CJP Protest: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ CJP ಭವಿಷ್ಯದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ! | ಜ್ಯೋತಿಷ್ಯ | ACTPnews

CJP Protest: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ CJP ಭವಿಷ್ಯದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ! | ಜ್ಯೋತಿಷ್ಯ


‘ಸಿಜೆಪಿ ಪಕ್ಷದ ಕುಂಡಲಿ ಸಿಂಹಲಗ್ನದಲ್ಲಿದೆ, ರಾಹು ಏಳನೇ ಸ್ಥಾನದಲ್ಲಿ, ಶನಿ ಎಂಟನೇ ಸ್ಥಾನದಲ್ಲಿ, ಕುಜ ಒಂಬತ್ತನೇ ಸ್ಥಾನದಲ್ಲಿದ್ದಾನೆ. ಸೂರ್ಯ, ಬುಧ, ಚಂದ್ರ ಏಳನೇ ಸ್ಥಾನದಲ್ಲಿದ್ದು, ಶುಕ್ರ-ಗುರು ಹನ್ನೊಂದನೇ ಸ್ಥಾನದಲ್ಲಿದ್ದಾರೆ. ಆದ್ದರಿಂದ ರವಿ ಹಾಗೂ ಬುಧ ಒಟ್ಟಿಗೆಯಾಗುವುದರಿಂದ ಬುಧಾದಿತ್ಯ ಯೋಗ ಇದೆ. ಆದ್ದರಿಂದಲೇ ಸಿಜೆಪಿಗೆ ಇಷ್ಟು ಕಡಿಮೆ ಸಮಯದಲ್ಲಿ ಕ್ರೇಜ್ ಹೆಚ್ಚಾಗಿದೆ. ಪಕ್ಷವು ಸಂಪೂರ್ಣ ರಾಜಯೋಗದಲ್ಲಿದ್ದು, ಸಂಪೂರ್ಣ ಕಾಲ ಸರ್ಪವನ್ನು ಹೊಂದಿದೆ. ದಶ ಚಿತ್ರ ಪ್ರಕಾರ, ಅವರು ಅಕ್ಟೋಬರ್ 31, 2026 ರವರೆಗೆ ತೀವ್ರ ವ್ಯಾಮೋಹವನ್ನು ಹೊಂದಿರುತ್ತಾರೆ. ನಂತರ ಮತ್ತೊಂದು ರೀತಿಯ ವ್ಯಾಮೋಹ ಬರುವ ಸಾಧ್ಯತೆಯಿದೆ. ರಾಶಿಚಕ್ರದ ಹತ್ತನೇ ಮನೆಯಲ್ಲಿ ರಾಹು ಇರುವುದು ತೀವ್ರ ರಾಜಯೋಗವನ್ನು ಸೂಚಿಸುತ್ತದೆ’ ಎಂದು ಜ್ಯೋತಿಷಿ ಹೇಳಿರೋದಾಗಿ ಸಮಯಂ ವರದಿ ಮಾಡಿದೆ.

ನೀವು ಅವರನ್ನು ಬಲವಂತವಾಗಿ ನಿಗ್ರಹಿಸಲು ಪ್ರಯತ್ನಿಸಿದರೆ, ಪರಿಸ್ಥಿತಿ ನಿಮಗೆ ವಿರುದ್ಧವಾಗುತ್ತದೆ. ನೀವು ಅವರನ್ನು ಪ್ರೀತಿಯಿಂದ ದಾರಿಗೆ ತರಬೇಕು. ನೀವು ಆಕ್ರಮಣಕಾರಿಯಾಗಿ ಹೋದರೆ, ಅದು ಇನ್ನಷ್ಟು ಹದಗೆಡುತ್ತದೆ. ಕಾರಣವೆಂದರೆ ರಾಹು ಹತ್ತನೇ ಮನೆಯಲ್ಲಿ, ಶನಿ ಹನ್ನೊಂದನೇ ಮನೆಯಲ್ಲಿ, ಮತ್ತು ಮಂಗಳ ರಾಶಿಚಕ್ರದಲ್ಲಿ ಹನ್ನೆರಡನೇ ಮನೆಯಲ್ಲಿದ್ದಾನೆ.

ಮಂಗಳ ಗ್ರಹವು ಹನ್ನೆರಡನೇ ಮನೆಯಲ್ಲಿರುವುದರಿಂದ, ಸಿಜೆಪಿ ಪ್ರತಿಭಟನೆಯೂ ಆತಂಕ ಮತ್ತು ಆತುರಕ್ಕೆ ಕಾರಣವಾಗುತ್ತದೆ. ಅವರ ಪ್ರಮುಖ ಬೇಡಿಕೆಯಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಡೆಯುತ್ತದೆ, ಇದು ಶೇಕಡಾ 100ರಷ್ಟು ನಡೆಯುತ್ತದೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರು. ಇದರಂತೆ ಇಂದು ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರ ನಡುವೆಯೇ ಮತ್ತೊಂದು ಸ್ಫೋಟಕ ಅಂಶವನ್ನು ತಿಳಿಸಿರುವ ಜ್ಯೋತಿಷಿ, ಸಿಜೆಪಿ ಪಕ್ಷದ ಮೂವರು ನಾಯಕರು ಜೈಲಿಗೆ ಹೋಗ್ತಾರೆ. ಹಿಂದೂ ಧರ್ಮ, ಶಾಸ್ತ್ರಕ್ಕೆ ಇವರು ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ. ಧರ್ಮ ಎಂಬ ಮಾತನ್ನು ಕೇಳಿಸಿಕೊಳ್ಳದೇ ಬೇರೆ ಹಾದಿಯಲ್ಲಿ ಇವರು ನಡೆಯುತ್ತಾರೆ. ಈ ಪಕ್ಷದಿಂದ ಆಡಳಿತರೂಢ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ ಎಂದು ಜ್ಯೋತಿಷಿ ಹೇಳಿರೋದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Dharmendra Pradhan: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?

ಸಿಜೆಪಿ ಪಕ್ಷದ ರಾಶಿಚಕ್ರ ಮತ್ತು ಲಗ್ನ ಚಕ್ರವನ್ನು ತೆಗೆದುಕೊಂಡರೇ, ಆಡಳಿತ ಪಕ್ಷಕ್ಕೆ ನಷ್ಟ ಆಗಲಿದೆ. ಮುಂಬರುವ ದಿನಗಳಲ್ಲಿ ಸಿಜೆಪಿ ಯಾರೂ ಊಹೆ ಮಾಡದ ಸ್ಥಿತಿಗೆ ಸಿಜೆಪಿ ಪಕ್ಷ ಇದು ತಲುಪುತ್ತದೆ. ಯಾವುದೇ ಪಕ್ಷವನ್ನು ಅಧಿಕಾರ ಹಿಡಿಯುವಂತೆ ಮಾಡುವುದು, ಅಧಿಕಾರದಿಂದ ಇಳಿಯುವಂತೆ ಮಾಡುವ ಶಕ್ತಿಯನ್ನು ಇದು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಇಲ್ಲಿವರೆಗೂ ಏನೇನು ಆಗಿದೆ ಅಂತ ನೋಡುವುದಾದರೆ, ನೀಟ್ ಪತ್ರಿಕೆ ಲೀಕ್, ಸಿಬಿಎಸ್ಇ ಮಾರ್ಕಿಂಗ್ ವಿಧಾನದಲ್ಲಿ ಎದುರಾದ ವೈಫಲ್ಯಗಳ ವಿರುದ್ಧ ಸಿಜೆಪಿ ಪ್ರತಿಭಟನೆ ಶುರು ಮಾಡಿತ್ತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿತ್ತು. ಸದ್ಯ ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದು, ತಮ್ಮ ಇನ್ನೆರಡು ಬೇಡಿಕೆಗಳ ಈಡೇರುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಹೇಳಿದೆ. ಇದರಂತೆ, ಪರೀಕ್ಷಾ ವಿವಾದ ಮತ್ತು ಸಂಬಂಧಿತ ಘಟನೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವುದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯದ ಜೊತೆಗೆ ಆರ್ಥಿಕ ನೆರವನ್ನೂ ನೀಡಬೇಕು. ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಸಿಜೆಪಿ ಹೇಳಿದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports