Dharmendra Pradhan: ‘ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಕಾರಣ!’ ಕ್ರೆಡಿಟ್ ಕೊಟ್ಟುಕೊಂಡ ಕಾಂಗ್ರೆಸ್ ನಾಯಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಜಯ್ ರೈ-ರಾಹುಲ್ ಗಾಂಧಿ -ಧರ್ಮೇಂದ್ರ ಪ್ರಧಾನ್


Last Updated:

Dharmendra Pradhan: ಸಿಜೆಪಿ ಬೇಡಿಕೆಗೆ ಕೇಂದ್ರ ಸರ್ಕಾರ ಸಹಮತ ಸೂಚಿಸುತ್ತಿದ್ದಂತೆ ಪ್ರತಿಭಟನೆ ಅಂತ್ಯಗೊಳಿಸೋದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿಯವರೇ ಕಾರಣ ಅಂತ ಕಾಂಗ್ರೆಸ್ ನಾಯಕರು ಕ್ರೆಡಿಟ್ ವಾರ್ ಶುರುಮಾಡಿದ್ದಾರೆ.

ಅಜಯ್ ರೈ-ರಾಹುಲ್ ಗಾಂಧಿ -ಧರ್ಮೇಂದ್ರ ಪ್ರಧಾನ್
ಅಜಯ್ ರೈ-ರಾಹುಲ್ ಗಾಂಧಿ -ಧರ್ಮೇಂದ್ರ ಪ್ರಧಾನ್

ದೆಹಲಿ: ನೀಟ್ (NEET) ಸೋರಿಕೆ ವಿರೋಧಿಸಿ ಸಿಜೆಪಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಅಂತ್ಯವಾಗಿದೆ. ಕೇಂದ್ರ ಶಿಕ್ಷಣ ಸಚಿವ (Union Education Minister) ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡುತ್ತಿದ್ದಂತೆ ಸಿಜೆಪಿ ಮುಖಂಡರು ಕೇಂದ್ರ ಸಚಿವ ಜೆಪಿ ನಡ್ಡಾ (JP Nadda) ಜೊತೆ ಸಭೆ ನಡೆಸಿ, ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರ ಸಹಮತ ಸೂಚಿಸುತ್ತಿದ್ದಂತೆ ಪ್ರತಿಭಟನೆ ಅಂತ್ಯಗೊಳಿಸೋದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿಯವರೇ (Rahul Gandhi) ಕಾರಣ ಅಂತ ಕಾಂಗ್ರೆಸ್ ನಾಯಕರು ಕ್ರೆಡಿಟ್ ವಾರ್ ಶುರುಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ರಾಹುಲ್ ಗಾಂಧಿ ಕಾರಣ

ಹೀಗಂತ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು ಖಂಡಿತವಾಗಿಯೂ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಗೆಲುವು ಅಂತ ಹೇಳಿದ್ದಾರೆ. ಈ ವಿಷಯವನ್ನು ನಿರಂತರವಾಗಿ ಎತ್ತುತ್ತಿರುವ ಮತ್ತು ನಮ್ಮ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಎಲ್ಲಾ ಸಹೋದ್ಯೋಗಿಗಳು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡುತ್ತಿರುವ ನಮ್ಮ ಯುವ ಸಹೋದ್ಯೋಗಿಗಳಿಗೆ ಇದು ಗೆಲುವು… ಈ ಗೆಲುವು ಸಾಮಾನ್ಯ ನಾಗರಿಕರು ಮತ್ತು ಯುವಜನರಿಗೆ ಸೇರಿದೆ ಅಂತ ಅಜಯ್ ರೈ ಹೇಳಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರನ್ನು ತನಿಖೆ ಮಾಡಿ

ಭವಿಷ್ಯದ ಕಾರ್ಯತಂತ್ರವನ್ನು ನಾವು ಖಂಡಿತವಾಗಿಯೂ ನಿರ್ಧರಿಸುತ್ತೇವೆ; ನಮ್ಮ ನಾಯಕರು ನಿರ್ಧರಿಸುತ್ತಾರೆ ಅಂತ ಅಜಯ್ ರೈ ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರನ್ನು ತನಿಖೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಯವರನ್ನು ನಾನು ಕೇಳಲು ಬಯಸುತ್ತೇನೆ. ಇದು ನನ್ನ ಬೇಡಿಕೆ ಅಂತ ಅವರು ಎಎನ್‌ಐಗೆ ಹೇಳಿದ್ದಾರೆ.

ಇದು ದೊಡ್ಡ ಹೆಜ್ಜೆ ಎಂದ ರಾಹುಲ್ ಗಾಂಧಿ

ಇನ್ನು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ರಾಹುಲ್ ಗಾಂಧಿ ಮಾಧ್ಯಮಗಳ ಮುಂದೆ ಮಾತನಾಡಿದ್ರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳೇ ವೆಲ್ ಡನ್ ಎಂದಿದ್ದಾರೆ. ಪ್ರಧಾನ್ ಅವರ ರಾಜೀನಾಮೆಯನ್ನು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪುನರ್ರೂಪಿಸುವ ನಿಟ್ಟಿನಲ್ಲಿ “ದೊಡ್ಡ ಹೆಜ್ಜೆ” ಎಂದು ಗಾಂಧಿಯವರು ಕರೆದರು.

ಹೋರಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ಇದು ಮೊದಲ ಹೆಜ್ಜೆ, ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪುನರ್ರೂಪಿಸುವಲ್ಲಿ ಒಂದು ದೊಡ್ಡ ಹೆಜ್ಜೆ. ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಶುಭವಾಗಲಿ; ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬೀದಿಗಿಳಿದು ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ, ಈ ದೇಶದ ಭವಿಷ್ಯಕ್ಕಾಗಿ ಹೋರಾಡಿದ ಮತ್ತು ಸಂವಿಧಾನವನ್ನು ರಕ್ಷಿಸಿದ ಪ್ರತಿಯೊಬ್ಬ ವಿದ್ಯಾರ್ಥಿ, ಪ್ರತಿಯೊಬ್ಬ ಯುವಕರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ. ಚೆನ್ನಾಗಿದೆ. ಸರ್ಕಾರಕ್ಕೆ ನೆನಪಿಸುತ್ತೇನೆ: ಇನ್ನೂ ಎರಡು ಬೇಡಿಕೆಗಳು ಬಾಕಿ ಇವೆ ಎಂದಿದ್ದಾರೆ.

ಇದು ನಮ್ಮ ವಿದ್ಯಾರ್ಥಿಗಳ ಗೆಲುವು

ಇದು ನಮ್ಮ ವಿದ್ಯಾರ್ಥಿಗಳ ಗೆಲುವು. ಇದು ಭಾರತದ ಭವಿಷ್ಯ. ನಮ್ಮ ಹೆಮ್ಮೆಯಾಗಿದ್ದ ಶಿಕ್ಷಣ ವ್ಯವಸ್ಥೆ, ಭಾರತದ ಶಿಕ್ಷಣ ವ್ಯವಸ್ಥೆಯು ತುಂಬಾ ಉತ್ತಮವಾಗಿದೆ ಎಂದು ಇಡೀ ಜಗತ್ತು ಒಪ್ಪಿಕೊಂಡಿದೆ. ಇದು ವರ್ಷಗಳಿಂದ ದಾಳಿಗೆ ಒಳಗಾಗಿದೆ. ಅದನ್ನು ವಶಪಡಿಸಿಕೊಳ್ಳಲಾಗುತ್ತಿದೆ, ಅದನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಇದು ಅದಕ್ಕೆ ಪ್ರತಿಕ್ರಿಯೆಯಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed