Ayodhya Ram Mandir: ಅಯೋಧ್ಯೆಯ ರಾಮ ಮಂದಿರವನ್ನು ರಕ್ಷಿಸಲು ನಾವು ಹೊಸ ಹೋರಾಟ ಮಾಡಬೇಕಿದೆ: ಉದ್ಧವ್ ಠಾಕ್ರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮೇಲೂ ಅವರು ವಾಗ್ದಾಳಿ ನಡೆಸಿದ ಉದ್ಧವ್, ಅವರು ಮಂದಿರ ‘ಲೂಟಿಕೋರರನ್ನು’ ಬೆಂಬಲಿಸುತ್ತಾರೋ ಅಥವಾ ರಾಮನನ್ನು ‘ರಕ್ಷಿಸುವವರನ್ನು’ ಬೆಂಬಲಿಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.

News18
News18

ನಾಗ್ಪುರ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ನಡೆದ ಕೋಟ್ಯಂತರ ರೂಪಾಯಿ ದೇಣಿಗೆ ಹಗರಣವನ್ನು ಖಂಡಿಸಿ ಬಿಜೆಪಿ ವಿರುದ್ಧ ಶಿವಸೇನೆ (UBT) ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackrey) ಹರಿಹಾಯ್ದಿದ್ದಾರೆ.

ಈ ಸಂಬಂಧ ಮಾತನಾಡಿರುವ ಉದ್ಧವ್ ಠಾಕ್ರೆ, ಅಯೋಧ್ಯೆಯ ರಾಮಮಂದಿರ ದೇಗುಲವನ್ನು ಈಗಾಗಲೇ ನಿರ್ಮಿಸಲಾಗಿದ್ದು, ಆದರೆ ಈಗ ಅದನ್ನು ರಕ್ಷಿಸಲು ನಾವು ಹೊಸ ಆಂದೋಲನವನ್ನು ಪ್ರಾರಂಭಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ನಾಗ್ಪುರದ ರಾಮ್ ನಗರ ಪ್ರದೇಶದಲ್ಲಿರುವ ರಾಮ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಆರತಿ ಸಲ್ಲಿಸಿದ ನಂತರ, ತಮ್ಮ ಪಕ್ಷದ ‘ರಾಮ ರಕ್ಷಾ’ ಪ್ರತಿಭಟನೆಯ ಭಾಗವಾಗಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ವರ್ಷಗಳ ಹಿಂದೆ, ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಚಳವಳಿಗೆ ಚಾಲನೆ ನೀಡಿದ್ದರು, ಆದರೆ ಈಗ ಶಿವಸೈನಿಕರು ಮತ್ತೊಮ್ಮೆ ದೇವಾಲಯಕ್ಕಾಗಿ ಹೋರಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

‘ರಾಮ ಮಂದಿರ ನಿರ್ಮಾಣವಾಗಿದ್ದರೂ, ಆ ಮಂದಿರವನ್ನು ರಕ್ಷಿಸಲು ನಾವು ಹೊಸ ಹೋರಾಟವನ್ನು ಪ್ರಾರಂಭಿಸಬೇಕಾಗಿರುವುದು ನನಗೆ ಬೇಸರ ತಂದಿದೆ ಎಂದು ಹೇಳಿದ ಉದ್ಧವ್ ಠಾಕ್ರೆ, ರಾಮ ಮಂದಿರ ಚಳವಳಿಯ ಸಮಯದಲ್ಲಿ ನೂರಾರು ‘ಕರಸೇವಕರು’ (ಸ್ವಯಂಸೇವಕರು) ತ್ಯಾಗಗಳನ್ನು ಮಾಡಿದ್ದಾರೆ, ಆದರೆ ಈ ‘ಕಳ್ಳರಿಗೆ’ ನೆರವು ನೀಡಲು ಇದನ್ನು ಮಾಡಲಾಗಿಲ್ಲ ಎಂದು ಹೇಳಿದರು.

ಶಿವ ಸೇನಾ (ಯುಬಿಟಿ) ಮುಖ್ಯಸ್ಥರು ಮೊದಲು ‘ರಾಮ ರಕ್ಷಾ’ (ಭಗವಾನ್ ರಾಮನನ್ನು ಸ್ತುತಿಸಲು ಸಮರ್ಪಿತವಾದ ಸಂಸ್ಕೃತ ಸ್ತೋತ್ರ) ಪಠಿಸಬೇಕು ಎಂಬ ಫಡ್ನವೀಸ್ ಅವರ ಇತ್ತೀಚಿನ ಹೇಳಿಕೆಗೆ ಅವರು ತೀವ್ರ ವಾಗ್ದಾಳಿ ನಡೆಸಿದರು. ‘ಫಡ್ನವೀಸ್ ಜಿ, ರಾಮ ರಕ್ಷಾ ಮಂತ್ರ ಪಠಿಸುವುದು ನಿಮ್ಮ ಕೆಲಸವಾಗಿರಬಹುದು, ಆದರೆ ‘ರಾಮ ರಕ್ಷಾ’ (ಭಗವಾನ್ ರಾಮನನ್ನು ರಕ್ಷಿಸುವುದು) ನಮ್ಮ ರಾಮ ಭಕ್ತರ ಕೆಲಸ. ನಾವು ‘ರಾಮ ರಕ್ಷಕರು’ ಎಂದು ಅವರು ಹೇಳಿದರು.

‘ಬಾಬರಿ ಮಸೀದಿ ಬಿದ್ದಾಗ, ಇಂದು ಅಧಿಕಾರದಲ್ಲಿರುವ ಯಾರೂ ಮುಂದೆ ಬರಲಿಲ್ಲ. ಆಗ ಬಿಜೆಪಿಯವರು ಇದು ನಮ್ಮ ಕೆಲಸವಲ್ಲ ಎಂದು ಹೇಳುತ್ತಿದ್ದರು. ಈ ಕಾರಣಕ್ಕಾಗಿ ನಿಂತವರು ಬಾಳಾಸಾಹೇಬ್ ಠಾಕ್ರೆ ಮಾತ್ರ ಎಂದು ಹೇಳಿದ ಉದ್ಧವ್ ಠಾಕ್ರೆ, ರಾಮನು ನಮ್ಮನ್ನು ರಕ್ಷಿಸುತ್ತಾನೆ ಎಂದು ನಾವು ಸಾಮಾನ್ಯವಾಗಿ ನಂಬುತ್ತೇವೆ. ಆದರೆ ಈಗ, ಬಿಜೆಪಿ ಆಳ್ವಿಕೆಯಲ್ಲಿ ರಾಮ ಭಕ್ತರೇ ಭಗವಂತನನ್ನು ರಕ್ಷಿಸಬೇಕು. ಅವರು ರಾಮನ ಹೆಸರನ್ನು ಬಳಸಿಕೊಂಡು ಅಧಿಕಾರವನ್ನು ಪಡೆದರು, ಆದರೆ ನಾವು ಅವನನ್ನು ರಕ್ಷಿಸಬೇಕಾಗಿದೆ. ಹಿಂದೂಗಳಿಗೆ ಇದಕ್ಕಿಂತ ದೊಡ್ಡ ದುರದೃಷ್ಟ ಇನ್ನೊಂದಿದೆಯೇ ಎಂದು ಅವರು ಕೇಳಿದರು.

ಅವರು ಶಿವಸೇನಾ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಅವರನ್ನು ಗುರಿಯಾಗಿಸಿಕೊಂಡರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports