Last Updated:
ರಚಿತಾ ರಾಮ್ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ, ಸರಳ ಭಕ್ತಿ, ಅಭಿಮಾನಿಗಳ ಜೊತೆ ಆತ್ಮೀಯ ಸಂಭಾಷಣೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
ಮಂಡ್ಯ: ಸ್ಯಾಂಡಲ್ವುಡ್ನ (Sandalwood) ಸ್ಟಾರ್ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ಮಂಡ್ಯ (Mandya) ಜಿಲ್ಲೆಯ ಮೇಲುಕೋಟೆಯತ್ತ ಮುಖ ಮಾಡಿದ್ದಾರೆ. ತಮ್ಮ ಮನೆ ದೇವರಾದ (God) ಚೆಲುವನಾರಾಯಣಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ ನಟಿ, ಭಕ್ತಿಪರವಶರಾಗಿ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಭಾರೀ ಮೆಚ್ಚುಗೆ
ಸಿನಿಮಾಗಳ ಸದ್ದು ಗದ್ದಲದಿಂದ ದೂರ ಉಳಿದು, ದೇವಸ್ಥಾನದ ಶಾಂತ ವಾತಾವರಣದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದು ಅವರ ಭಕ್ತರಿಗೆ ಅಚ್ಚರಿ ಮತ್ತು ಸಂತೋಷವನ್ನು ನೀಡಿದೆ. ಸ್ಟಾರ್ ನಟಿಯಾಗಿದ್ದರೂ ದೇವಸ್ಥಾನದಲ್ಲಿ ಸರಳವಾಗಿ ನಡೆದುಕೊಂಡ ನಟಿಯ ಈ ಗುಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Mandya,Mandya,Karnataka












