Tirumala: ತಿರುಮಲದ ಅತ್ಯಂತ ಅಪರೂಪದ ದರ್ಶನ, ಶ್ರೀವಾರಿ ಎದೆಯ ಮೇಲಿರುವ ‘ವ್ಯೂಹ ಲಕ್ಷ್ಮಿ ಅಚ್ಚು’ ಬಗ್ಗೆ ನಿಮಗೆ ಗೊತ್ತಾ? | ಜ್ಯೋತಿಷ್ಯ | ACTPnews

ಏನಿದು 'ವ್ಯೂಹ ಲಕ್ಷ್ಮಿ ಅಚ್ಚು'?


Last Updated:

ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಇಬ್ಬರೂ ಬೇರ್ಪಡಿಸಲಾಗದ ದೈವಿಕ ಶಕ್ತಿಗಳು. ತಿರುಮಲಕ್ಕೆ ಹೋದಾಗ ಈ ವ್ಯೂಹ ಲಕ್ಷ್ಮಿಯ ದರ್ಶನ ಪಡೆದರೆ ಆಧ್ಯಾತ್ಮಿಕ ಸಿದ್ಧಿ ಮತ್ತು ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ.

ಏನಿದು 'ವ್ಯೂಹ ಲಕ್ಷ್ಮಿ ಅಚ್ಚು'?
ಏನಿದು ‘ವ್ಯೂಹ ಲಕ್ಷ್ಮಿ ಅಚ್ಚು’?

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿದಿನ ಲಕ್ಷಾಂತರ ಭಕ್ತರು ತಿರುಮಲಕ್ಕೆ ಬರುತ್ತಾರೆ. ಆದರೆ, ವೆಂಕಟೇಶ್ವರನ ಎದೆಯ ಮೇಲಿರುವ ಅತ್ಯಂತ ಪವಿತ್ರ ಹಾಗೂ ಅಪರೂಪದ ‘ವ್ಯೂಹ ಲಕ್ಷ್ಮಿ ಅಚ್ಚು’ (Vyuha Lakshmi Achu) ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ತಿರುಮಲ ಕ್ಷೇತ್ರದ ಅತ್ಯಂತ ರಹಸ್ಯ ಮತ್ತು ದೈವಿಕ ಲಕ್ಷಣಗಳಲ್ಲಿ ಒಂದಾಗಿದೆ. ವಿಶೇಷ ದಿನಗಳಲ್ಲಿ ಮಾತ್ರ ಭಕ್ತರಿಗೆ ಈ ದಿವ್ಯ ರೂಪವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಗುತ್ತದೆ.

ಏನಿದು ‘ವ್ಯೂಹ ಲಕ್ಷ್ಮಿ ಅಚ್ಚು’?

‘ಅಚ್ಚು’ ಎಂದರೆ ಒಂದು ಮುದ್ರೆ ಅಥವಾ ಪ್ರತಿಕೃತಿ (Replica) ಎಂದರ್ಥ. ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಲ ಎದೆಯ ಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಮಹಾಲಕ್ಷ್ಮಿಯ ದಿವ್ಯ ರೂಪವನ್ನೇ ‘ವ್ಯೂಹ ಲಕ್ಷ್ಮಿ’ ಎಂದು ಕರೆಯಲಾಗುತ್ತದೆ. ಎರಡು ಕೈಗಳಲ್ಲಿ ಕಮಲವನ್ನು ಹಿಡಿದು, ಭಕ್ತರಿಗೆ ಐಶ್ವರ್ಯ ಮತ್ತು ಸಮೃದ್ಧಿಯನ್ನು ಕರುಣಿಸುವ ಭಂಗಿಯಲ್ಲಿ ಅಮ್ಮನವರು ಇಲ್ಲಿದ್ದಾರೆ. ತಿರುಮಲದ ಪೂಜಾ ವಿಧಾನಗಳಿಗೆ ಮೂಲವಾಗಿರುವ ‘ಆಗಮ ಶಾಸ್ತ್ರ’ಗಳಲ್ಲೂ ಈ ವ್ಯೂಹ ಲಕ್ಷ್ಮಿಯ ಬಗ್ಗೆ ಉಲ್ಲೇಖವಿದೆ.

ಸಾಮಾನ್ಯವಾಗಿ ಸ್ವಾಮಿಯ ಎದೆಯನ್ನು ಚಿನ್ನದ ಆಭರಣಗಳು ಮತ್ತು ಹೂವಿನ ಅಲಂಕಾರಗಳಿಂದ ಮುಚ್ಚಲಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ‘ಬಂಗಾರು ಲಕ್ಷ್ಮಿ’ (Bangaru Lakshmi) ಎಂಬ ಚಿನ್ನದ ಪದಕವನ್ನು ಈ ವ್ಯೂಹ ಲಕ್ಷ್ಮಿಯ ರೂಪದ ಮೇಲೆಯೇ ಅಲಂಕರಿಸಲಾಗುತ್ತದೆ. ಹಾಗಾಗಿ ಪ್ರತಿದಿನ ಭಕ್ತರಿಗೆ ಈ ರೂಪ ಕಾಣಿಸುವುದಿಲ್ಲ.

