Last Updated:
Suvendu Adhikari: ಕಾಳಿಘಾಟ್ ದೇವಸ್ಥಾನದಲ್ಲಿ ಪಶ್ಚಿಮ ಬಂಗಾಳ ಸಿಎಂ ಸುವೇಂದ್ರು ಅಧಿಕಾರಿ ನೆಲದ ಮೇಲೆ ಕುಳಿತು ಸಾಂಪ್ರದಾಯಿಕ ಮತ್ಸ್ಯ ಭೋಗ್ ಅನ್ನು ಸೇವಿಸಿದರು. ಇದರಲ್ಲಿ ಮೀನಿನ ತಲೆ, ಹುರಿದ ಮೀನು ಮತ್ತು ಬಸಂತಿ ಪುಲಾವ್ ಸೇರಿವೆ. ಕಾಳಿಘಾಟ್ನಲ್ಲಿ ಕಾಳಿ ದೇವಿಗೆ ಮೀನು ಮತ್ತು ಮಾಂಸವನ್ನು ಸಾಂಪ್ರದಾಯಿಕವಾಗಿ ಅರ್ಪಿಸಲಾಗುತ್ತದೆ, ನಂತರ ಭಕ್ತರಿಗೆ ನೈವೇದ್ಯಗಳನ್ನು ವಿತರಿಸಲಾಗುತ್ತದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (West Bengal CM) ಸುವೇಂದು ಅಧಿಕಾರಿ (Suvendu Adhikari) ಅವರು ಕೌಶಿಕಿ ಅಮವಾಸ್ಯೆಯ (Kaushiki Amavasya) ಸಂದರ್ಭದಲ್ಲಿ ಕೋಲ್ಕತ್ತಾದ (Kolkata) ಕಾಳಿಘಾಟ್ ದೇವಸ್ಥಾನದಲ್ಲಿ (Kalighat Temple) ಕಾಳಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ನಂತರ ದೇವಾಲಯದ ಸಾಂಪ್ರದಾಯಿಕ ಮತ್ಸ್ಯ ಭೋಗ್ನಲ್ಲಿ (Matsya Bhog) ಭಾಗವಹಿಸಿದರು. ಅಂದರೆ ದೇವಸ್ಥಾನದ ಸಂಪ್ರದಾಯದಂತೆ ಮೀನು ಪ್ರಸಾದ ಹಾಗೂ ಬಸಂತಿ ಪುಲಾವ್ ಸೇವಿಸಿದರು.














