Last Updated:
ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೆ ನಂದಿಗ್ರಾಮ ಮತ್ತು ರೆಜಿನಗರಕ್ಕೆ ಚುನಾವಣಾ ಆಯೋಗವು ಅವರ ಬಣಕ್ಕೆ ‘ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಹೆಸರನ್ನು ಮತ್ತು ‘ಫುಟ್ಬಾಲ್ ಆಟಗಾರ್ತಿ’ ಚಿಹ್ನೆಯನ್ನು ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿವೆ.
ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶುಕ್ರವಾರ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸುವ ನಿರ್ಧಾರದ ಬಗ್ಗೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು, ಪಕ್ಷದ ಗುರುತಿನ ನಷ್ಟವನ್ನು ತಾಯಿ ತನ್ನ ಮಗುವನ್ನು ಕಳೆದುಕೊಂಡ ನೋವಿನಂತೆ ಎಂದು ಹೋಲಿಸಿದರಲ್ಲದೇ, ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೊಂದು ‘ಕಪ್ಪು ದಿನ’ ಎಂದು ಕರೆದರು.
ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೆ ನಂದಿಗ್ರಾಮ ಮತ್ತು ರೆಜಿನಗರಕ್ಕೆ ಚುನಾವಣಾ ಆಯೋಗವು ಅವರ ಬಣಕ್ಕೆ ‘ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಹೆಸರನ್ನು ಮತ್ತು ‘ಫುಟ್ಬಾಲ್ ಆಟಗಾರ್ತಿ’ ಚಿಹ್ನೆಯನ್ನು ನೀಡಿದ ಕೆಲವೇ ಗಂಟೆಗಳ ನಂತರ ಅವರ ಹೇಳಿಕೆಗಳು ಬಂದಿವೆ.
‘ಒಬ್ಬ ತಾಯಿಗೆ ಮಗುವನ್ನು ಕಳೆದುಕೊಳ್ಳುವ ನೋವು ಅರ್ಥವಾಗುತ್ತದೆ, ಮತ್ತು ಮಗುವಿಗೆ ತಾಯಿಯನ್ನು ಕಳೆದುಕೊಳ್ಳುವ ನೋವು ಅರ್ಥವಾಗುತ್ತದೆ. ಹೋರಾಟದ ಮೂಲಕ ಈ ಸಂಘಟನೆಯನ್ನು ನಿರ್ಮಿಸದವರು ಆ ಭಾವನಾತ್ಮಕ ಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಸಎಂದು ಅವರು ಹೇಳಿದರು.
‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಹೆಸರು ಮತ್ತು ಅದರ ಮೀಸಲು ಚಿಹ್ನೆಯನ್ನು ಬಳಸದಂತೆ ಎರಡೂ ಗುಂಪುಗಳನ್ನು ನಿಷೇಧಿಸಲು ಒಂದು ದಿನ ಮುಂಚಿತವಾಗಿ ಮಧ್ಯಂತರ ನಿರ್ಧಾರ ತೆಗೆದುಕೊಂಡ ನಂತರ, ವಿವಾದದ ಮೂಲ ನಿರ್ಣಯ ಬರುವವರೆಗೆ ಚುನಾವಣಾ ಆಯೋಗವು ಶುಕ್ರವಾರ ಎರಡು ಪ್ರತಿಸ್ಪರ್ಧಿ ಬಣಗಳಿಗೆ ಪ್ರತ್ಯೇಕ ಹೆಸರುಗಳು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದೆ.














