Crime News: ಮದುವೆಯಾಗಿ 48 ದಿನಕ್ಕೆ ಹೆಣವಾದ ಮಹಿಳೆ, ಸಿಸಿಟಿವಿ ಹಾಕಿ ಹಿಂಸೆ! ಗಂಡನ ಮನೆಯಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Crime News: ಮದುವೆಯಾಗಿ 48 ದಿನಕ್ಕೆ ಹೆಣವಾದ ಮಹಿಳೆ, ಸಿಸಿಟಿವಿ ಹಾಕಿ ಹಿಂಸೆ! ಗಂಡನ ಮನೆಯಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ವಿಶಾಖಾ ಅವರ ಪತಿ ನಿತಿನ್ ತಿಲ್ಕರ್ ವೈದ್ಯರಾಗಿದ್ದು, ಅವರ ಅತ್ತೆ-ಮಾವಂದಿರು ಸೇರಿದಂತೆ ಪತಿಯ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದಲೇ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಮಹಿಳೆ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಮದುವೆಯಾಗಿ 48 ದಿನಕ್ಕೆ ಶವವಾದ ಮಹಿಳೆ

ವಿಶಾಖಾ ಮತ್ತು ನಿತಿನ್ ಅವರು ಏಪ್ರಿಲ್ 30 ರಂದು ಮದುವೆಯಾಗಿದ್ದರು. ಮದುವೆಯ ಮೊದಲು ಎರಡೂ ಕುಟುಂಬಗಳ ಸಂಬಂಧಗಳು ಚೆನ್ನಾಗಿದ್ದವು ಎಂದು ಹೇಳಲಾಗಿದೆ. ಆದರೆ ಮದುವೆಯ ನಂತರ ಪರಿಸ್ಥಿತಿ ಬೇಗನೇ ಬದಲಾಗಿದೆ. ಮದುವೆ ಸಮಾರಂಭದಲ್ಲಿ ತಮಗೆ ಸಿಕ್ಕ ಉಡುಗೊರೆಗಳು, ಗೌರವ, ಸನ್ಮಾನ ಇವುಗಳು ತೃಪ್ತಿಕರವಾಗಿಲ್ಲವೆಂದು ಅತ್ತೆ-ಮಾವ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಎಂದು ಯುವತಿ ಕುಟುಂಬದವರು ಹೇಳಿದ್ದಾರೆ.

ವಿಶಾಖಾ ಅವರ ಹೆತ್ತವರ ಮನೆಯಿಂದ ಇನ್ನಷ್ಟು ಚಿನ್ನಾಭರಣ ಮತ್ತು ಹಣ ತರಬೇಕೆಂದು ಅವಳ ಮೇಲೆ ನಿರಂತರ ಒತ್ತಡ ಹಾಕಲಾಗುತ್ತಿತ್ತಂತೆ. ಅವಳು ತಂದೆಯ ಮನೆಯಿಂದ ಏನು ತಂದಳು, ಇನ್ನೇನು ತರಬಹುದು ಎಂಬ ಮಾತುಗಳು ಅವಳ ಮನಸಿಗೆ ತುಂಬಾ ನೋವುಂಟುಮಾಡಿದ್ದವು ಎಂದು ಸಂಬಂಧಿಕರು ಹೇಳಿದ್ದಾರೆ. ಇದರಿಂದ ಅವಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು.

ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹಿಂಸೆ

ಇದರ ಜೊತೆಗೆ, ಪತಿ ನಿತಿನ್ ತಿಲ್ಕರ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇದರಿಂದ ವಿಶಾಖಾ ಅವರ ಪ್ರತಿಯೊಂದು ಚಲನವಲನ, ಯಾರೊಂದಿಗೆ ಮಾತನಾಡುತ್ತಾಳೆ, ಏನು ಮಾಡುತ್ತಾಳೆ ಎಂಬುದನ್ನು ಅವರು ನಿಯಮಿತವಾಗಿ ಗಮನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಅವಳಿಗೆ ಸ್ವಂತ ಗೌಪ್ಯತೆ, ಸ್ವತಂತ್ರತೆ ಯಾವುದೂ ಉಳಿದಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

ಯಾರೊಂದಿಗೆ ಮಾತನಾಡಿದ್ರೂ ಗಲಾಟೆ, ಹಲ್ಲೆ

ವಿಶಾಖಾ ಯಾರೊಂದಿಗಾದರೂ ಮಾತನಾಡಿದರೆ, ಬಳಿಕ ಮನೆಗೆ ಬಂದ ಮೇಲೆ ಅವಳನ್ನು ಹೊಡೆದು ಅವಮಾನ ಮಾಡುತ್ತಿದ್ದರೆಂದು ಹೇಳಲಾಗಿದೆ. ಆತ್ಮಹತ್ಯೆಗೆ 2 ದಿನಗಳ ಮೊದಲು ಅವರು ನೆರೆಹೊರೆಯ ಮಹಿಳೆಯೊಬ್ಬಳೊಂದಿಗೆ ಕೇವಲ ಮಾತನಾಡಿದ್ದಕ್ಕಾಗಿ ಕೂಡ ಅವಳ ಮೇಲೆ ಹಲ್ಲೆ ಮಾಡಲಾಗಿತ್ತು ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ. ಈ ರೀತಿಯ ನಿರಂತರ ಕಿರುಕುಳದಿಂದ ಬೇಸತ್ತ ವಿಶಾಖಾ ಮನನೊಂದು, ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ಗಂಡ ನಿತಿನ್​ ಬಂಧನ

ಈ ಪ್ರಕರಣದ ಹಿನ್ನೆಲೆಯಲ್ಲಿ ಅಂಬರ್ನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ನಿತಿನ್ ತಿಲ್ಕರ್, ಅವರ ತಾಯಿ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ, ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳು ದಾಖಲಾಗಿವೆ. ನಿತಿನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಪೊಲೀಸರು ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಮತ್ತೊಮ್ಮೆ ದಾಂಪತ್ಯ ಜೀವನದಲ್ಲಿ ನಡೆಯುವ ಹಿಂಸೆ, ಕಿರುಕುಳ ಮತ್ತು ಸೊಸೆ-ಅತ್ತೆ ಸಂಬಂಧದ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಮದುವೆಯ ಹೆಸರಿನಲ್ಲಿ, ಉಡುಗೊರೆ, ಆಭರಣ, ಹಣ ಇವುಗಳ ಬೇಡಿಕೆ, ಹೆಣ್ಣಿನ ಮೇಲೆ ನಡೆಯುವ ಮಾನಸಿಕ ಒತ್ತಡಗಳು ಹಲವಾರು ಜೀವಗಳನ್ನು ಕಸಿದುಕೊಳ್ಳುತ್ತಿರುವುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಕುಟುಂಬದ ಒಳಗಿನ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸಿ, ಕಾನೂನು ಸಹಾಯ, ಕುಟುಂಬದ ಬೆಂಬಲ ದೊರೆತರೆ ಇಂತಹ ದುರಂತಗಳನ್ನು ತಪ್ಪಿಸಬಹುದು ಎಂಬ ಸಂದೇಶವೂ ಈ ಘಟನೆಯಿಂದ ಸ್ಪಷ್ಟವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed