Last Updated:
ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್ ವೆದರ್ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ.
ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್ಗಳನ್ನು (Nature Signal) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ ಬಂದಿದೆ. ಹಳ್ಳಿಗಳಲ್ಲಿ ಒಂದು ಹಳೆಯ ನಂಬಿಕೆ ಇದೆ, ಯಾವ ವರ್ಷ ಮರಗಳಿಂದ ಅತೀ ಹೆಚ್ಚು ನೇರಳೆ ಹಣ್ಣು (Jamun Fruit) ಹಾಗೂ ಹಲಸು (Jackfruit) ಕೆಳಗೆ ಬಿದ್ದು ಕೊಳೆಯುತ್ತವೋ, ಆ ವರ್ಷ ಭೀಕರ ಬರಗಾಲ ಬರುತ್ತದೆ ಎಂಬುದು ಹಳ್ಳಿಯ ಜನ ನಂಬಿಕೆಯಾಗಿದೆ (Village People Believe). ಸದ್ಯ ಈ ದೃಶ್ಯಗಳು ಹಲವು ಕಡೆ ಕಂಡು ಬರುತ್ತಿದ್ದು, ಹಾಗಾದರೆ ಇದು ನಿಜವೇ? ಭವಿಷ್ಯದ ಬಗ್ಗೆ ಪ್ರಕೃತಿ ನೀಡುತ್ತಿರುವ ಮುನ್ಸೂಚನೆಯೇ? ಇದರ ಹಿಂದಿರುವ ಅಸಲಿ ಸತ್ಯವೇನು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ (Social Media Post) ಜೋರಾಗಿದೆ. ಈ ಹಿನ್ನೆಲೆಯಲ್ಲಿ ABP ನ್ಯೂಸ್ ವರದಿಯನ್ನು ಪ್ರಕಟಿಸಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೃಷಿ ಮತ್ತು ಸಸ್ಯಶಾಸ್ತ್ರ ತಜ್ಞರ ಪ್ರಕಾರ, ಈ ರೀತಿ ನೇರಳೆ ಹಣ್ಣು ಬಿಡುವುದು ಈ ಹಿಂದೆ ಯಾವುದೇ ಬರಗಾಲದ ವೈಜ್ಞಾನಿಕ ಆಧಾರವಿಲ್ಲ. ಮರಗಳು ತಮ್ಮ ಸುತ್ತಮುತ್ತ ಆಗುವ ಸಣ್ಣಪುಟ್ಟ ಪ್ರಕೃತಿ ಬದಲಾವಣೆಗಳಿಗೂ ಸ್ಪಂದಿಸುತ್ತವೆ. ತಾಪಮಾನ ಏರಿಕೆ, ಮಣ್ಣಿನಲ್ಲಿ ತೇವಾಂಶ ಕೊರತೆ ಮತ್ತು ಅಂತರ್ಜಲ ಮಟ್ಟ ಕುಸಿತದಂತಹ ಕಠಿಣ ಪರಿಸ್ಥಿತಿಯಲ್ಲಿ ಮರಗಳು ತಮ್ಮನ್ನು ತಾವು ಉಳಿಸಿಕೊಳ್ಳಲು ʻಸರ್ವೈವಲ್ ಮೆಕಾನಿಸಂʼ ಆಕ್ಟಿವೇಟ್ ಮಾಡಿಕೊಳ್ಳುತ್ತವೆ. ಈ ಸಮಯದಲ್ಲಿ ಮರಗಳು ಹೊಸ ಎಲೆಗಳು ಅಥವಾ ಕೊಂಬೆಗಳನ್ನು ಬೆಳೆಸುವ ಬದಲು ತನ್ನ ಸಂತತಿಯನ್ನು ಉಳಿಸಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ಹಣ್ಣು ಅಥವಾ ಬೀಜಗಳನ್ನು ಉತ್ಪಾದಿಸಲು ಬಳಸಿಕೊಳ್ಳುತ್ತವೆ. ಇದನ್ನು ವಿಜ್ಞಾನಿಗಳು ʻರಿಪ್ರೊಡಕ್ಟೀವ್ ರೆಸ್ಪಾನ್ಸ್ʼ ಎಂದು ಕರೆಯುತ್ತಾರೆ. ನೇರಳೆ ಹಾಗೂ ಹಲಸಿನ ಮರದ ಬೇರುಗಳು ಆಳವಾಗಿ ಭೂಮಿಯಲ್ಲಿ ಹರಡಿರುವ ಕಾರಣ ಅವು ಅಂತರ್ಜಲದ ಬದಲಾವಣೆಗಳನ್ನು ಬೇಗ ಗಮನಿಸುತ್ತವೆ ಎಂದು ಎಬಿಪಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್
ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್ ವೆದರ್ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಾಲಿಟಿ ಆಧಾರಿಸಿ ಪ್ರತಿ ಕೆಜಿಗೆ 200 ರಿಂದ 300 ರೂಪಾಯಿ ದರದಲ್ಲಿ ಹಣ್ಣುಗಳು ಮಾರಾಟವಾಗುತ್ತಿವೆ. ರೈತರು ಮತ್ತು ವ್ಯಾಪಾರಿಗಳಿಗೆ ಉತ್ತಮ ಆದಾಯ ತಂದುಕೊಡುತ್ತಿದೆ.













