ಇಡೀ ವಾರ ದೊಡ್ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಸೌಂಡ್ ಮಾಡಿದ್ದಾರೆ. ಮಾಡರ್ನ್ ಕವಿ ಮಂಜ್ಯಾ ಅಬ್ಬರಿಸಿ ಬೊಬ್ಬಿರಿದ್ದಾರೆ. ಕಿರಣ್ ಶಾಸ್ತ್ರಿ ಅಂತಲೂ ಬಾಯಿಗೆ ಬಂದಂತೆ ಬೈದಾಡಿದ್ದಾರೆ.
ಯಾರಿಗೆ ಕ್ಲಾಸ್
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಬಿಗ್ ಬಾಸ್ ಸೀಸನ್-10 ಆದ್ಮೇಲೆ “ಬಳೆ ಹಾಕಿಕೋ” ಅಂತ ಯಾರೂ ಹೇಳಿರಲಿಲ್ಲ. ಆದರೆ, ಕಿರಣ್ ಶಾಸ್ತ್ರಿ ಆ ಕೆಲಸ ಮಾಡಿದ್ದಾರೆ.
ಇದರಿಂದ ಭಾರೀ ಸದ್ದು ಆಗುತ್ತದೆ ಅನ್ನುವ ನಿರೀಕ್ಷೆ ಇತ್ತು. ಆ ರೀತಿ ಏನೂ ಆಗಲಿಲ್ಲ. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ ಕ್ಲಾಸ್ ಇರುವಂತೆ ಕಾಣುತ್ತದೆ.
ಈ ಒಂದು ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಅವಕಾಶ ಕೊಟ್ಟ ವೇದಿಕೆಗೆ ಕೆಲವು ಸ್ಪರ್ಧಿಗಳು ಗೌರವ ಕೊಡ್ತಾ ಇದ್ದಾರಾ? ಮಾತುಗಳು ಅವಶ್ಯಕತೆಯ ಮಿತಿ ಮೀರ್ತಾ ಇದಿಯಾ?
ಈ ವಾರದ ಕಿಚ್ಚನ ಪಂಚಾಯ್ತಿ ಜೋರಾಗಿಯೇ ಆಗುವಂತೆ ಇದೆ. ಕಳೆದ ವಾರದ ಪಂಚಾಯ್ತಿಯಲ್ಲಿ ವಿಷಯ ಇತ್ತು. ಅದು ಒಂದು ಹಂತಕ್ಕೆ ಇತ್ತು.
ಆದರೆ, ಈ ವಾರದ ಪಂಚಾಯ್ತಿಯಲ್ಲಿ ಸಾಕಷ್ಟು ವಿಷಯ ಇರುತ್ತವೆ. ಕಾರಣ, ಇಡೀ ವಾರ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಸೌಂದರ್ಯ ಶೆಟ್ಟಿ ಇಲ್ಲಿ ಮಾಡರ್ನ್ ಕವಿ ಮಂಜ್ಯಾನಿಗೆ ಹೊಡೆದಿದ್ದಾರೆ. ಮಂಜ್ಯಾ ಕೂಡ ಸೌಂದರ್ಯ ಮೇಲೆ ಅಬ್ಬರಿಸಿ ಹೋಗಿದ್ದಾರೆ.
ವೇದಿಕೆಗೆ ಗೌರವ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಅವಿನಾಶ್ ಅವರು ಸೈಲೆಂಟ್ ಆಗಿಯೇ ಇದ್ದವರು. ಆದರೆ, ಮಂಜ್ಯಾನ ಕಾಟಕ್ಕೆ ಸಿಟ್ಟಾಗಿದ್ದಾರೆ. ಬಾಯಿಗೆ ಬಂದಂತೆ ಬೈದಾಡಿದ್ದಾರೆ. ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಒಡೆದು ಹಾಕಿದ್ದಾರೆ.
ಇನ್ನು ಕಿರಣ್ ಶಾಸ್ತ್ರಿ ಅಂತೂ ಬೈದಾಡಿ ಬಿಟ್ಟಿದ್ದಾರೆ. ಈ ಎಲ್ಲ ವಿಷಯವನ್ನ ಇಟ್ಟುಕೊಂಡು ಕಿಚ್ಚ ಸುದೀಪ್ ಮಾತನಾಡುತ್ತಾರೆ. ಯಾರಿಗೆ ಏನು ಹೇಳ್ಬೇಕೋ ಅದನ್ನ ಹೇಳ್ತಾರೆ. ಯಾರಿಗೆ ಸರಿಯಾಗಿಯೇ ಹೇಳ್ಬೇಕೋ ಹಾಗೇನೆ ಹೇಳ್ತಾರೆ ನೋಡಿ.
ಈ ಮೂಲಕ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಏನು ಇರುತ್ತದೆ ಅನ್ನೋದರ ಝಲಕ್ ಕೂಡ ಕೊಟ್ಟಿದೆ ಅಂತ ಹೇಳಬಹುದು.













