Last Updated:
ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರ ಲಾಂಚ್ ಆಗಿದೆ. ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ. ಹೈದ್ರಾಬಾದ್ ಅಲ್ಲಿ ನಡೆದ ಈ ಮುಹೂರ್ತ ಕಾರ್ಯಕ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಲಾಂಚ್ ಆಗಿದೆ. ಡೈರೆಕ್ಟರ್ ಬಾಬಿ (Director Bobby) ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಹೈದರಾಬಾದ್ ಅಲ್ಲಿ ಮೇ-21 ರಂದು ಬೆಳಗ್ಗೆ 7.30 ಈ ಚಿತ್ರದ ಮುಹೂರ್ತ ಆಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅಭಿನಯದ ಈ ಚಿತ್ರದ ಮೊದಲ ದೃಶ್ಯಕ್ಕೆ ಸಹೋದರ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಕ್ಲಾಪ್ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಾಬಿ ಡೈರೆಕ್ಷನ್ ಸಿನಿಮಾ
ಇದೇ ತಾತ್ಕಾಲಿಕ ಹೆಸರಿನಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ. ಸಿನಿಮಾದ ಮೊದಲ ದೃಶ್ಯಕ್ಕೆ ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ.
ಈ ಚಿತ್ರದ ಮೊದಲ ದೃಶ್ಯವನ್ನ ದೇವರ ಮುಂದೇನೆ ತೆಗೆಯಲಾಗಿದೆ. ಯಾವುದೇ ಮೇಕ್ಅಪ್ ಇಲ್ಲದೆ ಚಿರಂಜೀವಿ ದೇವರ ಮುಂದೆ ನಿಂತಿದ್ದರು.
ಆಗಲೇ ಸಹೋದರ ಪವನ್ ಕಲ್ಯಾಣ್ ಕ್ಲಾಪ್ ಮಾಡಿದರು. ಈ ರೀತಿ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರ ಜೀವನದ 158 ನೇ ಚಿತ್ರ ಲಾಂಚ್ ಆಗಿದೆ.
ಈ ಒಂದು ಚಿತ್ರದ ಮುಹೂರ್ತಕ್ಕೆ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಒಟ್ಟಿಗೆ ಬಂದಿದ್ದಾರೆ. ಆದರೆ, ಅದ್ಯಾಕೋ ಪುತ್ರ ರಾಮ್ ಚರಣ್ ಮಿಸ್ ಆಗಿದ್ದಾರೆ.
ಪವನ್ ಕಲ್ಯಾಣ್ ಕ್ಲಾಪ್
ಇನ್ನುಳಿದಂತೆ ಚಿತ್ರದ ನಿರ್ಮಾಪಕ ಕೆ.ವಿ. ವೆಂಕಟನಾರಾಯಣ್ ಸೇರಿದಂತೆ ಇನ್ನು ಹಲವು ಗಣ್ಯರು ಈ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದರು. ಹೈದರಾಬಾದ್ ಅಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ.
ಮೆಗಾಸ್ಟಾರ್ ಚಿರಂಜೀವಿ ಮತ್ತು ಡೈರೆಕ್ಟರ್ ಬಾಬಿ ಕೊಲ್ಲಿ ಮತ್ತೊಮ್ಮೆ ಜೋಡಿ ಆಗಿದ್ದಾರೆ. ಈ ಹಿಂದೆ 2023 ರಲ್ಲಿ ವ್ಯಾಲ್ತೇರು ವೀರಯ್ಯ ಅನ್ನುವ ಚಿತ್ರ ಮಾಡಿದ್ದರು. 125 ಕೋಟಿ ಬಜೆಟ್ ಅಲ್ಲಿ ಇದು ರೆಡಿ ಆಗಿತ್ತು. ಬಾಕ್ಸ್ ಆಫೀಸ್ ಅಲ್ಲಿ 236 ಕೋಟಿ ಬಾಚಿಕೊಂಡಿತ್ತು.
ವಿಜಯ್ ಕಾರ್ತಿಕ್ ಕಣ್ಣನ್ ಈ ಚಿತ್ರಕ್ಕೆ ಕ್ಯಾಮರಾರ್ವಕ್ ಮಾಡಿದ್ದಾರೆ. ಪೆದ್ದಿ ಚಿತ್ರದ ಕಲಾ ನಿರ್ದೇಶಕ ಅವಿನಾಶ್ ಕೊಳ್ಳ ಈ ಚಿತ್ರಕ್ಕೆ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಿತ್ಯವೂ ವರ್ಕೌಟ್ ಮಾಡಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರೋದ್ರಿಂದಲೇ ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರಕ್ಕಾಗಿ ಜಿಮ್ ಅಲ್ಲಿ ಬೆವರಿಳಿಸಿದ್ದಾರೆ. ಆ ವಿಡಿಯೋ ಕೂಡ ವೈರಲ್ ಆಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













