Last Updated:
ಕಳೆದ ಕೆಲವು ದಿನಗಳಿಂದ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವರು ಮಾಸ್ಟರ್ ಆನಂದ್ ಅವರನ್ನು ಟ್ಯಾಗ್ ಮಾಡಿ ತಮ್ಮ ಬೆಂಬಲವನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ರೀ-ರಿಲೀಸ್ ಆಗಬೇಕು ಎಂಬ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅಭಿನಯದ ‘ಶಾಂತಿ ಕ್ರಾಂತಿ’ (Shanti Kranti) ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಅಭಿಮಾನಿಗಳ ಈ ಪ್ರಯತ್ನಕ್ಕೆ ಇದೀಗ ನಟ ಮಾಸ್ಟರ್ ಆನಂದ್ (Master Anand) ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿನಿಮಾದ ರೀ-ರಿಲೀಸ್ಗೆ ಸಪೋರ್ಟ್ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿರುವ ಅವರು, ‘ಶಾಂತಿ ಕ್ರಾಂತಿ’ ಚಿತ್ರೀಕರಣದ ದಿನಗಳ ತಮ್ಮ ಬಾಲ್ಯದ ನೆನಪುಗಳ ಜೊತೆಗೆ ನಟಿ ಸಂಗೀತಾ ಅವರ ಕುರಿತಾದ ಇಂಟ್ರಸ್ಟಿಂಗ್ ಸಂಗತಿಯೊಂದನ್ನೂ ಹಂಚಿಕೊಂಡಿದ್ದಾರೆ.














