Last Updated:
ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service) ಮತ್ತೆ ಪುನರಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ (Govt) ವಿಶೇಷ ಪ್ರಯತ್ನ ಮತ್ತು ಅನುದಾನದ ನೆರವಿನಿಂದ ಈ ಮಹತ್ವದ ವಾಯು ಸಂಪರ್ಕಕ್ಕೆ ಮರುಜೀವ ಸಿಕ್ಕಿದ್ದು, ಪ್ರಯಾಣಿಕರಲ್ಲಿ ಸಂತಸ ಮನೆಮಾಡಿದೆ.
ಬೆಂಗಳೂರು-ಕಲಬುರಗಿ: ಬೆಂಗಳೂರಿನಿಂದ ಸಂಜೆ 6ಕ್ಕೆ ಹೊರಟು 7.10ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 8.50ಕ್ಕೆ ಬೆಂಗಳೂರು ತಲುಪಲಿದೆ.
ಕಳೆದ ಅಕ್ಟೋಬರ್ ನಲ್ಲಿ ಸ್ಥಗಿತಗೊಂಡಿದ್ದ ಈ ಸೇವೆಯು ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದೀಗ ಉಡಾನ್ ಯೋಜನೆಯಡಿ ಮತ್ತು ರಾಜ್ಯ ಸರ್ಕಾರದ ವಿಜಿಎಫ್ ನೆರವಿನಿಂದ ವಿಮಾನ ಸೇವೆ ಪುನರಾರಂಭವಾಗುತ್ತಿರುವುದು ಈ ಭಾಗದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಿದೆ. ಪ್ರಿಯಾಂಕ್ ಖರ್ಗೆ ಮತ್ತು ಈಶ್ವರ್ ಖಂಡ್ರೆ ಅವರ ನಿರಂತರ ಪ್ರಯತ್ನದ ಫಲವಾಗಿ ಮತ್ತೆ ಕಲ್ಯಾಣ ಕರ್ನಾಟಕವು ಬೆಂಗಳೂರಿನೊಂದಿಗೆ ಆಕಾಶ ಮಾರ್ಗದಲ್ಲಿ ಬೆಸೆಯಲಿದೆ.
Bangalore [Bangalore],Bangalore,Karnataka
May 21, 2026 11:29 AM IST













