Last Updated:
ಕುಟುಂಬದ ಇತರ ಸದಸ್ಯರು ಪೊಲೀಸರಿಗೆ ಕರೆ ಮಾಡುತ್ತಾರೆ ಎಂಬ ಭಯದಿಂದ ಆರೋಪಿಗಳು ಗಣಪತಿಯ ಮಗಳನ್ನೂ ಕೊಂದಿದ್ದಾರೆ. ಗಣಪತಿಯ ಮಲಗಿದ್ದ ಮಗುವನ್ನು ಆರೋಪಿಗಳು ಕತ್ತು ಹಿಸುಕಿ ಕೊಂದಿದ್ದಾರೆ.
ಢಾಕಾ (ಆ.24): ಬಾಂಗ್ಲಾದೇಶದ ರಂಗಪುರ ನಗರದಲ್ಲಿ ನಿವೃತ್ತ ಹಿಂದೂ ಶಾಲಾ ಶಿಕ್ಷಕ (School Teacher) ಹಾಗೂ ಅವರ ಪತ್ನಿ, ಮಗಳು ಮತ್ತು 12 ವರ್ಷದ ಮಗವನ್ನು ದುಷ್ಕರ್ಮಿಗಳಿಬ್ಬರು ಭೀಕರವಾಗಿ ಹತ್ಯೆ (Murder) ಮಾಡಿದ್ದಾರೆ. ಒಂದು ರಾತ್ರಿಯಲ್ಲೇ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಹಂತಕರು, ಅದೇ ಮನೆಯಲ್ಲಿ ಸ್ನಾನ-ಊಟ ಮಾಡಿ ಹೋಗಿದ್ದಾರೆ ಎಂದು ತಿಳಿದು ಬಂದಿದ್ದಾರೆ.














