Last Updated:
ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯಿಂದ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ.
ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯಿಂದ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಒಂದು ಕಡೆ ಭಾರತದ ಸಹಾಯ ಕೋರುತ್ತಲೇ, ಮತ್ತೊಂದೆಡೆ ಶೃಂಗಸಭೆಯನ್ನು ಬಹಿಷ್ಕರಿಸುತ್ತಿರುವ ಬಾಂಗ್ಲಾದೇಶದ ಈ ದ್ವಂದ್ವ ನೀತಿಯು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ತಾರಿಕ್ ರೆಹಮಾನ್ ಅವರು ಬ್ರಿಕ್ಸ್ ಶೃಂಗಸಭೆಗೆ ಬರಲು ನಿರಾಕರಿಸುತ್ತಿದ್ದರೂ, ತಮ್ಮ ದೇಶದ ಆಂತರಿಕ ಅಗತ್ಯಗಳಿಗಾಗಿ ಭಾರತದ ಮುಂದೆಯೇ ಕೈಚಾಚುತ್ತಿದ್ದಾರೆ. ಬಾಂಗ್ಲಾದೇಶವು ಪ್ರಸ್ತುತ ತೀವ್ರ ಇಂಧನ ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದ್ದು, ಇದರಿಂದ ಪಾರಾಗಲು ಭಾರತದ ಸಹಾಯವನ್ನು ಯಾಚಿಸುತ್ತಿದೆ. ಇದೇ ಡಿಸೆಂಬರ್ನಲ್ಲಿ ಮುಕ್ತಾಯಗೊಳ್ಳಲಿರುವ ಭಾರತ-ಬಾಂಗ್ಲಾದೇಶ ನಡುವಿನ ಪ್ರಮುಖ ‘ಗಂಗಾ ಜಲ ಒಪ್ಪಂದ’ವನ್ನು (Ganga Water Treaty) ನವೀಕರಿಸಲು (Renew) ಭಾರತದ ಬಳಿ ವಿನಂತಿ ಮಾಡಿಕೊಳ್ಳುತ್ತಿದೆ.














