Last Updated:
ನದಿ ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ರೈತನ ಜೀವ ಉಳಿಸಲು ತನ್ನ ಸ್ವಂತ ಜೀವವನ್ನೇ ಧಾರೆ ಎರೆದ ಧೀರನೊಬ್ಬನ ಕಥೆ ಇದು.
ಕೇರಳ: ಪ್ರಕೃತಿಯ ಕೋಪದ ಮುಂದೆ ಮನುಷ್ಯ ಸದಾ ಅಸಹಾಯಕ. ಆದರೆ ಅದೇ ಪ್ರಕೃತಿಯ (Nature) ವಿಕೋಪದ ನಡುವೆಯೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುತ್ತಾನಲ್ಲ, ಅದೇ ನಿಜವಾದ ಮಾನವೀಯತೆ. ಜೀವಕ್ಕಿಂತ ದೊಡ್ಡದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಆದರೆ ಅಪರಿಚಿತನೊಬ್ಬನ ಜೀವ ಉಳಿಸಲು ತನ್ನ ಸ್ವಂತ ಜೀವವನ್ನೇ ಧಾರೆ ಎರೆದ ಧೀರನೊಬ್ಬನ ಕಥೆ ಇದು. ಕೇರಳದ ಕಣ್ಣೂರಿನಲ್ಲಿ. 36 ವರ್ಷದ ಆರ್. ರಾಜೇಶ್ (R Rajesh) ಅವರ ಈ ಮಹಾನ್ ತ್ಯಾಗದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.














