Vietnam: ವಿಯೆಟ್ನಾಂನಲ್ಲಿ ಭೀಕರ ಜಲಗಂಡಾಂತರ! ಪ್ರವಾಸಕ್ಕೆಂದು ತೆರಳಿದ್ದ 15 ಭಾರತೀಯರು ದುರ್ಮರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬೋಟ್‌ ಮುಳುಗಡೆ


Last Updated:

ವೇಗವಾಗಿ ಚಲಿಸುತ್ತಿದ್ದ ಸ್ಪೀಡ್‌ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು ಸೇರಿದಂತೆ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು. ಬೋಟ್ ಮುಳುಗುತ್ತಿದ್ದಂತೆ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಸದ್ಯಕ್ಕೆ 32 ಜನರ ಪೈಕಿ 18 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬೋಟ್‌ ಮುಳುಗಡೆ
ಬೋಟ್‌ ಮುಳುಗಡೆ

ವಿದೇಶ ಪ್ರವಾಸಕ್ಕೆ ತೆರಳಿದ್ದ ಭಾರತೀಯರಿಗೆ ವಿಯೆಟ್ನಾಂನಲ್ಲಿ (Vietnam) ಭೀಕರ ಜಲಗಂಡಾಂತರ ಎದುರಾಗಿದೆ. ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫೂ ಕ್ವಕ್ ದ್ವೀಪದ (Island of Phu Quoc) ಬಳಿ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ (Speed Boat) ಮುಳುಗಡೆಯಾಗಿ ಭೀಕರ ದುರಂತ ಸಂಭವಿಸಿದೆ. ವಿಯೆಟ್ನಾಂನ ದಕ್ಷಿಣ ಕರಾವಳಿಯ ದ್ವೀಪದ ಬಳಿ ಬೆಳಗ್ಗೆ ಸುಮಾರು 10:30ರ ವೇಳೆಗೆ ಈ ಘೋರ ದುರ್ಘಟನೆ ನಡೆದಿದೆ.

ಬಳಿ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ (Speed Boat) ಮುಳುಗಡೆಯಾಗಿ ಭೀಕರ ದುರಂತ ಸಂಭವಿಸಿದೆ. ವಿಯೆಟ್ನಾಂನ ದಕ್ಷಿಣ ಕರಾವಳಿಯ ದ್ವೀಪದ ಬಳಿ ಬೆಳಗ್ಗೆ ಸುಮಾರು 10:30ರ ವೇಳೆಗೆ ಈ ಘೋರ ದುರ್ಘಟನೆ ನಡೆದಿದೆ.

ವೇಗವಾಗಿ ಚಲಿಸುತ್ತಿದ್ದ ಸ್ಪೀಡ್‌ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು ಸೇರಿದಂತೆ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು. ಬೋಟ್ ಮುಳುಗುತ್ತಿದ್ದಂತೆ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಸದ್ಯಕ್ಕೆ 32 ಜನರ ಪೈಕಿ 18 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನುಳಿದ ಪ್ರವಾಸಿಗರ ಪತ್ತೆಗಾಗಿ ಕಡಲಿನಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಈ ದುರಂತದಲ್ಲಿ ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇಡೀ ದೇಶವೇ ಬೆಚ್ಚಿಬೀಳುವಂತಾಗಿದೆ.

ತಮಿಳುನಾಡಿನ 17, ಆಂಧ್ರದ ಐವರ ಪ್ರಯಾಣ

ಬೋಟ್‌ನಲ್ಲಿದ್ದ ಪ್ರವಾಸಿಗರನ್ನು ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂಲದವರೆಂದು ಗುರುತಿಸಲಾಗಿದ್ದು, ತಮಿಳುನಾಡಿನ 17, ಆಂಧ್ರದ ಐವರು ಸೇರಿದಂತೆ 4 ವಿಯೆಟ್ನಾಂ ಸಿಬ್ಬಂದಿ ಬೋಟ್‌ನಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಓಷನ್‌ ಪರ್ಲ್‌ ಸಂಸ್ಥೆ ನಿರ್ವಹಿಸುತ್ತಿದ್ದ ಬೋಟ್ ನೀರಿನಲ್ಲಿ ಮಗುಚಿದೆ.

ತಾಂತ್ರಿಕ ದೋಷದಿಂದ ದುರಂತ

ಸ್ಪೀಡ್‌ಬೋಟ್ ಹಾನ್ ಮಿ ರೂಟ್‌ನಿಂದ ಆನ್ ಥೋಯ್ ಬಂದರಿಗೆ (ಫು ಕ್ವಾಕ್ ವಿಮಾನ ನಿಲ್ದಾಣದಿಂದ ಸುಮಾರು 25 ಕಿ.ಮೀ) ಪ್ರಯಾಣಿಸುತ್ತಿತ್ತು. ಹಾನ್ ಮಿ ರೂಟ್ ನ್ಗೋಯ್ ದ್ವೀಪದಿಂದ ಸುಮಾರು 400 ಮೀಟರ್ ದೂರದಲ್ಲಿತ್ತು, ಆದ್ರೆ, ದೋಣಿಯಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ, ಇದರಿಂದಾಗಿ ದೋಣಿ ಮಗುಚಿ ಬಿದ್ದು ದುರಂತ ಸಂಭವಿಸಿದೆ ಎನ್ನಲಾಗಿದೆ.
ಇನ್ನು, ದುರಂತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ವಿಯೆಟ್ನಾಂನ ಸ್ಥಳೀಯ ಆಡಳಿತ ಮತ್ತು ಕರಾವಳಿ ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ನೀರುಪಾಲಾಗಿದ್ದ ಭಾರತೀಯ ಪ್ರವಾಸಿಗರನ್ನು ಹೊರತೆಗೆಯಲು ಡೈವರ್‌ಗಳು ಮತ್ತು ಆಧುನಿಕ ದೋಣಿಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ತಂಡಗಳು ಸಮುದ್ರ ತಳದಲ್ಲಿ ಶೋಧ ನಡೆಸುತ್ತಿದ್ದು, ಆದ್ರೆ, ಸಾವುನೋವುಗಳ ನಿಖರ ಸಂಖ್ಯೆ ಮತ್ತು ಅವರ ಸ್ಥಿತಿಗತಿಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.

ಇನ್ನು ಭಾರತದ ರಾಯಭಾರ ಕಚೇರಿ 3 ಹೆಲ್ಪ್‌ಲೈನ್ ತೆರೆದಿದ್ದು, ಕುಟುಂಬಸ್ಥರು ಹೆಲ್ಪ್‌ಲೈನ್ ಸಂಪರ್ಕಿಸಲು ಕೋರಿದೆ. +84 36 281 7930 +84 91 552 3714 +84 33 452 0414



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed