Last Updated:
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮದೇವ್, ಕಂಗನಾ ರನೌತ್ ತಮ್ಮ ಸಹೋದರಿ ಎಂದು ಕರೆದಿದ್ದಾರೆ. ಕಂಗನಾಗೆ ಸಿಹಿತಿಂಡಿಗಳು, ಉಡುಗೊರೆಗಳು ಮತ್ತು ರಾಖಿಯನ್ನು ಕಳುಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕಂಗನಾ ರನೌತ್ (Kangana Ranaut) ಹಾಗೂ ಬಾಬಾ ರಾಮದೇವ್ (Baba Ramdev) ನಡುವಿನ ಹಳೆಯ ಭಿನ್ನಾಭಿಪ್ರಾಯಕ್ಕೆ ರಕ್ಷಾ ಬಂಧನದಂದು ಹೊಸ ತಿರುವು ಸಿಕ್ಕಿದೆ. ಹಿಂದೆ ಪರಸ್ಪರ ಕಟುವಾಗಿ ಟೀಕಿಸಿಕೊಂಡಿದ್ದ ಇಬ್ಬರೂ ಇದೀಗ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಹೋದರ-ಸಹೋದರಿ ಬಾಂಧವ್ಯಕ್ಕೆ ಒತ್ತು ನೀಡಿದ್ದಾರೆ. ರಕ್ಷಾ ಬಂಧನದ ಪ್ರಯುಕ್ತ ಬಾಬಾ ರಾಮದೇವ್ ಕಂಗನಾಗೆ ಸಿಹಿತಿಂಡಿ, ಉಡುಗೊರೆ ಹಾಗೂ ರಾಖಿಯನ್ನು ಕಳುಹಿಸುವ ಮೂಲಕ ವಿವಾದವನ್ನು ಸಂಭಾಷಣೆಯ ಮೂಲಕ ಅಂತ್ಯಗೊಳಿಸುವ ಸಂದೇಶ ನೀಡಿದ್ದಾರೆ.














