IPL 2026: ಎಂಎಸ್ ಧೋನಿ ಹೆಸರಿನಲ್ಲಿ ಸಿಎಸ್‌ಕೆಯಿಂದ ಮಹಾಮೋಸ? ಚೆನ್ನೈ ಫ್ರಾಂಚೈಸಿ ವಿರುದ್ಧ ಮಾಜಿ ಕ್ರಿಕೆಟರ್ ಶಾಕಿಂಗ್ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಚೆನ್ನೈ ಸೂಪರ್ ಕಿಂಗ್ಸ್


Last Updated:

ಐಪಿಎಲ್ 2026 ರಲ್ಲಿ ಎಂಎಸ್ ಧೋನಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಧೋನಿ ಟೂರ್ನಿಯುದ್​ದಕ್ಕೂ ಚೆನ್ನೈ ತಂಡದೊಂದಿಗೆ ಇದ್ದರು. ಸಿಎಸ್‌ಕೆ ಐಪಿಎಲ್‌ನಿಂದ ಹೊರಬಿದ್ದ ನಂತರ, ಮಾಜಿ ಕ್ರಿಕೆಟಿರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ (IPL) 2026 ರಲ್ಲಿ ಎಂಎಸ್ ಧೋನಿ (MS Dhoni) ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಸೀಸನ್ (Season) ಪ್ರಾರಂಭವಾಗುವ ಮೊದಲೇ ಧೋನಿ ಗಾಯಗೊಂಡಿದ್ದರು. ಬಳಿಕ ಧೋನಿ ಮರಳುವ ಬಗ್ಗೆ ವಿವಿಧ ವರದಿಗಳು ಬಂದವು. ಆದರೆ ಅವರು ಎಂದಿಗೂ ಮೈದಾನಕ್ಕೆ ಹಿಂತಿರುಗಲಿಲ್ಲ. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ರಯಾಣ ಕೊನೆಗೊಂಡಿದೆ. ಮುಂದಿನ ವರ್ಷ ಧೋನಿ ಆಟವನ್ನು ನೋಡಲು ಅಭಿಮಾನಿಗಳು (Fans) ಉತ್ಸುಕರಾಗಿದ್ದಾರೆ. ಇದರ ನಡುವೆ ಭಾರತ (India)ದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ (Krishnamachari Srikkanth) ಈಗ ಸಿಎಸ್‌ಕೆ ಮ್ಯಾನೇಜ್ಮೆಂಟ್ (Management) ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಧೋನಿ ಹೆಸರನ್ನು ಸಿಎಸ್‌ಕೆ ಅಭಿಮಾನಿಗಳಿಗೆ ಮೋಸ ಮಾಡಲು ಬಳಸಲಾಗಿದೆ ಎಂದು ಹೇಳಿದ್ದಾರೆ.

ಧೋನಿ ಹೆಸರಿನಲ್ಲಿ ಮಹಾಮೋಸ?

ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಎಸ್‌ಕೆ ಬಗ್ಗೆ ಮಾತನಾಡಿದ್ದಾರೆ. ಸಿಎಸ್‌ಕೆ ಮ್ಯಾನೇಜ್ಮೆಂಟ್ ಧೋನಿ ತಂಡಕ್ಕೆ ಮರಳುವ ಬಗ್ಗೆ ನಿರಂತರವಾಗಿ ಪ್ರಚಾರ ಮಾಡುತ್ತಿತ್ತು. ಆದರೆ ಅವರು ಒಂದೇ ಒಂದು ಪಂದ್ಯ ಆಡಲು ಫಿಟ್ ಆಗಲು ವಿಫಲರಾಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಸ್‌ಕೆ ಮ್ಯಾನೇಜ್ಮೆಂಟ್ ಮುಂದಿನ ಪಂದ್ಯಕ್ಕೆ ಧೋನಿ ಲಭ್ಯವಿರುತ್ತಾರೆ ಎಂದು ಅವರು ಹೇಳುತ್ತಲೇ ಇದ್ದರು. ನಂತರ ಅವರು ಧೋನಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಕೆಲವು ವೀಡಿಯೊಗಳನ್ನು ಪೋಸ್ಟ್ ಮಾಡಿದರು. ನಂತರ ಧೋನಿ ಮತ್ತೆ ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೊಂಡರು. ಅವರು ಈ ಮೂರ್ಖತನವನ್ನು ನಿಲ್ಲಿಸಬೇಕಿತ್ತು. ಧೋನಿ ಇಡೀ ಆವೃತ್ತಿಯಲ್ಲಿ ಆಡುವುದಿಲ್ಲ ಎಂದು ಅವರು ನೇರವಾಗಿ ಹೇಳಬೇಕಿತ್ತು. ನೀವು ಹಾಗೆ ಹೇಳಿದ್ದರೆ, ಅಭಿಮಾನಿಗಳು ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದರು” ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಕಿಡಿಕಾರಿದ್ದಾರೆ.

ಧೋನಿ ಸಮಯ ಮುಕ್ತಾಯ?

ಮುಂದಿನ ಪಂದ್ಯಕ್ಕೆ ಧೋನಿ ಲಭ್ಯವಿರುತ್ತಾರೆ ಎಂದು ಋತುರಾಜ್ ಗಾಯಕ್ವಾಡ್ ಹೇಳುತ್ತಲೇ ಇದ್ದರು. ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಈ ವಿಷಯದಲ್ಲಿ ಸ್ಪಷ್ಟವಾಗಿರಬೇಕು. ಧೋನಿ ಇಡೀ ಆವೃತ್ತಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದರೆ, ಅಭಿಮಾನಿಗಳು ಅದನ್ನು ಒಪ್ಪಿಕೊಂಡು ಮುಂದುವರಿಯುತ್ತಿದ್ದರು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪಂದ್ಯಗಳಲ್ಲಿ ಯಾರೂ ಎಂಎಸ್ ಧೋನಿಯನ್ನು ಮಿಸ್ ಮಾಡಿಕೊಳ್ಳಲಿಲ್ಲ. ಅವರು ಡ್ರೆಸ್ಸಿಂಗ್ ರೂಮಿನಲ್ಲಿ ಏಕೆ ಇಲ್ಲ ಎಂದು ಕೇಳುತ್ತಿದ್ದರು. ಅದನ್ನು ಮೀರಿ, ಅವರು ಏಕೆ ಪಂದ್ಯಗಳನ್ನು ಆಡುತ್ತಿಲ್ಲ ಎಂದು ಯಾರೂ ಕೇಳುತ್ತಿರಲಿಲ್ಲ. ಧೋನಿಯ ಸಮಯ ಮುಗಿದಿದೆ” ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಮುಂದಿನ ವರ್ಷ ಧೋನಿ ಆಡುತ್ತಾರಾ?

2026 ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಈಗ ಅಭಿಮಾನಿಗಳು ಅವರು ಮುಂದಿನ ವರ್ಷ ಆಡುತ್ತಾರೆ ಎಂದು ಆಶಿಸುತ್ತಿದ್ದಾರೆ. ಧೋನಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಸುರೇಶ್ ರೈನಾ ಮುಂದಿನ ಆವೃತ್ತಿಯಲ್ಲಿ ಎಂಎಸ್ ಧೋನಿ ಆಡಬೇಕೆಂದು ಒತ್ತಾಯಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports