ಈ ಪುಸ್ತಕದ ವಿಶೇಷತೆಗಳು
ಈ ಪುಸ್ತಕವನ್ನ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರು ಬರೆದಿದ್ದಾರೆ. ಈ ಪುಸ್ತಕದ ಪೂರ್ತಿ ಹೆಸರು “ನಾನಿರುವುದೇ ನಿಮಗಾಗಿ ನಾಡಿರುವುದು ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ” ಅಂತಲೇ ಇದೆ.
ಈ ಪುಸ್ತಕದಲ್ಲಿ ಕನ್ನಡ ಸಿನಿಮಾದ ತತ್ವ ಹಾಗೂ ರಾಜಕೀಯವನ್ನ ಆಳವಾಗಿಯೇ ವಿಶ್ಲೇಷಣೆ ಮಾಡಲಾಗಿದೆ. ಈ ಪುಸ್ತಕಕ್ಕೆ ಉದ್ದನೆಯ ಶೀರ್ಷಿಕೆನೂ ಇದೆ.
“ನಾನಿರುವುದೇ ನಿಮಗಾಗಿ ನಾಡಿರುವುದು ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ” ಅಂತಲೇ ಇದೆ. ಇನ್ನುಳಿದಂತೆ ಈ ಒಂದು ಪ್ರಸ್ತಕದ ಮೂಲಕ ಕನ್ನಡಿಗನ ಕೃತಿಕೆ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ಎಲ್ಲರೂ ಹೆಮ್ಮೆ ಪಡುವೆ ರೀತಿನೇ ಇದೆ ಅಂತಲೂ ಹೇಳಬಹದು.
ಮಿಥ್ಯ ಚಿತ್ರಕ್ಕೆ ಮೂರು ಪ್ರಶಸ್ತ್ರಿಗಳು ಬಂದಿವೆ. ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಇದೇ ಚಿತ್ರದ ಪೋಷಕ ನಟನೆಗೆ ರೂಪಾ ವರ್ಕಾಡಿ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ.
ಕನ್ನಡಕ್ಕೆ ಪ್ರಶಸ್ತಿಗಳು
ಇದೇ ಚಿತ್ರದ ನಟನೆಗೆ ಬಾಲ ನಟ ಅತಿಶ್ ಶೆಟ್ಟಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ಈ ಚಿತ್ರವನ್ನ ರಕ್ಷಿತ್ ಶೆಟ್ಟಿ ಅವರ ಪರಮ್ವಃ ಸ್ಟುಡಿಯೋಸ್ ಹಾಗೂ ಕೆಆರ್ಜಿ ಈ ಚಿತ್ರವನ್ನ ನಿರ್ಮಿಸಿದೆ. ಸುಮಂತ್ ಭಟ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಅತ್ಯುತ್ತಮ ನಾಯಕಿ ನಟಿ ಅಂತ ಬಂದ್ರೆ, ಆರ್ಟಿಕಲ್ -370 ಚಿತ್ರಕ್ಕೆ ಯಾಮಿ ಗೌತಮ್ ಅವರಿಗೆ ಬಂದಿದೆ. ಈ ಚಿತ್ರದ ಅದ್ಭುತ ಅಭಿನಯಕ್ಕೆ ಇವರಿಗೆ ಈ ಪ್ರಶಸ್ತಿ ಬಂದಿದೆ.
ಅತ್ಯುತ್ತಮ ನಟ ಪ್ರಶಸ್ತಿ ಅಂತ ಬಂದರೆ, ಮಲೆಯಾಳಂ ಭ್ರಮಯುಗಂ ಚಿತ್ರಕ್ಕೆ ಮಮ್ಮುಟ್ಟಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಪಡೆದುಕೊಂಡಿದ್ದಾರೆ. ಇವರು ಚಂದು ಚಾಂಪಿಯನ್ ಚಿತ್ರಕ್ಕಾಗಿಯೇ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬೆಸ್ಟ್ ತುಳು ಸಿನಿಮಾ ಅಂತ ಬಂದ್ರೆ ಈ ಸಲ ಇಂಬು ಚಿತ್ರಕ್ಕೆ ಈ ಪ್ರಶಸ್ತಿ ಬಂದಿದೆ. ಪಿಚ್ಚರ್ ಸ್ಟುಡಿಯೋ ಇದನ್ನ ನಿರ್ಮಾಣ ಮಾಡಿದೆ. ಶಿವಧ್ವಜ್ ಶೆಟ್ಟಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.
ಇತರ ಸಿನಿಮಾಗಳ ವಿವರ
ಅತ್ಯುತ್ತಮ ನಟಿ: ‘ಆರ್ಟಿಕಲ್ 370’ ಚಿತ್ರಕ್ಕಾಗಿ ಯಾಮಿ ಗೌತಮ್
ಅತ್ಯುತ್ತಮ ನಟ: ‘ಭ್ರಮಯುಗಂ’ ಚಿತ್ರಕ್ಕಾಗಿ ಮಮ್ಮುಟ್ಟಿ
ಅತ್ಯುತ್ತಮ ನಿರ್ದೇಶನ: ‘ಅಮರನ್’ ಚಿತ್ರಕ್ಕಾಗಿ ರಾಜ್ಕುಮಾರ್ ಪೆರಿಯಸಾಮಿ
ಅತ್ಯುತ್ತಮ ಮಕ್ಕಳ ಸಿನಿಮಾ: ‘ನಂದಕಿಶೋರ್’ (ತೆಲುಗು)
ಅತ್ಯುತ್ತಮ ಜನಪ್ರಿಯ ಸಿನಿಮಾ: ‘ಕಲ್ಕಿ 2898 AD’ (ತೆಲುಗು)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರಕ್ಕಾಗಿ ರಣದೀಪ್ ಹೂಡಾ













