Tamil Nadu: ತಮಿಳುನಾಡಲ್ಲಿ ಮಧ್ಯಂತರ ಚುನಾವಣೆ? ‘ಬಾಂಬ್’ ಸಿಡಿಸಿದ ಮಾಜಿ ಸಿಎಂ ಸ್ಟಾಲಿನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಜಯ್-ಸ್ಟಾಲಿನ್


Last Updated:

Tamil Nadu: ತಮಿಳುನಾಡಿನಲ್ಲಿ ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ ಸಿಎಂ ಆಗಿ ಬರೀ 1 ತಿಂಗಳು 19 ದಿನಗಳಷ್ಟೇ ಆಗಿದೆ. ಹೀಗಿರುವಾಗಲೇ ಈಗ್ಯಾಕೆ ಮಧ್ಯಂತರ ಚುನಾವಣೆ ಮಾತು ಅಂತೀರಾ? ಇದೀಗ ಮಧ್ಯಂತರ ಚುನಾವಣೆಯ ಮಾತನಾಡಿದ್ದು ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಪಕ್ಷದ ವರಿಷ್ಠ ಎಂಕೆ ಸ್ಟಾಲಿನ್!

ವಿಜಯ್-ಸ್ಟಾಲಿನ್
ವಿಜಯ್-ಸ್ಟಾಲಿನ್

ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಮಧ್ಯಂತರ ಚುನಾವಣೆಯಾ? ವಿಜಯ್ ದಳಪತಿ (Vijay Thalapathy) ಸಿಎಂ ಆಗಿ ಬರೀ 1 ತಿಂಗಳು 19 ದಿನಗಳಷ್ಟೇ ಆಗಿದೆ. ವಿಜಯ್ ದಳಪತಿ ಈಗಾಗಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಆಡಳಿತ ಆರಂಭಿಸಿ, ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಕೆಲವು ಸುಧಾರಣೆಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗಲೇ ಈಗ್ಯಾಕೆ ಮಧ್ಯಂತರ ಚುನಾವಣೆ (Mid-term election) ಮಾತು ಅಂತೀರಾ? ಇದೀಗ ಮಧ್ಯಂತರ ಚುನಾವಣೆಯ ಮಾತನಾಡಿದ್ದು ತಮಿಳುನಾಡು ಮಾಜಿ ಸಿಎಂ, ಡಿಎಂಕೆ (DMK) ಪಕ್ಷದ ವರಿಷ್ಠ ಎಂಕೆ ಸ್ಟಾಲಿನ್ (MK Stalin)! ಟಿವಿಕೆ (TVK) ಸರ್ಕಾರ 5 ವರ್ಷ ಆಡಳಿತ ಪೂರ್ಣಗೊಳಿಸುವುದು ಡೌಟ್, ಹೀಗಾಗಿ ತಮಿಳುನಾಡಿನಲ್ಲಿ ಯಾವಾಗ ಬೇಕಿದ್ದರೂ ಮಧ್ಯಂತರ ಚುನಾವಣೆ ನಡೆಯಬಹುದು ಅಂತಾರೆ ಎಂಕೆ ಸ್ಟಾಲಿನ್!

ಯಾವುದೇ ಸಮಯದಲ್ಲಿ ಮಧ್ಯಂತರ ಚುನಾವಣೆ

ನಟ ಕಮ್ ರಾಜಕಾರಣಿ ವಿಜಯ್ ದಳಪತಿ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೇತೃತ್ವದ ಸರ್ಕಾರದ ಸ್ಥಿರತೆಯನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂಕೆ ಸ್ಟಾಲಿನ್ ಪ್ರಶ್ನಿಸಿದ್ದಾರೆ. ಈ ಸರ್ಕಾರ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸದೇ ಇರಬಹುದು. ಹೀಗಾಗಿ ಯಾವುದೇ ಸಮಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರನ್ನು ಸ್ಟಾಲಿನ್ ಒತ್ತಾಯಿಸಿದ್ದಾರೆ.
ಈ ವಾಹನ ಯಾವಾಗ ಸ್ಥಗಿತಗೊಳ್ಳುತ್ತದೆ ಗೊತ್ತಿಲ್ಲ

