Last Updated:
ಸುಮಾರು ಮೂರು ತಿಂಗಳಲ್ಲಿ ಎರಡೂ ಪಕ್ಷಗಳ ನಡುವಿನ ಎರಡನೇ ಭೇಟಿಯಾಗಿತ್ತು. ಆದರೀಗ ಇದು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಬಿಜೆಪಿ ವಿರುದ್ಧ ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಎನ್ಸಿಪಿ ನಡುವಿನ ಈ ನಿಕಟತೆ ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆಗಳು ಸದ್ಯಕ್ಕೀಗ ಹುಟ್ಟಿಕೊಂಡಿವೆ.
ಮುಂಬೈ(ಆ.07): ಮಹಾರಾಷ್ಟ್ರ ರಾಜಕೀಯದಲ್ಲಿ ಅದೊಂದು ಸಭೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಹಾರದಲ್ಲಿ ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾದ ಬಂಕಿಪುರ ಉಪಚುನಾವಣೆಯಲ್ಲಿ ಕಮಲಪಾಳಯವನ್ನು ಸೋಲಿಸಿದ ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಗುರುವಾರ ಎನ್ಸಿಪಿ ಮುಖ್ಯಸ್ಥೆ ಸುನೇತ್ರಾ ಪವಾರ್ ಮತ್ತು ಅವರ ಪುತ್ರ ಸಂಸದೆ ಪಾರ್ಥ್ ಪವಾರ್ ಅವರನ್ನು ಭೇಟಿಯಾದರು. ಇದು ಮೊದಲ ಭೇಟಿಯಾಗಿರಲಿಲ್ಲ. ಸುಮಾರು ಮೂರು ತಿಂಗಳಲ್ಲಿ ಎರಡೂ ಪಕ್ಷಗಳ ನಡುವಿನ ಎರಡನೇ ಭೇಟಿಯಾಗಿತ್ತು. ಆದರೀಗ ಇದು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಬಿಜೆಪಿ ವಿರುದ್ಧ ಚುನಾವಣಾ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾದ ಎನ್ಸಿಪಿ ನಡುವಿನ ಈ ನಿಕಟತೆ ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆಗಳು ಸದ್ಯಕ್ಕೀಗ ಹುಟ್ಟಿಕೊಂಡಿವೆ.














