Religious Conversion: ಬಕ್ರೀದ್ ಪ್ರಾಣಿ ಬಲಿಗೆ ಮುಸ್ಲಿಂ ಯುವಕ ಬೇಸರ, ಹಿಂದೂ ಧರ್ಮಕ್ಕೆ ಮತಾಂತರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Muslim Youth Converts To Hindu: ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಮಧ್ಯಪ್ರದೇಶದ (Madhya Pradesh) ರಾಜ್ಯದ ಖಂಡ್ವಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕ ಹಿಂದೂ ಧರ್ಮವನ್ನು (Hindu Religion) ಸ್ವೀಕರಿಸಿರುವ ಘಟನೆ ಇದೀಗ ಕುತೂಹಲ ಸೃಷ್ಟಿಸಿದೆ. ಬಿಲಾಲ್ (Bilal) ಎಂಬ ಹೆಸರಿನ ಈ ಯುವಕ ಇದೀಗ ತನ್ನ ಹೆಸರನ್ನು “ವಿಶಾಲ್” (Vishal) ಎಂದು ಬದಲಿಸಿಕೊಂಡಿದ್ದು, ಬಕ್ರೀದ್  (Bakrid) ಸಂದರ್ಭದಲ್ಲಿ ನಡೆಯುವ ಪ್ರಾಣಿಗಳ ಬಲಿಯ ಪದ್ಧತಿಯಿಂದ ಮನಸ್ಸಿಗೆ ನೋವಾಗಿತ್ತು ಎಂದು ಹೇಳಿಕೊಂಡಿದ್ದಾನೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ವರದಿಗಳು ಹೇಳುವುದೇನು?

ವರದಿಗಳ ಪ್ರಕಾರ, ಖಿರ್ಕಿಯಾ ಪ್ರದೇಶದ ನಿವಾಸಿಯಾಗಿರುವ ಬಿಲಾಲ್ ಬಾಲ್ಯದಿಂದಲೇ ಬಕ್ರೀದ್ ಹಬ್ಬದ ವೇಳೆ ನಡೆಯುವ ಪ್ರಾಣಿಹತ್ಯೆಗಳನ್ನು ನೋಡಿ ಬೇಸರಗೊಂಡಿದ್ದನು. ಮೂಕ ಪ್ರಾಣಿಗಳನ್ನು ಕೊಲ್ಲುವ ದೃಶ್ಯಗಳು ತನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದ್ದವು ಎಂದು ಆತ ಹೇಳಿದ್ದಾನೆ. ಈ ವಿಚಾರವೇ ತನ್ನಲ್ಲಿ ಧರ್ಮದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಸಿತು ಎಂದು ಆತ ಹೇಳಿಕೊಂಡಿದ್ದಾನೆ.

ಹಲವು ದಿನಗಳ ಹಿಂದೆ ಆಕರ್ಷಣೆ!

ಕೆಲ ವರ್ಷಗಳಿಂದ ಆತ ಹಿಂದೂ ಸಂಸ್ಕೃತಿ, ಆಚರಣೆಗಳು ಮತ್ತು ಧಾರ್ಮಿಕ ಮೌಲ್ಯಗಳ ಕಡೆ ಹೆಚ್ಚು ಆಕರ್ಷಿತನಾಗಿದ್ದನೆಂದು ತಿಳಿದುಬಂದಿದೆ. ವಿಶೇಷವಾಗಿ “ಸರ್ವೇ ಭವಂತು ಸುಖಿನಃ” ಎಂಬ ತತ್ವ, ಅಂದರೆ ಎಲ್ಲಾ ಜೀವಿಗಳೂ ಸುಖವಾಗಿರಲಿ ಎಂಬ ಸಂದೇಶ ನೀಡುತ್ತದೆ. ಈ ತತ್ವ ತನ್ನ ಮೇಲೆ ದೊಡ್ಡ ಪ್ರಭಾವ ಬೀರಿತು ಎಂದು ವಿಶಾಲ್ ಹೇಳಿದ್ದಾನೆ. ಎಲ್ಲಾ ಜೀವಿಗಳ ಮೇಲಿನ ಕರುಣೆ ಮತ್ತು ದಯೆಯ ಆಲೋಚನೆ ತನ್ನ ಮನಸ್ಸಿಗೆ ಹತ್ತಿರವಾಯಿತು ಎಂದು ಆತ ಹೇಳಿದ್ದಾನೆ.

ಧರ್ಮಾಂತರ ನಡೆದಿದ್ದೆಲ್ಲಿ?

ಈ ಧರ್ಮಾಂತರ ಕಾರ್ಯಕ್ರಮವು ಖಂಡ್ವಾದ ಮಹಾದೇವಗಢ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ವ್ಯವಸ್ಥಾಪಕರು ಮತ್ತು ಕೆಲವು ಧಾರ್ಮಿಕ ಸಂಘಟನೆಗಳ ಸಮ್ಮುಖದಲ್ಲಿ ವಿಧಿವಿಧಾನಗಳ ಮೂಲಕ ಬಿಲಾಲ್ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಈ ವೇಳೆ ಆತನಿಗೆ ಶುದ್ಧೀಕರಣ ವಿಧಿಗಳು, ಮಂತ್ರೋಚ್ಚಾರಣೆ ಹಾಗೂ ಸಂಪ್ರದಾಯಬದ್ಧ ಆಚರಣೆಗಳನ್ನು ನೆರವೇರಿಸಲಾಯಿತು. ದೇವಸ್ಥಾನದಲ್ಲಿಯೇ ಆತನ ಮುಂಡನ ಕೂಡ ಮಾಡಿಸಲಾಯಿತು ಎಂದು ವರದಿಗಳು ಹೇಳುತ್ತವೆ.

ದೇವಸ್ಥಾನದ ವ್ಯವಸ್ಥಾಪಕ ಹೇಳಿದ್ದೇನು?

ದೇವಸ್ಥಾನದ ವ್ಯವಸ್ಥಾಪಕ ಅಶೋಕ್ ಪಾಳಿವಾಲ್ ಅವರ ಪ್ರಕಾರ, ಬಿಲಾಲ್ ತನ್ನ ಸ್ವಂತ ಇಚ್ಛೆಯಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಯಾರೊಬ್ಬರೂ ಒತ್ತಡ ಹಾಕಿಲ್ಲ ಎಂದು ಅವರು ಹೇಳಿದ್ದಾರೆ. ಧರ್ಮಾಂತರದ ನಂತರ ಆತನಿಗೆ ರಾಮಾಯಣ ಪುಸ್ತಕವನ್ನೂ ಉಡುಗೊರೆಯಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜನಾಭಿಪ್ರಾಯವೇನು?

ಇನ್ನೊಂದೆಡೆ, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಇದನ್ನು ವೈಯಕ್ತಿಕ ನಂಬಿಕೆ ಮತ್ತು ಆಯ್ಕೆಯ ವಿಷಯ ಎಂದು ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನು ರಾಜಕೀಯ ಹಾಗೂ ಧಾರ್ಮಿಕ ಚರ್ಚೆಯ ಭಾಗವಾಗಿಯೂ ನೋಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮಾಂತರ, “ಘರ್ ವಾಪಸಿ” ಮತ್ತು ಧಾರ್ಮಿಕ ಗುರುತಿನ ವಿಚಾರಗಳು ಮತ್ತೆ ಸುದ್ದಿಯಾಗುತ್ತಿರುವ ನಡುವೆ ಈ ಘಟನೆ ಮತ್ತಷ್ಟು ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed