IND A vs SL A: ಶ್ರೀಲಂಕಾ ವಿರುದ್ಧ ಪ್ರಿಯಾಂಶ್ ಆರ್ಯ ವಿಚಿತ್ರ ರನೌಟ್! ವಿವಾದ ಸೃಷ್ಟಿಸಿದ ಅಂಪೈರ್ ನಿರ್ಧಾರ | ಕ್ರೀಡಾ ಸುದ್ದಿ | ACTPnews

ಭಾರತ ಎ vs ಶ್ರೀಲಂಕಾ ಎ


Last Updated:

ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಯಂಗ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ವಿಚಿತ್ರ ರೀತಿಯಲ್ಲಿ ರನೌಟ್ ಆದರು.

ಭಾರತ ಎ vs ಶ್ರೀಲಂಕಾ ಎ
ಭಾರತ ಎ vs ಶ್ರೀಲಂಕಾ ಎ

ಭಾರತ ಎ (India A) ಮತ್ತು ಶ್ರೀಲಂಕಾ ಎ (Sri Lanka A) ನಡುವಿನ ತ್ರಿಕೋನ ಏಕದಿನ (ODI) ಸರಣಿಯ ಉದ್ಘಾಟನಾ ಪಂದ್ಯದಲ್ಲಿ ಅಪರೂಪದ ಘಟನೆ ನಡೆಯಿತು. ಈ ಘಟನೆಯಿಂದಾಗಿ ಕ್ರಿಕೆಟ್ (Cricket) ಮೈದಾನದಲ್ಲಿ ಅಭಿಮಾನಿಗಳು (Fans) ಮತ್ತು ಅಂಪೈರ್‌ಗಳು (Umpires) ಗೊಂದಲಕ್ಕೊಳಗಾದರು. ಪಂದ್ಯದ ಸಮಯದಲ್ಲಿ, ಭಾರತದ ಇನ್ನಿಂಗ್ಸ್‌ನಲ್ಲಿ ಈ ಘಟನೆ ನಡೆಯಿತು. ಕ್ರೀಸ್​​ನಲ್ಲಿದ್ದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಮತ್ತು ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ (Priyansh Arya) ಇಬ್ಬರೂ ನಾನ್-ಸ್ಟ್ರೈಕರ್‌ನ ತುದಿಗೆ ಓಡಿಹೋದರು. ಈ ವಿಚಿತ್ರ ರನೌಟ್ ನಾಟಕದಲ್ಲಿ ಪ್ರಿಯಾಂಶ್ ಆರ್ಯ ವಿಕೆಟ್ (Wicket) ಕಳೆದುಕೊಂಡರು.

ಶ್ರೀಲಂಕಾ ಎ ವಿಕೆಟ್ ಕೀಪರ್ ಕಾಲಿನ ಕೆಳಗೆ ಪ್ರಿಯಾಂಶ್ ಅವರ ಬ್ಯಾಟ್ ಸಿಲುಕಿಕೊಂಡ ಕಾರಣ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಅಂಪೈರ್ ಪ್ರಿಯಾಂಶ್ ಅವರನ್ನು ರನೌಟ್ ಎಂದು ಘೋಷಿಸಿದರು. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಪಂದ್ಯದಲ್ಲಿ ರನೌಟ್ ಆಗಿದ್ದೇಗೆ?

