Last Updated:
ಗೌರಿ-ಗಣೇಶ ಹಬ್ಬಕ್ಕೆ KSRTC 2,500 ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ. ಮುಂಗಡ ಬುಕಿಂಗ್ಗೆ 5% ಮತ್ತು ಹೋಗಿ-ಬರುವ ಟಿಕೆಟ್ಗಳಿಗೆ 10% ರಿಯಾಯಿತಿ ನೀಡಲಿದೆ.
ಬೆಂಗಳೂರು: ಮನೆ-ಮನಗಳಲ್ಲಿ ಗೌರಿ-ಗಣೇಶ (Ganesha) ಹಬ್ಬದ (Festival) ಸಂಭ್ರಮ ಮನೆ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ, ಊರಿಗೆ ತೆರಳಲು ತವಕಿಸುತ್ತಿರುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಿಹಿ ಸುದ್ದಿಯನ್ನು ನೀಡಿದೆ. ಮುಂಬರುವ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಿಂದ ನಾಡಿನ ಮೂಲೆಮೂಲೆಗೆ ಹಾಗೂ ಅಕ್ಕಪಕ್ಕದ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು KSRTC ಮುಕ್ತ ಮನಸ್ಸಿನಿಂದ ಬೃಹತ್ ಹೆಜ್ಜೆ ಇಟ್ಟಿದೆ. ಹಬ್ಬದ ರಜೆಯಲ್ಲಿ ನೂಕುನುಗ್ಗಲು ಇಲ್ಲದೆ ನೆಮ್ಮದಿಯಿಂದ ಪ್ರಯಾಣಿಸಲು ಅನುಕೂಲವಾಗುವಂತೆ ಸಾರಿಗೆ ನಿಗಮವು ಬರೋಬ್ಬರಿ 2,500 ಹೆಚ್ಚುವರಿ ಬಸ್ಗಳನ್ನು ರಸ್??ಗಿಳಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ.














