Last Updated:
ಕಿಚ್ಚ ಸುದೀಪ್ ಅವರ ತಮಿಳು ಚಿತ್ರ ಅನೌನ್ಸ್ ಆಗಿದೆ. ಅಂಡರ್ -18 ಅನ್ನೋದು ಈ ಚಿತ್ರದ ಶೀರ್ಷಿಕೆ ಆಗಿದೆ. ಆದರೆ, ಈ ಚಿತ್ರದಲ್ಲಿ ಇವರು ಹೀರೋ ಅಲ್ಲ. ಏನು ಅನ್ನೋದು ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಅವರ ನಾಲ್ಕು ಚಿತ್ರಗಳು ಈ ವರ್ಷ ಅನೌನ್ಸ್ ಆಗುತ್ತವೆ. ಅದರಲ್ಲಿ ಒಂದು ಚಿತ್ರವನ್ನ ಸುದೀಪ್ ಡೈರೆಕ್ಷನ್ (Sudeepa Direction) ಮಾಡುತ್ತಾರೆ. ಇನ್ನೊಂದು ಸುಕುಮಾರ್ (Sukumar) ಶಿಷ್ಯ ಡೈರೆಕ್ಷನ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ರೋಮ್ಯಾನ್ಸ್ ಇರುತ್ತದೆ. ಹಾಸ್ಯವು ಇರುತ್ತದೆ ಅನ್ನುವ ಸುದ್ದಿ ಇದ್ದೇ ಇದೆ. ಆದರೆ, ಇದೀಗ ಮತ್ತೊಂದು ಹೊಸ ಚಿತ್ರ ಅನೌನ್ಸ್ ಆಗಿದೆ. ಇದು ತಮಿಳು ಚಿತ್ರವೇ (Tamil Movie) ಆಗಿದೆ. ಈಗಾಗಲೇ ಸುದ್ದಿ ಇರೋ ನಾಲ್ಕು ಚಿತ್ರಗಳಲ್ಲಿ ಇದು ಒಂದಾ? ಈ ಕುತೂಹಲವು ಇದ್ದೇ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಿತ್ರಕ್ಕೆ ಬಂತು ಆನೆ ಬಲ..
ಆದರೆ, ಈ ಚಿತ್ರದಲ್ಲಿ ಸುದೀಪ್ ಲೀಡ್ ರೋಲ್ ಏನು ಮಾಡ್ತಿಲ್ಲ. ಬದಲಾಗಿ ಕಿಚ್ಚ ಸುದೀಪ್ ಕ್ಯಾಮಿಯೋ ರೋಲ್ ಮಾಡಿದ್ದಾರೆ. ಈ ಒಂದು ರೋಲ್ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಇನ್ನು ಯಾವುದು ಉತ್ತರ ಸಿಕ್ಕಿಲ್ಲ. ಆದರೆ, ಈ ಚಿತ್ರದಲ್ಲಿ ಸುದೀಪ್ ಕ್ಯಾಮಿಯೋ ರೋಲ್ ಮಾಡ್ತಿರೋದು ಪಕ್ಕಾ ಆಗಿದೆ.
ಅಂಡರ್ -18 ಚಿತ್ರಕ್ಕೆ ಆನೆ ಬಲವೇ ಬಂದಂತೆ ಆಗಿದೆ. ಈ ವಿಷಯವನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಬಿ.ಜಗದೀಶ್ ಅವರು ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ನಾಯಕ ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿಸಿಎಲ್ ಕ್ರಿಕೆಟ್ ಪಂದ್ಯಗಳಲ್ಲಿ ಚೆನ್ನೈ ರೈನೋಸ್ ತಂಡದಲ್ಲಿ ನಟ ವಿಕ್ರಾಂತ್ ಇದ್ದಾರೆ. ಇವರೇ ಈ ಚಿತ್ರದ ನಾಯಕ ಅನ್ನೋದು ಇದೀಗ ಗೊತ್ತಾಗಿದೆ. ಐಶ್ವರ್ಯ ರಾಜೇಶ್ ಈ ಸಿನಿಮಾದ ನಾಯಕಿ ಆಗಿದ್ದಾರೆ.
ಈ ಹಿಂದೆ ಸುದೀಪ್ ಅವರ ಜೊತೆಗೆ ವಿಕ್ರಾಂತ್ ಅಭಿನಯಿಸಿದ್ದಾರೆ. ಮಾರ್ಕ್ ಚಿತ್ರದಲ್ಲಿ ರುದ್ರ ಅನ್ನುವ ಪಾತ್ರವನ್ನೆ ವಿಕ್ರಾಂತ್ ಮಾಡಿದ್ದಾರೆ. ಈಗ ಇದೇ ವಿಕ್ರಾಂತ್ ಚಿತ್ರದಲ್ಲಿ ಸುದೀಪ್ ಕ್ಯಾಮಿಯೋ ರೋಲ್ ಮಾಡುತ್ತಿದ್ದಾರೆ.
ಟೈಟಲ್ ರಿವೀಲ್ ಮಾಡಿದ್ಯಾರು
ತಮಿಳುನಾಡಿನ ಅಪರಾಧ ಲೋಕದ ಕಥೆಯನ್ನ ಇಲ್ಲಿ ಕಟ್ಟಿಕೊಡಲಾಗುತ್ತಿದೆ. ಆದರೆ, ಡೈರೆಕ್ಟರ್ ಕಾರ್ತಿಕ್ ಪೆರುಮಾಳ್ಸ್ವಾಮಿ ಇಲ್ಲಿ ಎಮೋಷನಲ್ ಕಂಟೆಂಟ್ ಇಟ್ಟಿದ್ದಾರೆ. ಕೌಟುಂಬಿಕ ಸ್ಟೋರಿನೂ ಇಲ್ಲಿದೆ.
ಇಷ್ಟೆಲ್ಲ ವಿಷಯದ ಈ ಚಿತ್ರಕ್ಕೆ ಹೊಸಬರನ್ನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಲೀಡ್ ರೋಲ್; 14 ರಿಂದ 18 ಹಾಗೂ ಯಂಗ್ಸ್ಟರ್ ರೋಲ್; 16 ರಿಂದ 24 ಮತ್ತು ಕ್ಯಾರೆಕ್ಟರ್ ರೋಲ್; 30 ರಿಂದ 40 ವರ್ಷದವರ ಆಡಿಷನ್ ಕೂಡ ಮಾಡಲಾಗಿದೆ.
ಈ ಚಿತ್ರದ ಟೈಟಲ್ ಅನ್ನ ಡೈರೆಕ್ಟರ್ ವೆಟ್ರಿಮಾರನ್ ರಿಲೀಸ್ ಮಾಡಿದ್ದಾರೆ. ಇವರೇ ರಿಲೀಸ್ ಮಾಡೋಕೆ ಕಾರಣವೂ ಇದೆ. ಹೌದು, ಚಿತ್ರದ ಕಾರ್ತಿಕ್ ಪೆರುಮಾಳ್ಸ್ವಾಮಿ ಬೇರೆ ಯಾರೋ ಅಲ್ಲ. ಇದೇ ವೆಟ್ರಿಮಾರನ್ ಶಿಷ್ಯನೇ ಈ ಕಾರ್ತಿಕ್ ಪೆರುಮಾಳ್ ಸ್ವಾಮಿ ಆಗಿದ್ದಾರೆ. ಇನ್ನುಳಿದಂತೆ ಕಿಚ್ಚ ಸುದೀಪ್ ಪಾತ್ರದ ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
May 29, 2026 11:40 AM IST