13 ನೇ ಓವರ್‌ನಲ್ಲಿ, ರುತುರಾಜ್ ಗಾಯಕ್ವಾಡ್ ಚೆಂಡನ್ನು ಲಾಂಗ್-ಆಫ್ ಕಡೆಗೆ ಆಡಿದರು. ಇನ್ನೊಂದು ತುದಿಯಲ್ಲಿದ್ದ ಪ್ರಿಯಾಂಶ್ ಆರ್ಯ ಎರಡನೇ ರನ್‌ಗೆ ಕರೆ ನೀಡಿದರು. ಆರಂಭದಲ್ಲಿ ಒಪ್ಪಿದ ಪ್ರಿಯಾಂಶ್ ನಂತರ ಅನುಮಾನಗೊಂಡರು. ಕೊನೆಗೆ, ಇಬ್ಬರೂ ಒಂದೇ ತುದಿಯನ್ನು ತಲುಪಿದಾಗ, ಪ್ರಿಯಾಂಶ್ ಕ್ರೀಸ್‌ಗೆ ಹಿಂತಿರುಗಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ, ಪ್ರಿಯಾಂಶ್ ಅವರ ಬ್ಯಾಟ್ ಲಂಕಾ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರ ಕಾಲಿನ ಕೆಳಗೆ ಸಿಲುಕಿಕೊಂಡಿತು. ಇದರಿಂದಾಗಿ, ಕ್ರೀಸ್ ತಲುಪುವ ಮೊದಲೇ ಅವರು ರನೌಟ್ ಆದರು.

ಇದನ್ನೂ ಓದಿ: Suryakumar Yadav: ಫಾರ್ಮ್ ಸಮಸ್ಯೆಯಲ್ಲ! ಸೂರ್ಯಕುಮಾರ್​​ರನ್ನ ಭಾರತ ತಂಡದಿಂದ ಕೈಬಿಡಲು ಕಾರಣ ಇದೇನಾ?

ರಿಪ್ಲೇಯಲ್ಲಿ ಪ್ರಿಯಾಂಶ್ ಅವರ ಬ್ಯಾಟ್ ವಿಕೆಟ್ ಕೀಪರ್ ಕಾಲಿನ ಕೆಳಗೆ ಸಿಲುಕಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿತು. ಮೂರನೇ ಅಂಪೈರ್ ಅದನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ಔಟ್ ಎಂದು ಘೋಷಿಸಿದ್ದು ಈಗ ಚರ್ಚೆಯ ವಿಷಯವಾಗಿದೆ. ಲಂಕಾ ವಿಕೆಟ್ ಕೀಪರ್ ಕಾಲಿನ ಕೆಳಗೆ ಬ್ಯಾಟ್ ಹೋಗದಿದ್ದರೆ ಪ್ರಿಯಾಂಶ್ ಮೊದಲೇ ಕ್ರೀಸ್‌ಗೆ ತಲುಪುತ್ತಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಿಯಾಂಶ್ ಆರ್ಯ ಅವರ ರನೌಟ್ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ನಿಯಮಗಳ ಪ್ರಕಾರ ಯಾರು ಔಟ್? 

ಕ್ರಿಕೆಟ್ ನಿಯಮಗಳ ಪ್ರಕಾರ, ಇಬ್ಬರು ಬ್ಯಾಟ್ಸ್‌ಮನ್‌ಗಳು ಒಂದೇ ತುದಿಯನ್ನು ತಲುಪಿದಾಗ, ಮೊದಲು ಕ್ರೀಸ್ ಅನ್ನು ಮುಟ್ಟಿದ ಬ್ಯಾಟ್ಸ್‌ಮನ್ ಸೇಫ್ ಆಗುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪ್ರಿಯಾಂಶ್ ಆರ್ಯ ಅವರ ಬ್ಯಾಟ್ ಕೀಪರ್‌ನ ಶೂಗೆ ತಗುಲಿ ಕ್ರೀಸ್ ಹೊರಗೆ ಉಳಿಯಿತು. ಹೀಗಾಗಿ ರುತುರಾಜ್ ಗಾಯಕ್ವಾಡ್ ಮೊದಲಿ ಕ್ರೀಸ್ ದಾಟಿದರು. ಪ್ರಿಯಾಂಶ್ ಅವರ ಬ್ಯಾಟ್ ತಾಂತ್ರಿಕವಾಗಿ ಕ್ರೀಸ್‌ನೊಳಗೆ ಇಲ್ಲದ ಕಾರಣ, ಅಂಪೈರ್ ಪ್ರಿಯಾಂಶ್ ಆರ್ಯ ರನೌಟ್ ಎಂದು ಘೋಷಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed