Last Updated:
ಕರಾವಳಿ ಸಿನಿಮಾವನ್ನ ಮಂಗಳೂರು ಜನ ಮೆಚ್ಚಿಕೊಂಡಿದ್ದಾರೆ. ಮಹಾಬಲ ಪಾತ್ರಧಾರಿ ಮಿತ್ರ ಮತ್ತು ಮಹಾವೀರ್ ಪಾತ್ರಧಾರಿ ರಾಜ್ ಬಿ ಶೆಟ್ಟಿ ಅವರನ್ನ ಅತಿ ಹೆಚ್ಚು ಇಷ್ಟಪಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ಪಾತ್ರಕ್ಕೂ ಮೆಚ್ಚುಗೆ ಬಂದಿವೆ. ಪ್ರೀಮಿಯರ್ ಅಲ್ಲಿ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಕರಾವಳಿ ಚಿತ್ರವನ್ನ (Karavali Movie) ಮಂಗಳೂರಿನ ಮಂದಿ ನೋಡಿದ್ದಾರೆ. ರಿಲೀಸ್ ಮುಂಚೇನೆ ಮಂಗಳೂರಿನಲ್ಲಿ ಒಂದು ಪ್ರೀಮಿಯರ್ ಶೋ ಆಗಿದೆ. ಜುಲೈ-19 ರಂದು ಭಾನುವಾರ ಇಲ್ಲಿ ಪ್ರೀಮಿಯರ್ ಶೋ (Premiere Show) ಆಗಿದೆ. ಇದರಲ್ಲಿ ಚಿತ್ರ ನೋಡಿದ ಮಂದಿಗೆ ಇಡೀ ಚಿತ್ರ ಸುಮಾರು ವಿಚಾರಗಳಿಗೆ ಇಷ್ಟ ಆಗಿದೆ. ಮಹಾಬಲ ಪಾತ್ರಧಾರಿ ಮಿತ್ರ ಅವರ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ. ಮಾಹವೀರ ಪಾತ್ರಧಾರಿ ರಾಜ್ ಬಿ ಶೆಟ್ಟಿ (Raj B Shetty) ಅವರ ಕೆಲಸವನ್ನ ಕೊಂಡಾಡಿದ್ದಾರೆ. ಪ್ರಜ್ವಲ್ ದೇವರಾಜ್ (Prajwal Devaraj) ಪಾತ್ರದ ಬಗ್ಗೆನೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಎಲ್ಲ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಜ್ಗಾಗಿಯೇ ಬಂದೆ
ಈ ಚಿತ್ರದ ಕತೆಯಲ್ಲಿ ಮಹಾಬಲ ಪಾತ್ರಧಾರಿ ಮಿತ್ರ ಅವರ ಪಾತ್ರಕ್ಕೆ ಅತಿ ಹೆಚ್ಚು ಪ್ರಶಂಸೆ ಬಂದಿದೆ. ಜೀವನದಲ್ಲಿ ಒಮ್ಮೆ ಈ ರೀತಿಯ ರಿಯಾಕ್ಷನ್ ಪಡೆಯಬೇಕು ಅಂತ ಆಸೆ ಇತ್ತು. ಅದು ಈ ಕರಾವಳಿ ಚಿತ್ರದಿಂದ ಸಿಕ್ಕಿದೆ ಅಂತ ಮಹಾಬಲ ಪಾತ್ರಧಾರಿ ಮಿತ್ರ ಹೇಳಿಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮಹಾವೀರ ಅನ್ನುವ ಪಾತ್ರ ಮಾಡಿದ್ದಾರೆ. ಮಹಾವೀರ ಮತ್ತು ಮಹಾಬಲ ಎರಡು ಪಾತ್ರಗಳು ಈ ಚಿತ್ರದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿವೆ.
ಮೊದಲ ಪ್ರೀಮಿಯರ್ ಅಲ್ಲಿಯೇ ಚಿತ್ರ ನೋಡಿದ ಮಂಗಳೂರು ಮಂದಿ ಈ ಅಭಿಪ್ರಾಯ ಪಟ್ಟಿದ್ದಾರೆ. ಇವರಿಗೆ ಪ್ರಜ್ವಲ್ ದೇವರಾಜ್ ಪಾತ್ರವು ಇಷ್ಟ ಆಗಿದೆ. ಅದನ್ನು ಇಲ್ಲಿ ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಮಹಾಬಲ ಮಿತ್ರ ಮತ್ತು ಮಹಾವೀರ ರಾಜ್ ಬಿ ಶೆಟ್ಟಿ ಪಾತ್ರ ಹೆಚ್ಚು ಇಷ್ಟ ಆಗಿದೆ ನೋಡಿ.
ಕರಾವಳಿ ಚಿತ್ರವನ್ನ ರಾಜ್ ಬಿ ಶೆಟ್ಟಿಗಾಗಿಯೇ ನೋಡಿದವರು ಇದ್ದಾರೆ. ಅದನ್ನ ಒಬ್ಬ ಯುವತಿ ಹೇಳಿಕೊಳ್ತಾರೆ. ನಾನು ಈ ಚಿತ್ರವನ್ನ ರಾಜ್ ಬಿ ಶೆಟ್ಟಿ ಅವರು ಇದರಲ್ಲಿ ಇದ್ದಾರೆ ಅಂತಲೇ ನೋಡೋಕೆ ಬಂದೆ ಅಂತಲೇ ಹೇಳಿಕೊಂಡಿದ್ದಾರೆ.
ಕರಾವಳಿ ಸಿನಿಮಾ ಹೇಗಿದೆ
ಚಿತ್ರದ ಫಸ್ಟ್ ಹಾಫ್ ಒಂದು ರೀತಿ ಇಷ್ಟ ಆಗಿದೆ. ಸಿನಿಮಾದ ಸೆಕೆಂಡ್ ಹಾಫ್ ಅಂತಲೂ ಅಷ್ಟೆ ಖುಷಿಕೊಟ್ಟಿದೆ. ಚಿತ್ರದ ಡೈರೆಕ್ಷನ್ಗೂ ಮೆಚ್ಚುಗೆ ವ್ಯಕ್ತವಾಗಿದೆ.
ಕರಾವಳಿ ಚಿತ್ರ ಎಮೋಷನಲ್ ಕೂಡ ಮಾಡಿದೆ. ಸಿನಿಮಾ ನೋಡ್ತಾನೆ ಕೆಲವರು ಕಣ್ಣೀರಾಗಿರೋದು ಇದೆ. ಇದನ್ನು ಪ್ರೀಮಿಯರ್ ಶೋದ ವಿಡಿಯೋದಲ್ಲಿ ನೋಡಬಹುದು.
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಇದು ಈ ದಿನ ತೆರೆ ಕಾಣುತ್ತಿದೆ. ಪ್ರಜ್ವಲ್ ದೇವರಾಜ್ ಮತ್ತು ಸಂಪದ ಅಭಿನಯದ ಈ ಚಿತ್ರದಲ್ಲಿ ಮಹಾಬಲ ಪಾತ್ರದಲ್ಲಿ ಮಿತ್ರ ನಟಿಸಿದ್ದಾರೆ.
ಮಹಾವೀರ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಇವರ ಈ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಪಕರಲ್ಲಿ ಇವರೂ ಒಬ್ಬರಾಗಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 20, 2026 11:09 AM IST














