Last Updated:
Viral News: ಆ ಕೋಟ್ಯಾಧಿಪತಿ ತನ್ನದೇ ಮನೆಗೆ ಬೆಂಕಿ ಹಚ್ಚಿದ್ದೇಕೆ? ಮಕ್ಕಳೂ, ಮನೆಮಂದಿ ಇದ್ದ ಮನೆಗೆ ಬೆಂಕಿ ಹಚ್ಚೋಕೆ ಕಾರಣ ಆಗಿದ್ದೇನು?
ಕೋಟ್ಯಾಧೀಶ ವ್ಯಕ್ತಿಯೊಬ್ಬರು ತಮ್ಮದೇ ದೊಡ್ಡ ಮನೆಗೆ ಬೆಂಕಿ ಇಟ್ಟಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ವ್ಯಕ್ತಿಯೊಬ್ಬ ಬನಿಯನ್ ಹಾಗೂ ಶಾರ್ಟ್ಸ್ (Shorts) ಧರಿಸಿಕೊಂಡು ತನ್ನದೇ ಮನೆಯ ಸೋಫಾಗೆ (Sofa) ಬೆಂಕಿ ಹಚ್ಚುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡ ಆಕಸ್ಮಿಕ ಅಲ್ಲ ಎನ್ನುವುದು ಈಗ ರಿವೀಲ್ ಆಗಿದೆ. ಆರಂಭದಲ್ಲಿ ಇದು ಆಕಸ್ಮಿಕ ಎಂದು ನಂಬಲಾಗಿತ್ತು.
ಆದರೆ ಮನೆಯೊಳಗಿನ ಸೋಫಾಗೆ ಬೆಂಕಿ ಹಚ್ಚುತ್ತಿರುವುದನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ನಂತರ ಪೂರ್ತಿ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿಡಿಯೋದಲ್ಲಿ ಕಂಡು ಬಂದ ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಬೇಕೆಂದೇ ಬೆಂಕಿ ಹಚ್ಚಲಾಗಿದೆಯೇ ಎಂದು ತಿಳಿಯಲು ನಿರ್ಧರಿಸಲು ಪೊಲೀಸರು ತನಿಖೆಯನ್ನು ಆ ದಿಕ್ಕಿನಲ್ಲಿ ಪ್ರಾರಂಭಿಸಿದ್ದಾರೆ.
ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್ ನಗರ ಸೆಕ್ಟರ್ -14 ರ ಮನೆಯೊಂದರಲ್ಲಿ ಜುಲೈ 1 ರಂದು ಈ ಘಟನೆ ನಡೆದಿದ್ದು, ಬೆಂಕಿಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವೈರಲ್ ವಿಡಿಯೋದಲ್ಲಿ, ಉದ್ಯಮಿ ಮುಖೇಶ್ ಗುಪ್ತಾ ಅವರು ಸೋಫಾದ ಮೇಲೆ ಪತ್ರಿಕೆಯ ತುಂಡುಗಳನ್ನು ಇರಿಸಿ ಬೆಂಕಿ ಹಚ್ಚುತ್ತಿರುವುದನ್ನು ತೋರಿಸಲಾಗಿದೆ. ನಂತರ ಸೋಫಾ ವೇಗವಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ಕಾಣಬಹುದು.
ಆರಂಭದಲ್ಲಿ ಸಾಮಾನ್ಯ ಬೆಂಕಿ ಎಂದು ಪರಿಗಣಿಸಲಾಗಿದ್ದ ಘಟನೆಯ ಸುತ್ತಲಿನ ಸನ್ನಿವೇಶಗಳ ಬಗ್ಗೆ ಈ ದೃಶ್ಯಾವಳಿಗಳು ಹೊಸ ಅನುಮಾನಗಳನ್ನು ಹುಟ್ಟುಹಾಕಿವೆ.
ಮೂಲಗಳ ಪ್ರಕಾರ, ಕುಟುಂಬದೊಳಗಿನ ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಬೆಂಕಿ ಅವಘಡ ಸಂಭವಿಸುವ ಮುನ್ನ ಕುಟುಂಬವು ಹಲವು ದಿನಗಳಿಂದ ಜಗಳ ಮಾಡುತ್ತಿತ್ತು ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆಯೊಳಗೆ ಇದ್ದರು. ಬೆಂಕಿಯನ್ನು ಸಕಾಲದಲ್ಲಿ ನಿಯಂತ್ರಣಕ್ಕೆ ತರದಿದ್ದರೆ, ಬೆಂಕಿ ದೊಡ್ಡ ದುರಂತಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ. ಕುಟುಂಬದಿಂದ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ವೈರಲ್ ವಿಡಿಯೋವನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗಳ ರೀತಿ, ಸಮಯ, ಎಲ್ಲವನ್ನೂ ತನಿಖೆ ಮಾಡುತ್ತಿದ್ದಾರೆ ಎಂದು ಕವಿನಗರ ಎಸಿಪಿ ಸೂರ್ಯಬಲಿ ಮೌರ್ಯ ಹೇಳಿದ್ದಾರೆ.
Bangalore,Karnataka













