Last Updated:
ಕಾಸರಗೋಡು ಜಿಲ್ಲೆಯ ಕಾಂಞಗಾಡಿನ ಗುರುಪುರಂ ಮಹಾವಿಷ್ಣು ದೇವಸ್ಥಾನದಲ್ಲಿ ಜೀವಂತ ಆನೆಯ ಬದಲಿಗೆ 11 ಅಡಿ ಎತ್ತರದ ‘ಗುರುಪುರಂ ಅರ್ಜುನನ್’ ಎಂಬ ಯಂತ್ರ ಆನೆಯನ್ನು ದೇವರ ಸೇವೆಗೆ ಬಳಸಲಾಗುತ್ತಿದ್ದು, ನಟಿ ರಿಚಾ ಛಡ್ಡಾ PETA ಇಂಡಿಯಾ ಸಹಯೋಗದೊಂದಿಗೆ ಇದನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.
ಮಂಗಳೂರು: ದೇವರ ನಾಡು ಕೇರಳದಲ್ಲಿ (Kelaram) ದೇವಸ್ಥಾನಗಳ ಉತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಆಚರಣೆಗಳಲ್ಲಿ ಆನೆಗಳಿಗೆ (Elephant) ವಿಶೇಷ ಸ್ಥಾನವಿದೆ. ಆದರೆ ಆನೆಗಳನ್ನು ಸಾಕುವುದು-ನಿರ್ವಹಿಸುವುದು ಕಷ್ಟವಾಗುತ್ತಿರುವುದು ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ಆಕ್ಷೇಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಕಾಸರಗೋಡಿನ ಒಂದು ದೇವಸ್ಥಾನ ಇದೀಗ ಹೊಸ ದಾರಿಯನ್ನು ಹಿಡಿದಿದೆ. ಕಾಸರಗೋಡು ಜಿಲ್ಲೆಯ ಕಾಂಞಗಾಡಿನ ಗುರುಪುರಂ ಮಹಾವಿಷ್ಣು ದೇವಸ್ಥಾನದಲ್ಲಿ ಇನ್ನು ಮುಂದೆ ದೇವರ ಸೇವೆಯಲ್ಲಿ ‘ಯಂತ್ರ ಆನೆ’ ಕಾಣಿಸಿಕೊಳ್ಳಲಿದೆ. ನಟಿ ರಿಚಾ ಛಡ್ಡಾ ಅವರು PETA ಇಂಡಿಯಾ ಸಹಯೋಗದೊಂದಿಗೆ ಈ ಯಂತ್ರ ಆನೆಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.