ಚೆನ್ನೈನ ವನಗರಂನಲ್ಲಿರುವ ಶ್ರೀ ವಾರು ಮದುವೆ ಸಭಾಂಗಣದಲ್ಲಿ ನಡೆದ ಡಿಎಂಕೆ ಸದಸ್ಯತ್ವ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಟಾಲಿನ್, ಇಂಥದ್ದೊಂದು ಬಾಂಬ್ ಸಿಡಿಸಿದ್ದಾರೆ. ಪ್ರಸ್ತುತ ಆಡಳಿತಾರೂಢ ಟಿವಿಕೆ ಪಕ್ಷವು ತನ್ನದೇ ಆದ ಸ್ವಂತ ಬಲದ ಮೇಲೆ ಸ್ಥಿರ ಸರ್ಕಾರವನ್ನು ರಚಿಸಲು ಬಹುಮತವನ್ನು ಗಳಿಸಲಿಲ್ಲ. ಇದು ಅಲುಗಾಡುವ ವ್ಯವಸ್ಥೆ. ಈ ವಾಹನವು ಯಾವ ಜಂಕ್ಷನ್ ಅಥವಾ ತಿರುವು ಪಡೆಯುವಾಗ ಸಮತೋಲನ ಕಳೆದುಕೊಂಡು ಹಠಾತ್ ಸ್ಥಗಿತಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ ಅಂತ ಸ್ಟಾಲಿನ್ ವ್ಯಂಗ್ಯವಾಡಿದ್ರು.
ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ನಾನು ನಿಮಗೆ ಹೇಳುತ್ತಿದ್ದೇನೆ, ಮಧ್ಯಂತರ ಚುನಾವಣೆಗಳು ಯಾವುದೇ ಸಮಯದಲ್ಲಿ ಬರಬಹುದು ಎಂದಿದ್ದಾರೆ. ಇದು ಮೂರು ತಿಂಗಳಲ್ಲಿ ಸಂಭವಿಸಬಹುದು, ಅಥವಾ ಆರು ತಿಂಗಳಲ್ಲಿ ಸಂಭವಿಸಬಹುದು. ಆದರೆ ಐದು ವರ್ಷಗಳ ಪೂರ್ಣ ಅವಧಿಗಾಗಿ ನಾವು ಕಾಯಲು ಸಾಧ್ಯವಿಲ್ಲ ಅಂತ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಪಕ್ಷದ ಗೆಲುವಿಗಾಗಿ ಪ್ರಮಾಣಿಕವಾಗಿ ಕೆಲಸ ಮಾಡಿ

ಹೊಸದಾಗಿ ಸೇರ್ಪಡೆಗೊಂಡ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿರುವಂತೆ ಕರೆ ನೀಡಿದ ಸ್ಟಾಲಿನ್, ಚುನಾವಣಾ ದಿನಾಂಕಗಳ ಘೋಷಣೆಗಾಗಿ ಕಾಯುವ ಬದಲು ಡಿಎಂಕೆ ತಕ್ಷಣವೇ ಮೂಲಭೂತ ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು. ಈ ಕ್ಷಣದಿಂದ, ಪಕ್ಷದ ಗೆಲುವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಮತ್ತು ನಿಮ್ಮ ಮನ್ನಣೆ ನಿಮಗೆ ಬರುತ್ತದೆ ಅಂತ ಸ್ಟಾಲಿನ್ ಹೇಳಿದ್ದಾರೆ.

ಕೆಲಸ ಈ ನಿಮಿಷದಿಂದಲೇ ಜಾರಿಯಾಗಲಿ

ಯಾವುದೇ ರಾಜಕೀಯ ಘಟನೆಗಳಿಗೆ ನಾವು 100 ಪ್ರತಿಶತ ಸಿದ್ಧರಾಗಿರಬೇಕು. ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರ ನಾವು ಸಿದ್ಧತೆಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ಈ ಮೆಗಾ ಸೇರ್ಪಡೆ ಕಾರ್ಯಕ್ರಮವು ಡಿಎಂಕೆ ಅಧಿಕಾರಕ್ಕೆ ಮರಳಲು ನಮ್ಮ ಕ್ಷೇತ್ರಕಾರ್ಯವನ್ನು ಪ್ರಾರಂಭಿಸಲು ನಾವು ಗಂಭೀರ ಪ್ರತಿಜ್ಞೆ ಮಾಡುವ ಕ್ಷಣವಾಗಿ ಕಾರ್ಯನಿರ್ವಹಿಸಲಿ, ಅದು ಈ ನಿಮಿಷದಿಂದಲೇ ಜಾರಿಯಾಗಲಿ ಅಂತ ಸ್ಟಾಲಿನ್ ಕರೆ ನೀಡಿದ್ದಾರೆ ಅಂತ ಎಎನ್‌ಐ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed