ಕೆಲಸ ಶುರು ಮಾಡಿಯೇ ಇಲ್ಲ
ಇವರಿಗೆ ಈ ಪಾತ್ರ ಮಾಡೋದು ಅಷ್ಟು ಸುಲಭವಲ್ಲ ಅನ್ನೋದು ತಿಳಿದಿದೆ. ಇಡೀ ಭಾರತ ದೇಶಕ್ಕೆ ರಾಮಾಯಣ ಅನ್ನೋದು ಬಹು ಮುಖ್ಯವಾದ ವಿಷಯವೇ ಆಗಿದೆ. ಈ ಒಂದು ಚಿತ್ರದಲ್ಲಿ ನಟಿಸ್ತಿರೋದು ಇವರಿಗೆ ಅಷ್ಟೆ ಖುಷಿನೂ ಕೊಟ್ಟಿದೆ.
ಹನುಮಾನ ಸುಮ್ನೆ ಅಲ್ಲ. ತುಂಟನೂ ಆಗಿದ್ದಾನೆ. ಶಕ್ತಿಶಾಲಿನೂ ಆಗಿದ್ದಾನೆ. ನಿಮ್ಮೆಲ್ಲರ ನೆಚ್ಚಿನ ಹನುಮಾನ್ ಆಗಿದ್ದಾನೆ. ಹಾಗೆ ರಾಮನ ಭಕ್ತನೂ ಆಗಿದ್ದಾರೆ. ಮುಗ್ಧನೂ ಆಗಿದ್ದಾನೆ.
ಅಂತಹ ಈ ಹನುಮಾನ್ ಪಾತ್ರವನ್ನ ನಾನು ಮಾಡುತ್ತಿದ್ದೇನೆ. ದೇವರ ಆಶೀರ್ವಾದಿಂದ ಈ ಒಂದು ಪಾತ್ರ ನನಗೆ ಸಿಕ್ಕಿದೆ. ಇದನ್ನ ನಿಭಾಯಿಸೋದು ಅಷ್ಟು ಸುಲಭವೇನೂ ಅಲ್ಲ.
ರಾಮಾಯಣದ ಈ ಚಿತ್ರದಲ್ಲಿ ನಾನು ಆಂಜನೇಯನ ಪಾತ್ರ ಮಾಡುತ್ತಿದ್ದೇನೆ. ಆದರೆ, ನಾನು ಇನ್ನು ಪೂರ್ತಿ ಕೆಲಸ ಶುರು ಮಾಡಿಯೇ ಇಲ್ಲ.
ಸ್ವಲ್ಪ ಮಾತ್ರ ಮಾಡಿದ್ದೇನೆ. ಈ ಚಿತ್ರದಲ್ಲಿ ನಾನು ಕೆಲಸ ಮಾಡೋದು ಇನ್ನು ಸಾಕಷ್ಟಿದೆ. ಈ ಒಂದು ಚಿತ್ರವನ್ನ ನಿಮಿತ್ ಮಲ್ಹೋತ್ರಾ ಮಾಡುತ್ತಿದ್ದಾರೆ.
ತುಂಟ ಹನುಮಾನ
ಇದನ್ನ ದೊಡ್ಡ ಮಟ್ಟದಲ್ಲಿಯೇ ತೆಗೆದುಕೊಂಡು ಹೋಗ್ತಾರೆ ಅನ್ನುವ ನಂಬಿಕೆ ಇದೆ ಅಂತಲೂ ಸನ್ನಿ ಡಿಯೋಲ್ ಹೇಳಿಕೊಂಡಿದ್ದಾರೆ.
ರಾಮಯಾಣ ಚಿತ್ರದ ಪ್ರಥಮ ಸಂಕಲ್ಪ ಕಾರ್ಯಕ್ರಮ ದೆಹಯಲ್ಲಿ ನಡೆದಿದೆ. ದೊಡ್ಡ ಪ್ರಮಾಣದಲ್ಲಿ ಇದು ನಡೆದಿದೆ. ರಾಕಿಂಗ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ.
ಇವರೂ ಈ ಚಿತ್ರಕ್ಕೆ ನಿರ್ಮಾಪಕರೂ ಆಗಿದ್ದಾರೆ. ಇವರೂ ಈ ಕಾರ್ಯಕ್ರಮದಲ್ಲಿದ್ದರು. ಸೀತಾ ಪಾತ್ರಧಾರಿ ನಟಿ ಸಾಯಿ ಪಲ್ಲವಿ ಆಗಮಿಸಿದ್ದರು. ಸೀತಾ ಪಾತ್ರದ ಅನುಭವ ಹಂಚಿಕೊಂಡಿದ್ದಾರೆ.
ರಣಬೀರ್ ಕಪೂರ್ ಈ ಚಿತ್ರದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರದಲ್ಲಿ ತೇಟ್ ರಾಮನ ರೀತಿನೇ ಕಾಣಿಸಿಕೊಂಡಿದ್ದಾರೆ.
ರಾಮಾಯಣ ಚಿತ್ರದ ಟ್ರೈಲರ್ ಅನ್ನ ಈ ಒಂದು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದ್ದಾರೆ. ಇದನ್ನ ನೋಡಿದ ಕನ್ನಡ ಸಿನಿಮಾ ಪತ್ರಕರ್ತರು ತುಂಬಾನೆ ಮೆಚ್ಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ರಾವಣನ ಪಾತ್ರದಲ್ಲಿಯೇ ಯಶ್ ಇಲ್ಲಿ ಅಬ್ಬರಿಸಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ಭಕ್ತಿ ಭಾವ ಮೂಡಿಸಿದ್ದಾರೆ.
ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಣ್ಣಲ್ಲಿಯೇ ಎಲ್ಲವನ್ನು ಹೇಳಿದ್ದಾರೆ. ಈ ವರ್ಷ ದೀಪಾವಳಿ ಹಬ್ಬಕ್ಕೆ ಈ ಚಿತ್ರ ರಿಲೀಸ್ ಆಗುತ್ತದೆ. ಎರಡನೇ ಭಾಗ 2027 ರಂದು ದೀಪಾವಳಿಗೇನೆ ರಿಲೀಸ್ ಆಗುತ್ತಿದೆ ಅಂತ ಹೇಳಬಹದು.













