Kethan Agarwal Case: ಕೇತನ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್‌: ಆಕೆಗೆ ಹೋಗಲು ಇಷ್ಟವಿರಲಿಲ್ಲ ಎಂದ ಸಿಯಾಳ ಅಮ್ಮ! ಒತ್ತಾಯ ಮಾಡಿದ ವ್ಯಕ್ತಿ ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕೇತನ್ ಹಾಗೂ ಸಿಯಾ


Last Updated:

ಹೌದು, ಕೇತನ್ ಕೊಲೆ ಆರೋಪಿ ಸಿಯಾ ಗೋಯಲ್ ಅವರ ತಾಯಿ, ತಮ್ಮ ಮಗಳು ಕೇತನ್ ಅಗರ್ವಾಲ್ ಅವರೊಂದಿಗೆ ಲೋಹಗಡ್ ಕೋಟೆ ಚಾರಣಕ್ಕೆ ಹೋಗಲು ಹಿಂಜರಿಯುತ್ತಿದ್ದಳು ಎಂದು ಹೇಳಿದ್ದಾರೆ.

ಕೇತನ್ ಹಾಗೂ ಸಿಯಾ
ಕೇತನ್ ಹಾಗೂ ಸಿಯಾ

ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೇತನ್ ಜೊತೆ ನಿಶ್ಚಿತಾರ್ವಾಗಿದ್ದ ಸಿಯಾ ಗೋಯಲ್‌ಗೆ ಲೋಹಗಡ್ ಕೋಟೆಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಕೇತನ್ ಅವರ ತಾಯಿಯ ಒತ್ತಾಯದ ಮೇರೆಗೆ ಅವರು ಹೋಗಿದ್ದರು ಎಂದು ಸಿಯಾ ಅವರ ತಾಯಿ ಹೇಳಿದ್ದಾರೆ. ಹೌದು, ಕೇತನ್ ಕೊಲೆ ಆರೋಪಿ ಸಿಯಾ ಗೋಯಲ್ ಅವರ ತಾಯಿ, ತಮ್ಮ ಮಗಳು ಕೇತನ್ ಅಗರ್ವಾಲ್ ಅವರೊಂದಿಗೆ ಲೋಹಗಡ್ ಕೋಟೆ ಚಾರಣಕ್ಕೆ ಹೋಗಲು ಹಿಂಜರಿಯುತ್ತಿದ್ದಳು ಎಂದು ಹೇಳಿದ್ದಾರೆ. ಚಾರಣಕ್ಕೆ ಹೋಗುವ ಹಿಂದಿನ ದಿನದವರೆಗೂ ಆಕೆ ಹೋಗಲು ಸಿದ್ಧವಿರಲಿಲ್ಲ. ಒಂದು ದಿನ ಮೊದಲು ಕೇತನ್ ತಾಯಿಯೇ ಸಿಯಾಗೆ ಫೋನ್ ಮಾಡಿ ಟ್ರೆಕ್ಕಿಂಗ್‌ಗೆ ಹೋಗುವಂತೆ ಒತ್ತಾಯಿಸಿದ್ದರು. ಅವರಿಬ್ಬರ ನಡುವಿನ ಸಂಭಾಷಣೆಯೂ ದಾಖಲಾಗಿದೆ ಎಂದು ಹೇಳಿದ್ದಾರೆ.

HT ವರದಿಯ ಪ್ರಕಾರ, ಆರೋಪಿ ಸಿಯಾ ಗೋಯಲ್ ಅವರ ತಾಯಿ ಪೂಜಾ ಗೋಯಲ್ ಅವರು ಘಟನೆಯ ಹಿಂದಿನ ರಾತ್ರಿ ಸಿಯಾ ಮತ್ತು ಕೇತನ್ ನಡುವೆ ವಿಡಿಯೋ ಕರೆ ಮೂಲಕ ಸಂಬಾಷಣೆ ನಡೆದಿತ್ತು ಎಂದು ಹೇಳಿದ್ದಾರೆ. ವಿಡಿಯೋ ಕರೆಯ ಸಮಯದಲ್ಲಿ ಅವರು ಲೋಹಗಡ್ ಚಾರಣ ಬಗ್ಗೆ ಚರ್ಚಿಸಿದರು. ಕೇತನ್ ಅವರ ತಾಯಿಯೂ ಜಾಯಿನ್ ಆಗಿದ್ದರು. ಈ ವೇಳೆ ಸಿಯಾ ಹೋಗಲು ಬಯಸುವುದಿಲ್ಲ ಎಂದು ಹೇಳಿದರು, ಆದರೆ ಕೇತನ್ ಅವರ ತಾಯಿ ಸಿಯಾಳನ್ನು ಕೇತನ್ ಜೊತೆ ಹೋಗಲು ಮನವೊಲಿಸಿದರು ಎಂದು ಅವರು ಹೇಳಿದರು.

