Oman: ಒಮನ್ ಹಡಗಿನಲ್ಲಿ ಭಾರತೀಯ ಸಾವು; ಬೇಡಿಕೊಂಡರೂ ಸಹಾಯ ಮಾಡದ ಅಮೆರಿಕ ನೌಕಾಪಡೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Oman: ನೋವಿನಿಂದ ನರಳಿದರೂ ಸಿಗಲಿಲ್ಲ ಸಹಾಯ; ಓಮನ್ ಹಡಗಿನಲ್ಲಿ ಭಾರತೀಯ ನಾವಿಕನ ದಾರುಣ ಸಾವು; ಅಮೆರಿಕ ನೌಕಾಪಡೆಗೆ ಬೇಡಿಕೊಂಡರೂ ಸಿಗಲಿಲ್ಲ ನೆರವು, ಸತ್ತ ನಿಶಾಂತ್ ದೇಹ ಕಾಪಾಡಲು ತಣ್ಣೀರಿನ ಬಾಟಲ್ ಮೊರೆ ಹೋದ ಸಿಬ್ಬಂದಿ!

News18
News18

ಡುಕ್ಮ್ (ಒಮಾನ್‌): ಒಮಾನ್‌ನ (Oman) ಡುಕ್ಮ್ ಬಂದರಿನಲ್ಲಿ (Duqm Port) ನಿಂತಿದ್ದ ತೈಲ ಟ್ಯಾಂಕರ್ (Oil Tanker) ಎಂಟಿ ಸೆಲೆಸ್ಟಿಯಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯನೊಬ್ಬ ಅಮೆರಿಕ ಸೈನ್ಯದ (US Army) ಸಹಾಯ ಸಿಗದೇ ನರಳಾಡಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೃತನನ್ನು ತಮಿಳುನಾಡು ಮೂಲದ 35 ವರ್ಷದ ಸೆಕೆಂಡ್ ಆಫೀಸರ್ ನಿಶಾಂತ್ ಉರ್ಥನಾಥನ್ (Nishanth Urthanathan) ಎಂದು ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತವಾಗಿ ತಿಳಿಸಿದೆ. ಅದರಲ್ಲೂ, ಅವರ ಮೃತದೇಹ ಇನ್ನೂ ಹಡಗಿನಲ್ಲೇ ಇದ್ದು, ಭಾರತಕ್ಕೆ ಸ್ವದೇಶಕ್ಕೆ ಕಳುಹಿಸಲು ಪ್ರಯತ್ನ ನಡೆಯುತ್ತಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ವರದಿಗಳ ಪ್ರಕಾರ, ಜೂನ್ 8ರಂದು ನಿಶಾಂತ್ ಅವರು ತೀವ್ರವಾಗಿ ಅಸ್ವಸ್ಥಗೊಂಡು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ಹಡಗಿನ ಕ್ಯಾಪ್ಟನ್ ತಕ್ಷಣವೇ ಸ್ಥಳೀಯ ಒಮಾನ್ ಬಂದರು ಅಧಿಕಾರಿಗಳು, ನೌಕಾಪಡೆ ಹಾಗೂ ಅಮೆರಿಕ ನೌಕಾಪಡೆಗೆ ತುರ್ತು ವೈದ್ಯಕೀಯ ನೆರವು ಮತ್ತು ನಿಶಾಂತ್ ಅವರ ಸ್ಥಳಾಂತರಕ್ಕಾಗಿ ಸಂದೇಶ ರವಾನಿಸಿದ್ದರು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕ್ಷಿಪಣಿ ದಾಳಿಗಳು ಮತ್ತು ಭದ್ರತಾ ನಿರ್ಬಂಧಗಳ ಕಾರಣದಿಂದಾಗಿ ಯಾವುದೇ ತಕ್ಷಣದ ಸಹಾಯ ಲಭ್ಯವಾಗಲಿಲ್ಲ. ಮೂರು ದಿನಗಳ ಕಾಲ ಸೂಕ್ತ ಚಿಕಿತ್ಸೆ ಸಿಗದೆ ನರಳಾಡಿದ ನಿಶಾಂತ್, ಜೂನ್ 11ರ ಸಂಜೆ ಹಡಗಿನಲ್ಲೇ ಕೊನೆಯುಸಿರೆಳೆದರು.

ಇದನ್ನೂ ಓದಿ: IAF Aircraft Crash: ಭಾರತೀಯ ವಾಯುಪಡೆಯ AN-32 ವಿಮಾನ ಪತನ! ಘನಘೋರ ದೃಶ್ಯದ ವಿಡಿಯೋ ವೈರಲ್

ಏತನ್ಮಧ್ಯೆ, ನಿಶಾಂತ್ ನಿಧನರಾಗಿ ಎರಡು ದಿನಗಳಿಗಿಂತ ಹೆಚ್ಚು ಸಮಯ ಕಳೆದರೂ ಅವರ ಮೃತದೇಹ ಇನ್ನೂ ಹಡಗಿನಲ್ಲೇ ಉಳಿದುಕೊಂಡಿದೆ. ಹಡಗಿನಲ್ಲಿ ಸೂಕ್ತ ಶೈತ್ಯೀಕರಣ ವ್ಯವಸ್ಥೆ ಇಲ್ಲದ ಕಾರಣ, ಮೃತದೇಹವು ಕೊಳೆಯಲು ಆರಂಭಿಸಿದೆ ಎಂದು ಫಾರ್ವರ್ಡ್ ಸೀಮೆನ್ ಯೂನಿಯನ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಹಡಗಿನ ಸಹ-ಸಿಬ್ಬಂದಿಗಳು ಮೃತದೇಹದ ಸುತ್ತಲೂ ತಣ್ಣೀರಿನ ಬಾಟಲಿಗಳನ್ನು ಇಟ್ಟು ದೇಹ ಕರಗದಂತೆ ಕಾಪಾಡಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ಸೃಷ್ಟಿಸಿದೆ.

ಇದನ್ನೂ ಓದಿ: Iran- US War: ಇರಾನ್-ಯುಎಸ್ ಯುದ್ಧ ಅಂತ್ಯ? ಒಪ್ಪಂದಕ್ಕೆ ಇಂದೇ ಸಹಿ ಎಂದ ಅಮೆರಿಕಾ: ಇರಾನ್ ವಕ್ತಾರ ಹೇಳಿದ್ದೇನು?

ಮುಂದುವರೆದು, ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಘಟನೆ ಕುರಿತು ಮಾಹಿತಿ ನೀಡಿದ್ದು, ತಾವು ನಿಶಾಂತ್ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ. “ಹಡಗು ನಿರ್ವಹಣಾ ಸಂಸ್ಥೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ಸ್ವದೇಶಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports