದಲ್ಲೇ ಸಾವು!
ತನ್ನ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತಂತೆ. ಅದರಂತೆಯೇ ಮಗನ ನೇತ್ರದಾನ ಮಾಡಲಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.
English summary
Death in accident: A Family donates organ of son at Hanur of Chamarajangar taluk,
Story first published: Wednesday, July 12, 2023, 14:26 [IST]