‘ಕೇತನ್‌ ತಾಯಿಯೇ ಒತ್ತಾಯಿಸಿದ್ದು’

“ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗಿದೆ. ಸಿಯಾ ತಾನು ಹೋಗಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ, ಆದರೆ ಕೇತನ್ ಅವಳ ಮನವೊಲಿಸಲು ಪ್ರಯತ್ನಿಸುತ್ತಿದ್ದ” ಎಂದು ಸಿಯಾಳ ತಾಯಿ ಪೂಜಾ ಹೇಳಿದರು. ಈ ಲೋಹಗಢ ಕೋಟೆಯು ಸಿಯಾ ಮತ್ತು ಅವಳ ಪ್ರೇಮಿ ಚೇತನ್ ಚೌಧರಿ ಕೇತನ್ ಅಗರ್ವಾಲ್ ಅವರನ್ನು ತಳ್ಳಿದ ಸ್ಥಳವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದೇ ಲೋಹಗಢ ಕೋಟೆಗೆ ಟ್ರೆಕ್ ಮಾಡುವಾಗ ಕೇತನ್ ಕೊಲೆಯಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಯಾ ಮತ್ತು ಅವಳ ಪ್ರೇಮಿ ಚೇತನ್ ಚೌಧರಿಯನ್ನು ಬಂಧಿಸಿದ್ದಾರೆ ಮತ್ತು ತನಿಖೆ ಮುಂದುವರೆದಿದೆ.

“ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ”

ಸಿಯಾಳ ತಾಯಿ ಪೂಜಾ, ಸಿಯಾ ಮತ್ತು ಕೇತನ್ ಅವರ ಮದುವೆಗೆ ಕುಟುಂಬವು ಸಿದ್ಧತೆ ನಡೆಸುತ್ತಿತ್ತು ಎಂದು ಹೇಳಿದರು. ಸಿಯಾಳ ತಾಯಿ ಪೂಜಾ, ತಮ್ಮ ಮಗಳು ಈ ಸಂಬಂಧದ ಬಗ್ಗೆ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ. “ಸಿಯಾ ಮತ್ತು ಕೇತನ್ ಅವರ ಮದುವೆಯ ಬಗ್ಗೆ ಕುಟುಂಬವು ಹೆಚ್ಚಿನ ಭರವಸೆಗಳನ್ನು ಹೊಂದಿತ್ತು. ಬಹಳಷ್ಟು ಪ್ರೀತಿ ಇತ್ತು. ಕೇತನ್ ಅವರ ಕುಟುಂಬವು ಸಹ ಸಿಯಾಳನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಂಡಿತು. ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿದ್ದವು. ಸಿಯಾ ಅವರ ಹುಟ್ಟುಹಬ್ಬವನ್ನು ಆಚರಿಸಲು ಅವರು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದರು” ಎಂದಿದ್ದಾರೆ.

“ಚೇತನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ”

ಕೇತನ್ ಮತ್ತು ಸಿಯಾ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಕುಟುಂಬಕ್ಕೆ ಅದು ತಿಳಿದಿರುತ್ತಿತ್ತು ಎಂದು ಅವರು ಹೇಳಿದರು. “ಸಿಯಾಗೆ ಸಮಸ್ಯೆಗಳಿವೆ ಅಥವಾ ಕೇತನ್ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ನಮಗೆ ಅನಿಸಿದ್ದರೆ, ಅವರು ನಮ್ಮೊಂದಿಗೆ ಅದರ ಬಗ್ಗೆ ಮಾತನಾಡುತ್ತಿದ್ದರು. ಈ ಮದುವೆಯ ಬಗ್ಗೆ ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಲಿಲ್ಲ.” ಸಿಯಾ ಮತ್ತು ಚೇತನ್ ನಡುವಿನ ಯಾವುದೇ ಸಂಬಂಧದ ಬಗ್ಗೆ ಕುಟುಂಬಕ್ಕೆ ತಿಳಿದಿಲ್ಲ ಎಂದು ಪೂಜಾ ಹೇಳಿಕೊಂಡರು.

“…ಹಾಗಾದರೆ ನನ್ನ ಮಗಳನ್ನೂ ಅಲ್ಲಿಂದ ತಳ್ಳಿ”

ಪೂಜಾ ಮಾತನಾಡಿ, “ನಮಗೆ ಚೇತನ್ ಬಗ್ಗೆ ಏನೂ ತಿಳಿದಿರಲಿಲ್ಲ. ನಿಶ್ಚಿತಾರ್ಥದ ನಂತರ, ಅವಳು ಕೇತನ್ ಜೊತೆ ಮಾತ್ರ ಮಾತನಾಡಿದ್ದಳು.” ಈ ಅಪರಾಧದಲ್ಲಿ ತನ್ನ ಮಗಳು ಭಾಗಿಯಾಗಿದ್ದಾಳೆಂದು ತಾನು ನಂಬುವುದಿಲ್ಲ ಎಂದು ಪೂಜಾ ಹೇಳಿದರು. ಸಿಯಾ ತಪ್ಪಿತಸ್ಥೆ ಎಂದು ಸಾಬೀತಾದರೆ, ಅವಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು. “ನನ್ನ ಮಗಳು ತಪ್ಪಿತಸ್ಥೆ ಎಂದು ಕಂಡುಬಂದರೆ, ಕೇತನ್ ಅನ್ನು ಎಸೆದ ಸ್ಥಳದಿಂದಲೇ ಅವಳನ್ನು ಕೆಳಗೆ ತಳ್ಳಬೇಕು” ಎಂದು ಅವರು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed