Last Updated:
ನಿವೃತ್ತ ಭಾರತೀಯ ಕ್ರಿಕೆಟಿಗರ ಕೆರಿಯರ್ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ವಿದೇಶಿ ಟಿ20 ಅಥವಾ ಟಿ10 ಲೀಗ್ಗಳಿಗೆ ಸೇರುವ ಆಟಗಾರರಿಗೆ ಸಂಕಷ್ಟ ಎದುರಾಗಿದೆ.
ನಿವೃತ್ತ ಭಾರತೀಯ (Indian) ಕ್ರಿಕೆಟಿಗರ (Cricketers) ಕೆರಿಯರ್ (Career) ಬಗ್ಗೆ ಬಿಸಿಸಿಐ (BCCI) ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ಗೆ ವಿದಾಯ (Goodbye) ಹೇಳಿದ ನಂತರ ವಿದೇಶಿ ಟಿ20 ಅಥವಾ ಟಿ10 ಲೀಗ್ಗಳಿಗೆ ಸೇರುವ ಆಟಗಾರರಿಗೆ ಸಂಕಷ್ಟ ಎದುರಾಗಿದೆ. ಆಟಗಾರರ ನಿವೃತ್ತಿ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಲು ಬಿಸಿಸಿಐ ಅಸ್ತಿತ್ವದಲ್ಲಿರುವ ನೀತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಆಟಗಾರರು ನಿವೃತ್ತಿ (Retirement) ನಿರ್ಧಾರಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳುತ್ತಾರೆ ಮತ್ತು ಆತುರಪಡುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ ಎಂದು ಬಿಸಿಸಿಐ ಆಭಿಪ್ರಾಯಪಟ್ಟಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಅಂತಾರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿರುವ ಯಾವುದೇ ಭಾರತೀಯ ಪುರುಷ ಕ್ರಿಕೆಟಿಗನಿಗೆ ವಿದೇಶದಲ್ಲಿ ನಡೆಯುವ ಯಾವುದೇ ಟಿ20 ಲೀಗ್ಗಳಲ್ಲಿ ಆಡಲು ಬಿಸಿಸಿಐ ಅವಕಾಶ ನೀಡುವುದಿಲ್ಲ. ನಮ್ಮ ದೇಶೀಯ ಕ್ರಿಕೆಟ್ ವ್ಯವಸ್ಥೆಯನ್ನು ಹಾಗೂ ವಿಶ್ವದ ಅತ್ಯಂತ ಪ್ರತಿಷ್ಠಿತ ಐಪಿಎಲ್ ಟೂರ್ನಿಯ ಕ್ರೇಜ್ ಅನ್ನು ಕಾಪಡಲು ಈ ಕಠಿಣ ನಿಯಮ ಹಲವು ವರ್ಷಗಳಿಂದ ಜಾರಿಯಲ್ಲಿದೆ.
ಯಾವುದೇ ಆಟಗಾರ ವಿದೇಶಿ ಲೀಗ್ಗಳಲ್ಲಿ ಆಡಲು ಬಯಸಿದರೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಸೇರಿದಂತೆ ಭಾರತೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಬೇಕಾಗುತ್ತದೆ.
ಇತ್ತೀಚೆಗೆ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವು ಚರ್ಚೆಯ ಪ್ರಮುಖ ವಿಷಯವಾಗಿತ್ತು. ಕ್ರಿಕ್ಬಜ್ನ ವರದಿಯ ಪ್ರಕಾರ, ನಿವೃತ್ತಿ ಘೋಷಿಸಿದ ಆಟಗಾರರಿಗೆ ಬಿಸಿಸಿಐ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಯೋಜಿಸುತ್ತಿದೆ.
ಹೊಸ ಪ್ರಸ್ತಾವನೆಯ ಪ್ರಕಾರ, ವಿದೇಶಿ ಲೀಗ್ಗಳಲ್ಲಿ ಆಡುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ನಿಂದ ನಿವೃತ್ತರಾಗುವ ಆಟಗಾರರು ಭಾರತೀಯ ಕ್ರಿಕೆಟ್ ಈವೆಂಟ್ಗಳಲ್ಲಿ ಅಥವಾ ಕೋಚಿಂಗ್ನಂತಹ ಹುದ್ದೆಗಳಲ್ಲಿ ಭಾಗವಹಿಸಲು ಕನಿಷ್ಠ ಐದು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದರೆ, ನಿವೃತ್ತಿಯ ನಂತರ ಯಾವುದೇ ವಿದೇಶಿ ಲೀಗ್ಗಳಲ್ಲಿ ಆಡದ ಆಟಗಾರರಿಗೆ ಈ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಇಳಿಸಬಹುದು.
ಇತ್ತೀಚೆಗೆ ಕೆಲವು ಭಾರತೀಯ ಆಟಗಾರರು ತೆಗೆದುಕೊಂಡ ನಿರ್ಧಾರಗಳು ಬಿಸಿಸಿಐ ಈ ಹೆಜ್ಜೆ ಇಡಲು ಕಾರಣವಾಗಿವೆ. ಉದಾಹರಣೆಗೆ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆ.ಎಸ್. ಭರತ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರೂ, ಐಪಿಎಲ್ನಿಂದ ಹಿಂದೆ ಸರಿಯುವುದಾಗಿ ಸ್ಪಷ್ಟವಾಗಿ ಘೋಷಿಸಿಲ್ಲ. ಸಾಮಾನ್ಯವಾಗಿ, ವಿದೇಶಿ ಲೀಗ್ಗಳಿಗೆ ಹೋಗಲು, ಐಪಿಎಲ್ನಿಂದಲೂ ಹಿಂದೆ ಸರಿಯಬೇಕಾಗುತ್ತದೆ.
ಮತ್ತೊಂದೆಡೆ, ಆಲ್ರೌಂಡರ್ ವಿಜಯ್ ಶಂಕರ್ ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ತಕ್ಷಣ, ಲಂಕನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಲಭ್ಯರಾದರು. ಅಲ್ಲಿ ಅವರನ್ನು ಕ್ಯಾಂಡಿ ರಾಯಲ್ಸ್ ತಂಡ ಆಯ್ಕೆ ಮಾಡಿತು. ಇಂತಹ ಬೆಳವಣಿಗೆಗಳು ಹೆಚ್ಚುತ್ತಿರುವಂತೆ, ಬಿಸಿಸಿಐ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಯೋಚಿಸುತ್ತಿದೆ.
ಭಾರತೀಯ ಕ್ರಿಕೆಟ್ ವಿದೇಶಿ ಲೀಗ್ಗಳಿಂದ ದೂರ ಸರಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ದಿನೇಶ್ ಕಾರ್ತಿಕ್, ಯುವರಾಜ್ ಸಿಂಗ್, ಅನ್ಮುಕ್ತ್ ಚಂದ್, ಪ್ರವೀಣ್ ತಾಂಬೆ ಮತ್ತು ಇರ್ಫಾನ್ ಪಠಾಣ್ ಅವರಂತಹ ಪ್ರಮುಖ ಆಟಗಾರರು ಭಾರತೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರವೇ ವಿದೇಶಿ ಲೀಗ್ಗಳ ಭಾಗವಾಗಿದ್ದರು. ಆ ಸಮಯದಲ್ಲಿ ಇಂತಹ ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳು ಇರಲಿಲ್ಲವಾದ್ದರಿಂದ ಅವರಿಗೆ ಅದು ಸುಲಭವಾಗಿತ್ತು.













