Last Updated:
ದೇಶದ ಬಹುತೇಕ ಭಾಗಗಳಲ್ಲಿ ಶಾಖವು ಹೆಚ್ಚಾಗಿದೆ, ಸಾಮಾನ್ಯವಾಗಿ ಮಾನ್ಸೂನ್ ಸೂನ್ಗೆ ಶಕ್ತಿಯನ್ನು ನೀಡುವ ಮುಖ್ಯ ವಾತಾವರಣದ ಚಲನೆಗಳು ದುರ್ಬಲವಾಗಿವೆ. ಇದು ದೀರ್ಘಕಾಲದ ಮಳೆಯ ಕೊರತೆಯ ಕುರಿತು ಆತಂಕವನ್ನು ಮೂಡಿಸಿದೆ.
ಜಾಗತಿಕ ಮತ್ತು ಭಾರತೀಯ ಹವಾಮಾನ ಇಲಾಖೆಯಿಂದ (India Meteorological Department) ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದ ದೊಡ್ಡ ಭಾಗಗಳಲ್ಲಿ (Satellite Images ) ಅಸಾಧಾರಣವಾಗಿ ವಿರಳವಾದ ಮಾನ್ಸೂನ್ ಮೋಡದ ಹೊದಿಕೆಯನ್ನು ತೋರಿಸುತ್ತದೆ. ಈ ಮಾದರಿಯು ದೀರ್ಘಕಾಲದ ಮಳೆಯ ಕೊರತೆಯ (Meteorological Drought) ಕುರಿತು ಆತಂಕವನ್ನು ಮೂಡಿಸಿದೆ. ಜೂನ್ ಅಂತ್ಯದ ವೇಳೆಗೆ ಮಳೆಯ ಮೋಡಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಇಂಡಿಯಾ ಟುಡೆ ವರದಿಯ ಪ್ರಕಾರ ಯುರೋಪಿಯನ್ ಮತ್ತು ಅಮೆರಿಕನ್ ಹವಾಮಾನ ಸಂಸ್ಥೆಗಳಿಂದ ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದ ನೈಋತ್ಯ ಮಾನ್ಸೂನ್ನ ಆತಂಕ ಹುಟ್ಟಿಸುವ ಚಿತ್ರವನ್ನು ಬಿಡುಗಡೆ ಮಾಡಿದೆ. ಜೂನ್ ಮಧ್ಯಭಾಗದಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಕಾಲದ ನಿರ್ಣಾಯಕ ಹಂತದಲ್ಲಿ ದೀರ್ಘಕಾಲದ ಮಳೆ ಕೊರತೆಯ ಕುರಿತು ಆತಂಕ ವ್ಯಕ್ತಪಡಿಸಿದೆ.
ಎನ್ಒಎಎನ(NOAA) ಹವಾಮಾನ ಉಪಗ್ರಹವಾದ ಇಯುಎಮ್ಇಟಿಎಸ್ಎಟಿ (EUMETSAT) ನಿರ್ವಹಿಸುವ ಯುರೋಪಿಯನ್ ಹವಾಮಾನ ಉಪಗ್ರಹ ಎಮ್ಇಟಿಇಒಎಸ್ಎಟಿ ಇಂಡಿಯನ್ ಓಷಿಯನ್ ಡಾಟಾ ಕವರೇಜ್ (IODC) ಮತ್ತು ಇಸ್ರೋದ ಇನ್ಸಾಟ್-3DS ಮಂಗಳವಾರ ಸೆರೆಹಿಡಿದ ಚಿತ್ರಗಳು ಭಾರತದ ಮಧ್ಯ, ಪಶ್ಚಿಮ ಮತ್ತು ಪೇನಿನ್ಸುಲರ್ ಪ್ರದೇಶಗಳು ಸಾಮಾನ್ಯವಾಗಿ ಸಕ್ರಿಯ ಮಾನ್ಸೂನ್ ಗೆ ಸಂಬಂಧಿಸಿದ ದಟ್ಟವಾದ ಮೋಡದ ಪಟ್ಟಿಗಳಿಂದ ದೂರವಿರುವುದನ್ನು ತೋರಿಸುತ್ತದೆ.
ಕೇರಳದಲ್ಲಿ ಮಾನ್ಸೂನ್ ಆರಂಭವಾದ ಸುಮಾರು ಎರಡು ವಾರಗಳ ನಂತರ ಹವಾಮಾನಶಾಸ್ತ್ರಜ್ಞರು ಸಾಮಾನ್ಯವಾಗಿ ನಿರೀಕ್ಷಿಸುವುದಕ್ಕಿಂತ ಈ ಚಿತ್ರಗಳು ಗಮನರ್ಹವಾಗಿದೆ. ಉಪಖಂಡದಾದ್ಯಂತ ಹರಡಿರುವ ತೇವಾಂಶ-ಸಹಿತ ಮೋಡಗಳು ಮುನ್ನಡೆಯುವ ಬದಲು ಭಾರತದ ಹೆಚ್ಚಿನ ಭಾಗವು ಒಣಗಿದಂತೆ ಕಾಣುತ್ತದೆ. ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ಪೂರ್ವ ಪ್ರದೇಶಗಳಲ್ಲಿ ಚದುರಿದ ತುಂಡುಗಳು ಮಾತ್ರ ಕಾಣಿಸುತ್ತದೆ.
EUMETSAT ತೆಗೆದ ಉಪಗ್ರಹ ಚಿತ್ರ/ US ನೋವಾ ತೆಗೆದ ಉಪಗ್ರಹ ಚಿತ್ರ
ಹವಾಮಾನ ತಜ್ಞರು ಹೇಳಿದಂತೆ ಈ ಪರಿಸ್ಥಿತಿಯು ಮಾನ್ಸೂನ್, ಗಮನಾರ್ಹ ದುರ್ಬಲತೆಯನ್ನು ತೋರಿಸುತ್ತದೆ. ದೇಶದ ಬಹುತೇಕ ಭಾಗಗಳಲ್ಲಿ ಶಾಖವು ಹೆಚ್ಚಾಗಿದೆ, ಆದರೆ ಸಾಮಾನ್ಯವಾಗಿ ಮಾನ್ಸೂನ್ ಸೂನ್ಗೆ ಶಕ್ತಿಯನ್ನು ನೀಡುವ ಮುಖ್ಯ ವಾತಾವರಣದ ಚಲನೆಗಳು ದುರ್ಬಲವಾಗಿವೆ. ಮಾನ್ಸೂನ್ ಕಾಲದಲ್ಲಿ ಇಕ್ವೇಟರ್ ಇಂಡಿಯನ್ ಓಶಿಯನ್ ಇಂದ ಭಾರತದ ಕಡೆಗೆ ಭಾರೀ ಪ್ರಮಾಣದ ತೇವಾಂಶವನ್ನು ತಲುಪಿಸುವ ಕಡಿಮೆ ಮಟ್ಟದ ಶಕ್ತಿಶಾಲಿ ಗಾಳಿಯಾದ ಸೊಮಾಲಿ ಜೆಟ್ ಇಲ್ಲದಿರುವುದು ದೊಡ್ಡ ಆತಂಕದಲ್ಲಿ ಒಂದಾಗಿದೆ. ಮಾನ್ಸೂನ್ ಎಂಜಿನ್ ನ ಮತ್ತೊಂದು ನಿರ್ಣಾಯಕ ಅಂಶವಾದ ಅಡ್ಡ- ಇಕ್ವೇಟರ್ ಹರಿವು ಕೂಡ ದುರ್ಬಲವಾಗಿದೆ.
ಪಶ್ಚಿಮ ಇಂಡಿಯನ್ ಓಶಿಯನ್ ಮೇಲೆ ಒಣ ಗಾಳಿಯನ್ನು ಸ್ಯಾಟಲೈಟ್ ಚಿತ್ರ ತೋರಿಸುತ್ತಿದೆ. ತೇವಾಂಶ ನಕ್ಷೆಯಲ್ಲಿ ದೊಡ್ಡ ಕಂದು ಪ್ರದೇಶಗಳು ಕಾಣಿಸುತ್ತಿವೆ. ಹವಾಮಾನಶಾಸ್ತ್ರಜ್ಞರು ಈ ಪ್ರದೇಶದ ಮೇಲೆ ಹೆಚ್ಚಿನ ಗಾಳಿಯ ಕುಸಿತವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಇದು ಮೋಡಗಳ ರಚನೆಯನ್ನು ನಿಗ್ರಹಿಸುತ್ತದೆ ಮತ್ತು ಅರೇಬಿಯನ್ ಸಮುದ್ರಕ್ಕೆ ತೇವಾಂಶದ ಉತ್ತರದ ಸಾಗಣೆಯನ್ನು ಮಿತಿಗೊಳಿಸುಳ್ಳಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ತೆಗೆದ ಉಪಗ್ರಹ ಚಿತ್ರ
ದೇಶದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮಧ್ಯ, ಪಶ್ಚಿಮ ಮತ್ತು ಪೇನಿನ್ಸುಲರ್ ಸೇರಿದಂತೆ ದೇಶದ ನಿರ್ಣಾಯಕ ‘ಮಾನ್ಸೂನ್ ಕೋರ್ ವಲಯ’ ದಾದ್ಯಂತ ದೀರ್ಘಕಾಲದ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಎಚ್ಚರಿಕೆ ಕೊಟ್ಟಿದೆ. ಆದರೆ ಹೊರಿಜೊನ್ ಅಲ್ಲಿ ಕೆಲವು ಪಾಸಿಟಿವ್ ಮುನ್ಸೂಚನೆಗಳು ಕಂಡು ಬಂದಿವೆ. ಮುಂದಿನ ಎರಡು ವಾರಗಳಲ್ಲಿ ಇಕ್ವೇಟರ್ ಮಾರುತಗಳು ಬಲಗೊಳ್ಳಬಹುದು ಎಂದು ಮುನ್ಸೂಚನೆ ಮಾದರಿಗಳು ಸೂಚಿಸುತ್ತಿವೆ. ಸೊಮಾಲಿ ಜೆಟ್ ತೀವ್ರಗೊಳ್ಳುವ ಸಾಧ್ಯತೆ ಇದೆ. ಇದು ಅರೇಬಿಯನ್ ಸಮುದ್ರಕ್ಕೆ ಹೆಚ್ಚಿನ ತೇವಾಂಶವನ್ನು ಸೆಳೆಯುವ ಮತ್ತು ಭಾರತದ ಮೇಲೆ ಮಾನ್ಸೂನ್ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
Bangalore [Bangalore],Bangalore,Karnataka