ತಿರುಮಲಕ್ಕೆ ಹೋಗುವ ಭಕ್ತರು ಪ್ಲ್ಯಾನ್ ಮಾಡಿಕೊಂಡು ಹೋದರೆ ವಾರದ ಈ ಎರಡು ದಿನಗಳಲ್ಲಿ ವ್ಯೂಹ ಲಕ್ಷ್ಮಿಯ ದರ್ಶನ ಪಡೆಯಬಹುದು.

ಪ್ರತಿ ಗುರುವಾರ ಸ್ವಾಮಿಯ ಅಲಂಕಾರವನ್ನು ಸರಳಗೊಳಿಸಲಾಗುತ್ತದೆ ಮತ್ತು ಹೆಚ್ಚಿನ ಆಭರಣಗಳನ್ನು ತೆಗೆಯಲಾಗುತ್ತದೆ. ಈ ಸಮಯದಲ್ಲಿ ವ್ಯೂಹ ಲಕ್ಷ್ಮಿಯ ರೂಪವು ಭಕ್ತರಿಗೆ ಗೋಚರಿಸುತ್ತದೆ.

ಶುಕ್ರವಾರದಂದು ನಡೆಯುವ ಪವಿತ್ರ ಅಭಿಷೇಕದ ಸಮಯದಲ್ಲಿ ಚಿನ್ನದ ಲಕ್ಷ್ಮಿ ಪದಕವನ್ನು ಹೊರಗೆ ತೆಗೆಯಲಾಗುತ್ತದೆ. ಈ ವೇಳೆ ವ್ಯೂಹ ಲಕ್ಷ್ಮಿಗೆ ವಿಶೇಷ ಅಭಿಷೇಕ ನಡೆಯುವುದರಿಂದ ಅಮ್ಮನವರ ರೂಪವನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಶುಕ್ರವಾರ ನಡೆಯುವ ‘ನಿಜಪಾದ ದರ್ಶನ’ದ ವೇಳೆಯೂ ಈ ಅಪರೂಪದ ದರ್ಶನ ಸಾಧ್ಯ. ಇದರ ಹೊರತಾಗಿ ದೇವಸ್ಥಾನದ ವಿಶೇಷ ಹಬ್ಬಗಳು ಮತ್ತು ಜೀರ್ಣೋದ್ಧಾರ ನಡೆಯುವ ಸಂದರ್ಭಗಳಲ್ಲೂ ಈ ದಿವ್ಯ ರೂಪವನ್ನು ಕಣ್ತುಂಬಿಕೊಳ್ಳಬಹುದು.

ವ್ಯೂಹ ಲಕ್ಷ್ಮಿ ಅಚ್ಚುಗೆ ಪ್ರತಿದಿನ ತಿರುಮಲದ ಅರ್ಚಕರು ವಿಶೇಷ ಪೂಜೆಗಳನ್ನು ಮಾಡುತ್ತಾರೆ. ವಿಷ್ಣು ಸಹಸ್ರನಾಮ ಅರ್ಚನೆಯ ನಂತರ, ಲಕ್ಷ್ಮಿ ದೇವಿಗೆ ತುಳಸಿ ದಳಗಳನ್ನು ಅರ್ಪಿಸುತ್ತಾ ‘ಷೋಡಶ ನಾಮ ಸ್ತೋತ್ರ’ವನ್ನು ಪಠಿಸಲಾಗುತ್ತದೆ. ಶುಕ್ರವಾರದ ವಿಶೇಷ ಪೂಜೆಯಲ್ಲಿ ‘ಶ್ರೀ ಸೂಕ್ತಂ’ ಪಠಣದೊಂದಿಗೆ ಅರಿಶಿಣ, ಶ್ರೀಗಂಧ ಮತ್ತು ಪವಿತ್ರ ತೀರ್ಥದಿಂದ ಅಭಿಷೇಕ ಮಾಡಲಾಗುತ್ತದೆ.

ಭಕ್ತರ ನಂಬಿಕೆಯ ಪ್ರಕಾರ, ಈ ವ್ಯೂಹ ಲಕ್ಷ್ಮಿಯ ಪವಿತ್ರ ಅಚ್ಚು ಅಥವಾ ಅದರ ಪ್ರತಿಕೃತಿಯನ್ನು (Holy Replica) ಮನೆಯಲ್ಲಿಟ್ಟು ಪೂಜಿಸಿದರೆ ಧನಲಾಭ, ನೆಮ್ಮದಿ ಮತ್ತು ಪಾಸಿಟಿವ್ ಎನರ್ಜಿ (Positive Energy) ಸಿಗುತ್ತದೆ. ಪ್ರಸ್ತುತ ತಿರುಮಲ ತಿರುಪತಿ ದೇವಸ್ಥಾನಂ (TTD) ಈ ವ್ಯೂಹ ಲಕ್ಷ್ಮಿ ಅಚ್ಚನ್ನು ಎಲ್ಲಿಯೂ ಮಾರಾಟ ಮಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಇಂತಹ ಪ್ರತಿಕೃತಿಗಳು ನಕಲಿ ಆಗಿರುವ ಸಾಧ್ಯತೆ ಇರುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed