Last Updated:
Swami Bhadreshdas: ಭಾರತದ ಶಾಸ್ತ್ರೀಯ ಜ್ಞಾನ ಸಂಪ್ರದಾಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಗೌರವಿಸಿ ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು BAPS ವಿದ್ವಾಂಸ ಸ್ವಾಮಿ ಭದ್ರೇಶದಾಸ್ ಅವರನ್ನು ‘ವೇದಾಂತವಿದ್ಯಾ-ವಿಶ್ವಗುರು’ ಎಂದು ಗೌರವಿಸಿದೆ.
ನವದೆಹಲಿ: ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು (Central Sanskrit University) ಬಿಎಪಿಎಸ್ (BAPS) ವಿದ್ವಾಂಸ ಸ್ವಾಮಿ ಭದ್ರೇಶದಾಸ್ (Swami Bhadreshdas) ಅವರಿಗೆ ವಿಶಿಷ್ಟ ಗೌರವವನ್ನು ನೀಡಿದೆ. ಭಾರತದ ಶಾಸ್ತ್ರೀಯ ಜ್ಞಾನ ಸಂಪ್ರದಾಯಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಗೌರವಿಸಿ ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು BAPS ವಿದ್ವಾಂಸ ಸ್ವಾಮಿ ಭದ್ರೇಶದಾಸ್ ಅವರನ್ನು ‘ವೇದಾಂತವಿದ್ಯಾ-ವಿಶ್ವಗುರು’ (Vedantavidya-Vishvaguru) ಎಂದು ಗೌರವಿಸಿದೆ. ಪ್ರಸ್ಥಾನತ್ರಯಿಯ ಕುರಿತಾದ ಅವರ ಸಂಸ್ಕೃತ ವ್ಯಾಖ್ಯಾನಗಳು ಮತ್ತು ವೇದಾಂತ ಮತ್ತು ಭಾರತೀಯ ಜ್ಞಾನ ಸಂಪ್ರದಾಯಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.














