Actor: ‘ಗಬ್ಬರ್ ಸಿಂಗ್’ ಖ್ಯಾತಿಯ ನಟನಿಗೆ ಬ್ರೈನ್ ಸ್ಟ್ರೋಕ್; ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ | | ACTPnews

ಟಾಲಿವುಡ್ ನಟ ರಮೇಶ್


Last Updated:

ನಟ ರಮೇಶ್ ರನ್ನು ತೆಲುಗು ಸಿನಿಪ್ರಿಯರು ಹೆಚ್ಚು ಗುರುತಿಸುವುದು 2012ರಲ್ಲಿ ಬಿಡುಗಡೆಯಾದ ಪವನ್ ಕಲ್ಯಾಣ್ ಅಭಿನಯದ ‘ಗಬ್ಬರ್ ಸಿಂಗ್’ ಚಿತ್ರದ ಮೂಲಕ.

ಟಾಲಿವುಡ್ ನಟ ರಮೇಶ್
ಟಾಲಿವುಡ್ ನಟ ರಮೇಶ್

ಟಾಲಿವುಡ್ ಚಿತ್ರರಂಗದ ಹಿರಿಯ ನಟ ರಮೇಶ್ (Actor Ramesh) ಆರೋಗ್ಯದ ಕುರಿತು ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ನಟನಿಗೆ ಬ್ರೈನ್ ಸ್ಟ್ರೋಕ್ ಉಂಟಾಗಿದ್ದು, ತಕ್ಷಣವೇ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ನಟ ರಮೇಶ್ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ನಟ ರಮೇಶ್ ಗೆ ಹಠಾತ್ತನೆ ಬ್ರೈನ್ ಸ್ಟ್ರೋಕ್ ಕಾಣಿಸಿಕೊಂಡ ಬಳಿಕ ಕುಟುಂಬದವರು ಅವರನ್ನು ತಕ್ಷಣ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೂ ರಮೇಶ್ ಆರೋಗ್ಯದ ಕುರಿತು ಆಸ್ಪತ್ರೆ ಅಥವಾ ಕುಟುಂಬದವರಿಂದ ಅಧಿಕೃತ ವೈದ್ಯಕೀಯ ಪ್ರಕಟಣೆ ಇನ್ನೂ ಹೊರಬಂದಿಲ್ಲ. ಆದರೆ ವಿವಿಧ ವರದಿಗಳ ಪ್ರಕಾರ, ವೈದ್ಯರು ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡುತ್ತಿದ್ದು, ಮುಂದಿನ ಕೆಲ ದಿನಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಲಾಗುತ್ತಿದೆ.

ಗಬ್ಬರ್ ಸಿಂಗ್ ಮೂಲಕ ಜನಪ್ರಿಯತೆ

ನಟ ರಮೇಶ್ ರನ್ನು ತೆಲುಗು ಸಿನಿಪ್ರಿಯರು ಹೆಚ್ಚು ಗುರುತಿಸುವುದು 2012ರಲ್ಲಿ ಬಿಡುಗಡೆಯಾದ ಪವನ್ ಕಲ್ಯಾಣ್ ಅಭಿನಯದ ‘ಗಬ್ಬರ್ ಸಿಂಗ್’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಖಳನಾಯಕನ ತಂಡದ ಸದಸ್ಯನಾಗಿ ಕಾಣಿಸಿಕೊಂಡು ತಮ್ಮ ವಿಭಿನ್ನ ಅಭಿನಯದಿಂದ ಗಮನ ಸೆಳೆದಿದ್ದರು.

ವಿಶೇಷವಾಗಿ ಪೊಲೀಸ್ ಠಾಣೆಯ ಹಾಸ್ಯ ದೃಶ್ಯದಲ್ಲಿ ಅವರ ನಟನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಡಿಮೆ ಅವಧಿಯ ಪಾತ್ರವಾಗಿದ್ದರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ತಮ್ಮದೇ ಆದ ಗುರುತು ಮೂಡಿಸಿದ್ದರು.

ಗಬ್ಬರ್ ಸಿಂಗ್ ಚಿತ್ರದ ಯಶಸ್ಸಿನ ಬಳಿಕ ರಮೇಶ್ ಅವರು ಅತ್ತಾರಿಂಟಿಕಿ ದಾರೇದಿ ಮತ್ತು ಸರ್ದಾರ್ ಗಬ್ಬರ್ ಸಿಂಗ್ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಾಸ್ಯ, ಖಳನಾಯಕನ ತಂಡದ ಸದಸ್ಯ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪರದೆಯ ಮೇಲೆ ಅವರ ಸಮಯ ಕಡಿಮೆಯಿದ್ದರೂ, ತಮ್ಮ ನೈಸರ್ಗಿಕ ಅಭಿನಯದಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ಈ ಹಿನ್ನೆಲೆ ನಟನ ಅನಾರೋಗ್ಯದ ಸುದ್ದಿ ಅಭಿಮಾನಿಗಳಿಗೆ ಇನ್ನಷ್ಟು ಆಘಾತ ಉಂಟುಮಾಡಿದೆ. ಕೆಲವೇ ದಿನಗಳ ಹಿಂದೆ ಚಿತ್ರೀಕರಣದಲ್ಲಿ ತೊಡಗಿದ್ದ ನಟ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಹಲವರಲ್ಲಿ ಆತಂಕ ಮೂಡಿಸಿದೆ.

ಹಾಗೆಯೇ ರಮೇಶ್ ಆರೋಗ್ಯದ ಸುದ್ದಿ ಹೊರಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಅವರ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ. ಹಲವರು ಅವರ ಸಿನಿಮಾಗಳ ದೃಶ್ಯಗಳನ್ನು ಹಂಚಿಕೊಂಡು, ಅವರು ಮತ್ತೆ ಆರೋಗ್ಯವಂತರಾಗಿ ಚಿತ್ರರಂಗಕ್ಕೆ ಮರಳಲಿ ಎಂದು ಆಶಿಸುತ್ತಿದ್ದಾರೆ.

ಸಣ್ಣ ಪಾತ್ರಗಳ ಮೂಲಕವೂ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ರಮೇಶ್, ತಮ್ಮ ಸಹಜ ಅಭಿನಯದಿಂದ ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed