Last Updated:
ತಮಿಳುನಾಡಿನ ಹಣಕಾಸು ಸಚಿವೆ ಇತ್ತೀಚೆಗೆ ಶ್ವೇತ ಪತ್ರ ಬಿಡುಗಡೆ ಮಾಡಿದ್ದು ಇದರಲ್ಲಿ ರಾಜ್ಯದ ಒಟ್ಟು ಸಾಲ, ತಲಾ ಒಬ್ಬೊಬ್ಬರ ಮೇಲಿನ ಸಾಲದ ಮಾಹಿತಿ ವಿವರವಾಗಿ ತಿಳಿಸಲಾಗಿದೆ.
ತಮಿಳುನಾಡಿನ (Tamil Nadu) ಹಣಕಾಸು ಸಚಿವೆ ಮೇರಿ ವಿಲ್ಸನ್ ಇತ್ತೀಚೆಗೆ ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಗಣನೀಯ ಆರ್ಥಿಕ ಕುಸಿತ ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಬಾಕಿ ಸಾಲಗಳು ಏಪ್ರಿಲ್ 2021 ರಲ್ಲಿ 5.13 ಲಕ್ಷ ಕೋಟಿ ರೂ.ಗಳಿಂದ ಮಾರ್ಚ್ 2026 ರ ವೇಳೆಗೆ ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿ ಹೇಳಿದೆ. ಸಾರ್ವಜನಿಕ ವಲಯದ ಸಂಸ್ಥೆಗಳ ಸಾಲಗಳನ್ನು ಒಳಗೊಂಡಂತೆ, ತಮಿಳುನಾಡು ಸರ್ಕಾರಕ್ಕೆ ಒಟ್ಟು 13.18 ಲಕ್ಷ ಕೋಟಿ ರೂ. ಸಾಲ ಇರುವುದಾಗಿ ಅಂದಾಜಿಸಲಾಗಿದೆ.
ಹೆಚ್ಚುತ್ತಿರುವ ಸಾಲ, ಹೆಚ್ಚುತ್ತಿರುವ ಬಡ್ಡಿ, ಆದಾಯ ಕೊರತೆ, ಕಡಿಮೆಯಾಗುತ್ತಿರುವ ತೆರಿಗೆ, ಹೆಚ್ಚುತ್ತಿರುವ ಬದ್ಧ ವೆಚ್ಚ, ಹೆಚ್ಚಿನ ಅನಿಶ್ಚಿತ ಹೊಣೆಗಾರಿಕೆ ಸೇರಿ ಇವೆಲ್ಲವೂ ಸಾಲ ಹೆಚ್ಚಾಗಲು ಕಾರಣ ಎಂದು ಶ್ವೇತಪತ್ರ ಗುರುತಿಸಿದೆ.
ವರದಿಯ ಪ್ರಕಾರ, ಬಡ್ಡಿ ಪಾವತಿ, ಸಂಬಳಗಳು ಮತ್ತು ಪಿಂಚಣಿಗಳು ಈಗ ಆದಾಯದ ಶೇಕಡಾ 64.4 ರಷ್ಟಿದೆ, ಆದರೆ ವಾರ್ಷಿಕ ಬಡ್ಡಿ ಬಿಲ್ 2021-22 ರಲ್ಲಿ 41,564 ಕೋಟಿ ರೂ.ಗಳಿಂದ 2025-26 ರಲ್ಲಿ 67,050 ಕೋಟಿ ರೂ.ಗಳಿಗೆ ಏರಿದೆ (ಪೂರ್ವ-ವಾಸ್ತವಿಕ).
ತಮಿಳುನಾಡಿನ ಹಣಕಾಸಿನ ಬಗ್ಗೆ ಸಾಕ್ಷಿ ಆಧಾರಿತ ಮೌಲ್ಯಮಾಪನವನ್ನು ಜನರಿಗೆ ತಿಳಿಸುವುದು ಈ ದಾಖಲೆಯ ಗುರಿಯಾಗಿದೆ. ಆದಾಯ ಕ್ರೋಢೀಕರಣ, ಆಡಳಿತಾತ್ಮಕ ದಕ್ಷತೆ ಮತ್ತು ಲೀಕೇಜ್ ತಡೆಯುವ ಪ್ರಯತ್ನಗಳ ಮೂಲಕ ಹಣಕಾಸಿನ ಸವಾಲುಗಳನ್ನು ಎದುರಿಸಲು ಸರ್ಕಾರ ಪ್ರತಿಜ್ಞೆ ಮಾಡಿದೆ ಎಂದು ಸರ್ಕಾರ ಹೇಳಿದೆ.
ತಲಾ ಹೊಣೆಗಾರಿಕೆ ರೂ. 1,28,934 ಕ್ಕೆ ಏರಿದೆ. ಸಮಾನ ರಾಜ್ಯಗಳು ತಮ್ಮ ಸಾಲ-ಜಿಎಸ್ಡಿಪಿ ಅನುಪಾತವನ್ನು ಕಡಿಮೆ ಮಾಡಿದವು. ಆದರೆ ತಮಿಳುನಾಡು ಹಾಗೆ ಮಾಡಲಿಲ್ಲ. ತಮಿಳುನಾಡಿನ ಬಡ್ಡಿ ಹೊರೆ ಅದರ ಸಮಾನವಾಗಿರುವ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ಶ್ವೇತಪತ್ರ ಹೇಳಿದೆ.
ಇದು ಗುಜರಾತ್ ಮತ್ತು ಮಹಾರಾಷ್ಟ್ರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ, ಗುಜರಾತ್ ಹೆಚ್ಚುವರಿ ಆದಾಯ ವರದಿ ಮಾಡಿದೆ. ಇದಲ್ಲದೆ, ತಮಿಳುನಾಡಿನ ತೆರಿಗೆ ಪ್ರಯತ್ನವು ಗಮನಾರ್ಹವಾಗಿ ದುರ್ಬಲಗೊಂಡಿದೆ ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.
2021-22ರಲ್ಲಿ GSDP ಯ ಸುಮಾರು ಶೇಕಡಾ 10 ರಿಂದ 2025-26ರಲ್ಲಿ ಶೇಕಡಾ 8.32 ಕ್ಕೆ ಒಟ್ಟು ಆದಾಯ ಇಳಿಕೆಯಾಗಿದೆ. ರಾಜ್ಯದ ಸ್ವಂತ ತೆರಿಗೆ ಆದಾಯ-GSDP ಅನುಪಾತವು ಕನಿಷ್ಠ ಶೇಕಡಾ 5.45 ಕ್ಕೆ ಇಳಿದಿದೆ. ವರದಿಯ ಪ್ರಕಾರ, ಇದು 2022-23ಕ್ಕೆ ಹೋಲಿಸಿದರೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 51,000 ಕೋಟಿ ರೂ.ಗಳ ಅಂದಾಜು ಆದಾಯ ನಷ್ಟಕ್ಕೆ ಕಾರಣವಾಗಿದೆ.
Bangalore [Bangalore],Bangalore,Karnataka













